
ಚಿತ್ರಸಾಹಿತಿ
ಸೀನ್ ಕಂಟ್ಯೂನಿಟಿಗೆ ತೊಂದರೆಯಾಯ್ತು. ನಿರ್ದೇಶಕರು ಬೇಡಿಕೊಂಡರೂ ಸಖಿಯ ಕೋಪ ತಣ್ಣಗಾಗಲಿಲ್ಲ. ಕ್ಯಾಮರಾಮನ್ ಖುದ್ದಾಗಿ ಬಂದು ಕ್ಷಮೆಯಾಚಿಸುವವರೆಗೂ ಬರೋಲ್ಲ ಎಂದು ಆಕೆ ಪಟ್ಟು ಹಿಡಿದಳು. ಭರ್ಜರಿ ಮೇಕಪ್ನಲ್ಲಿದ್ದ ನಾಗೇಂದ್ರರಾಯರು ಸೆಖೆ ತಾಳಲಾರದೆ ಒದ್ದಾಡುತ್ತಿದ್ದರು.
`ವೀರಕೇಸರಿ’ ಚಿತ್ರದ ಒಂದು ಸನ್ನಿವೇಶ. ಮಹಾರಾಜನ ಪಾತ್ರದಲ್ಲಿ ನಾಗೇಂದ್ರರಾಯರು ಸಿಂಹಾಸನದ ಮೇಲೆ ಕುಳಿತಿರುತ್ತಾರೆ. ಅವರ ಅಕ್ಕ – ಪಕ್ಕ ನಿಂತ ಇಬ್ಬರು ಸಖಿಯರು ಚಾಮರ ಬೀಸಬೇಕು. `ವಿಪರೀತ ಸೆಖೆ. ಸ್ಟುಡಿಯೋದಲ್ಲಿ ಫ್ಯಾನ್ಗಳೂ ಇಲ್ಲ. ನೀವು ಸ್ವಲ್ಪ ಜೋರಾಗಿ ಚಾಮರ ಬೀಸ್ರಮ್ಮಾ..’ ಎಂದು ಸಖಿಯರ ಪಾತ್ರಗಳಲ್ಲಿದ್ದ ನಟಿಯರಿಗೆ ನಟ ನಾಗೇಂದ್ರರಾಯರು ಮೊದಲೇ ಹೇಳಿದ್ದರು. ನಿರ್ದೇಶಕರು ಆ್ಯಕ್ಷನ್ ಎನ್ನುತ್ತಿದ್ದಂತೆ ಶೂಟಿಂಗ್ ಶುರುವಾಯಿತು. ಚಾಮರ ಬೀಸುತ್ತಿದ್ದ ಸಖಿಯೊಬ್ಬಳು ಫ್ರೇಮ್ನಿಂದ ಹೊರಗಿದ್ದಳೆಂದು ಕಾಣುತ್ತದೆ. ಕೋಪಗೊಂಡ ಕ್ಯಾಮರಾಮನ್, `ನಿಂಗೆ ಸರಿಯಾಗಿ ಚಾಮರ ಬೀಸೋಕೂ ಬರೋಲ್ವೆ? ನಿಮ್ಮನ್ನು ಎಲ್ಲಿಂದ ಹಿಡ್ಕೊಂಡು ಬಂದಿದಾರೆ’ ಎಂದು ಬಡಬಡಿಸಿದ. ಸಿಟ್ಟು ಮಾಡಿಕೊಂಡ ಸಖಿ ಚಾಮರ ಕೆಳಗಿಟ್ಟು ಹೊರಟೇ ಹೋದಳು!
ಇದೀಗ ಸೀನ್ ಕಂಟ್ಯೂನಿಟಿಗೆ ತೊಂದರೆಯಾಯ್ತು. ನಿರ್ದೇಶಕರು ಬೇಡಿಕೊಂಡರೂ ಸಖಿಯ ಕೋಪ ತಣ್ಣಗಾಗಲಿಲ್ಲ. ಕ್ಯಾಮರಾಮನ್ ಖುದ್ದಾಗಿ ಬಂದು ಕ್ಷಮೆಯಾಚಿಸುವವರೆಗೂ ಬರೋಲ್ಲ ಎಂದು ಆಕೆ ಪಟ್ಟು ಹಿಡಿದಳು. ಭರ್ಜರಿ ಮೇಕಪ್ನಲ್ಲಿದ್ದ ನಾಗೇಂದ್ರರಾಯರು ಸೆಖೆ ತಾಳಲಾರದೆ ಒದ್ದಾಡುತ್ತಿದ್ದರು. ಇಂಥ ಹೊತ್ತಿನಲ್ಲೂ ನಟ ಬಾಲಕೃಷ್ಣ ತಮಾಷೆ ಮಾಡುವುದನ್ನು ಬಿಡಲಿಲ್ಲ. `ಏನ್ ನಾಗೇಂದ್ರರಾಯರೇ, ನಿಮಗೆ ನಿಮ್ಮ ಪಕ್ಕದಲ್ಲಿರೋ ಸಖಿಯರನ್ನು ಸರಿಯಾಗಿ ಇಟ್ಕೊಳ್ಳೋಕೆ ಆಗೋಲ್ವೇ!?’ ಎಂದು ಛೇಡಿಸಿದರು ಬಾಲಣ್ಣ. ಸಿಂಹಾಸನದಿಂದ ಇಳಿದ ರಾಯರು ನೇರವಾಗಿ ಕ್ಯಾಮರಾಮನ್ ಎದುರು ಹೋಗಿ ನಿಂತರು. ಅವರ ಕೋಪ ಅರಿತ ಕ್ಯಾಮರಾಮನ್ ತಾನೇ ಖುದ್ದಾಗಿ ಓಡಿ ಹೋಗಿ ಸಖಿಯ ಕ್ಷಮೆಯಾಚಿಸಿದ. ಬಹಳಷ್ಟು ಹೊತ್ತಿನವರೆಗೆ ನಡೆದ ಈ ಡ್ರಾಮಾ ನಂತರ ಕೊನೆಗೂ ಶೂಟಿಂಗ್ಗೆ ಚಾಲನೆ ಸಿಕ್ಕಿತು.