ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಕಂಸನ ಆರ್ಭಟಕ್ಕೆ ಪಂಚೆ ಒದ್ದೆಯಾಗಿತ್ತು!

ಪೋಸ್ಟ್ ಶೇರ್ ಮಾಡಿ
ಅಶ್ವತ್ಥ ನಾರಾಯಣ
ನಟ

ರಂಗಭೂಮಿ ಹಿನ್ನೆಲೆಯ ಚಿತ್ರನಟ ಅಶ್ವತ್ಥ ನಾರಾಯಣ ಅವರಿಗೆ ಇಂದು (ಮೇ 22) 88 ವರ್ಷ ತುಂಬಿತು. ವರನಟ ರಾಜಕುಮಾರ್ ಅವರ ತಂದೆ, ರಂಗನಟ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರೊಂದಿಗೆ ನಾಟಕಗಳಲ್ಲಿ ಅಶ್ವತ್ಥರು ಬಾಲನಟನಾಗಿ ನಟಿಸಿದ್ದರು. ಆಗಿನ ಅವರ ಒಂದು ನೆನಪು.

ನನ್ನ ತಂದೆ ರಂಗಪ್ಪನವರು ಗುಬ್ಬಿ ನಾಟಕ ಕಂಪನಿಯ ಪ್ರಮುಖ ಕಲಾವಿದರಲ್ಲೊಬ್ಬರು. ಹತ್ತನ್ನೆರೆಡರ ಹರೆಯದಲ್ಲೇ ನಾನು ಕೂಡ ಪಾತ್ರಗಳಲ್ಲಿ ನಟಿಸಲು ಆರಂಭಿಸಿದ್ದೆ. ಅದು 1948ರ ಸಂದರ್ಭ. ಮೊದಲ ಬಾರಿಗೆ ನಾನು `ಶ್ರೀ ಕೃಷ್ಣಲೀಲಾ’ ನಾಟಕದಲ್ಲಿ ಕೃಷ್ಣನ ಪಾತ್ರ ಹಾಕಿದ್ದೆ. ರಾಜಕುಮಾರ್ (ಆಗ ರಾಜ್‍ಗೆ 15 ವರ್ಷ) ಬಲರಾಮನ ಪಾತ್ರದಲ್ಲಿದ್ದರು. ಆಗ ರಾಜಕುಮಾರ್ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಕಂಸನ ಪಾತ್ರ ಬಹು ಜನಪ್ರಿಯವಾಗಿತ್ತು.

ನಾಟಕ ಆರಂಭವಾಗಿ ಕೆಲವೇ ನಿಮಿಷಗಳಾಗಿತ್ತು. ಅದು ಕಂಸನನ್ನು ಸಂಹರಿಸುವ ಸನ್ನಿವೇಶ. ನಾನು ಮತ್ತು ರಾಜ್ ವೇದಿಕೆಯಲ್ಲಿದ್ದೆವು. ರಂಗದ ಮೇಲೆ ಕಂಸನ ಪಾತ್ರದಲ್ಲಿದ್ದ ಪುಟ್ಟಸ್ವಾಮಯ್ಯನವರ ಪ್ರವೇಶವಾಯ್ತು. ಮೆಟ್ಟಿಲುಗಳನ್ನಿಳಿದು ಅವರು ಇಳಿದು ಬರುವ ರಭಸಕ್ಕೆ ನನ್ನ ಎದೆ ಝೆಲ್ಲೆಂದಿತು. ಅವರ ಭಯಂಕರ ನೋಟ, ವೀರಾವೇಶದ ಮಾತುಗಳನ್ನು ಕೇಳುತ್ತಿದ್ದಂತೆ ಕಣ್ಣು ಮಂಜಾದಂತಾಗಿ ಅಲ್ಲೇ ಕುಸಿದೆ. ಉಟ್ಟಿದ್ದ ಕಚ್ಚೆಪಂಚೆ ಒದ್ದೆಯಾಯ್ತು!

ಆ ಸನ್ನಿವೇಶದಲ್ಲಿ ಕೃಷ್ಣನಾದ ನಾನೇ ಕಂಸನನ್ನು ಸಂಹರಿಸಬೇಕಿತ್ತು. ಆದರೆ ಪಂಚೆ ಒದ್ದೆಯಾಗಿದ್ದರಿಂದ ನಾನು ಎದ್ದು ನಿಲ್ಲುವ ಸ್ಥಿತಿಯಲ್ಲಿರಲಿಲ್ಲ. ಆಗೊಂದು ಉಪಾಯ ಹೊಳೆಯಿತು. ಕುಳಿತಲ್ಲಿಂದಲೇ, `ಅಣ್ಣಾ ಬಲರಾಮ, ಕಂಸನನ್ನು ನೀವೇ ಸಂಹರಿಸಿಬಿಡಿ..!’ ಎಂದೆ. ನನ್ನ ಪಜೀತಿ ಅರ್ಥ ಮಾಡಿಕೊಂಡ ಬಲರಾಮನ ಪಾತ್ರದಲ್ಲಿದ್ದ ರಾಜ್ ಸನ್ನಿವೇಶವನ್ನು ಸೂಕ್ಷ್ಮವಾಗಿ ನಿಭಾಯಿಸಿದರು. ಆ ಸನ್ನಿವೇಶ ಮುಗಿದು ಪರದೆ ಬೀಳುತ್ತಿದ್ದಂತೆ ಒದ್ದೆಯಾಗಿದ್ದ ಪಂಚೆ ಮುದುರಿಕೊಂಡು ಮೇಕಪ್ ಕೋಣೆಗೆ ಓಡಿದೆ!

ರಂಗನಟ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ

ಮತ್ತಷ್ಟು ಸೋಜಿಗ

ಜನಪ್ರಿಯ ಪೋಸ್ಟ್ ಗಳು

ರಾಮಕೃಷ್ಣ ಅಲ್ಲ, ರೂಂ ಕೃಷ್ಣ!

ಬಾಲಣ್ಣ ತಮ್ಮ  ನೆಚ್ಚಿನ ಬರ್ಕ್‍ಲೀ ಬ್ರಾಂಡ್ ಸಿಗರೇಟು ಸೇದುವ ಶೈಲಿಯೂ ನನಗೆ ಇಷ್ಟವಾಗುತ್ತಿತ್ತು. ಬಾಲಣ್ಣ ಸೇದಿದ ಸಿಗರೇಟಿನ ಬೂದಿ ಕೆಳಗೆ

ದಾರಿಯುದ್ದಕ್ಕೂ ಜನ ಸೆಲ್ಯೂಟ್ ಹೊಡೆದರು!

ಡಾ.ರಾಜಕುಮಾರ್ ಅಭಿನಯದ `ದ್ರುವತಾರೆ’ ಚಿತ್ರದಲ್ಲಿ ನನಗೆ ಪೊಲೀಸ್‌ ಇನ್‍ಸ್ಪೆಕ್ಟರ್ ಪಾತ್ರವಿತ್ತು. ಕೆಂಗೇರಿ ಮತ್ತು ರಾಮನಗರ ಮಧ್ಯೆಯಿದ್ದ ಗ್ರಾಮವೊಂದರಲ್ಲಿ ಶೂಟಿಂಗ್. ಈ

ಕಲ್ಲು – ಮುಳ್ಳೆನ್ನದೆ ಓಡಿದ್ದೆ…

ಚಿತ್ರೀಕರಣದಲ್ಲಿ ಆಗ ನನ್ನಲ್ಲಿರುತ್ತಿದ್ದ ಹುರುಪು, ಉತ್ಸಾಹ ನೆನಪಿಸಿಕೊಂಡರೆ ಈಗಲೂ ಖುಷಿಯಾಗುತ್ತದೆ. ಹೆಚ್ಚಿನ ತಂತ್ರಜ್ಞಾನ, ಅನುಕೂಲತೆಗಳು ಇಲ್ಲದ ಅಂದಿನ ಸಂದರ್ಭಗಳಲ್ಲಿ ಈ