ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಹಿನ್ನೆಲೆ ಅರಿಯದ ಸೆಟ್‌ನವರು ಕಕ್ಕಾಬಿಕ್ಕಿ!

ಪೋಸ್ಟ್ ಶೇರ್ ಮಾಡಿ
ಬಿ.ಜಯಾ, ನಟಿ

ಆರಂಭದಲ್ಲಿ ಕನ್ನಡ ಸಿನಿಮಾಗಳು ತಯಾರಾಗುತ್ತಿದ್ದುದು ಮದರಾಸಿನಲ್ಲಿ. ಕನ್ನಡದ ಕಲಾವಿದರೆಲ್ಲರೂ ಅಲ್ಲಿಯೇ ಬೀಡುಬಿಟ್ಟಿದ್ದರು. ಆಗ ನಾನು ನಟಿ ಲೀಲಾವತಿ ಅವರೊಂದಿಗಿದ್ದೆ. ದೂರದ ಊರಿನಲ್ಲಿ ಆಶ್ರಯ ಕೊಟ್ಟಿದ್ದ ಲೀಲಮ್ಮನೆಂದರೆ ನನಗೆ ಅತಿಯಾದ ಅಕ್ಕರೆ. ಚಿಕ್ಕವಳಾದ ನಾನೆಂದರೆ ಲೀಲಾವತಿ ಅವರಿಗೂ ಪ್ರೀತಿ. ಲೀಲಾವತಿ ಅವರನ್ನು ನಾನು `ಅಕ್ಕ ಅಕ್ಕ’ ಎಂದೇ ಕರೆಯುತ್ತಿದ್ದುದು. ಕೆಲವೊಮ್ಮೆ ಕ್ಯಾಮರಾ ಎದುರೂ `ಅಕ್ಕ’ ಎಂದು ಕರೆದು ನಿರ್ದೇಶಕರಿಂದ ಬಯ್ಯಿಸಿಕೊಳ್ಳುತ್ತಿದ್ದುದೂ ಇತ್ತು!

ಅದೊಮ್ಮೆ ಮದರಾಸಿನ ಸ್ಟುಡಿಯೋದಲ್ಲಿ `ವೀರಕೇಸರಿ’ ಚಿತ್ರದ ಸನ್ನಿವೇಶವೊಂದನ್ನು ಚಿತ್ರಿಸಲಾಗುತ್ತಿತ್ತು. ಚಿತ್ರದಲ್ಲಿ ಲೀಲಾವತಿ ಅಕ್ಕ ರಾಜಕುಮಾರಿ. ಸಖಿಯಾಗಿ ನಾನು ನಟಿಸುತ್ತಿದ್ದೆ. ಸನ್ನಿವೇಶವೊಂದರಲ್ಲಿ ನನ್ನ ಕೆನ್ನೆಗೆ ಲೀಲಾವತಿ ಅಕ್ಕ ಹೊಡೆಯಬೇಕಿತ್ತು. ಆಕಸ್ಮಾತಾಗಿ ಏಟು ಸ್ವಲ್ಪ ಜೋರಾಗಿಯೇ ಬಿತ್ತು. ಸದಾ `ಅಕ್ಕ’ ಎನ್ನುತ್ತಿದ್ದ ನಾನು ಆಗ `ಅಮ್ಮ’ ಎಂದುಬಿಟ್ಟೆ! ಮರುಕ್ಷಣವೇ ಏನೋ ನೆನಪಿಸಿಕೊಂಡಂತೆ ನಾನು, ಲೀಲಾವತಿ ಅಕ್ಕ ನಗತೊಡಗಿದೆವು. ಇದರ ಹಿನ್ನೆಲೆ ಅರಿಯದ ಸೆಟ್‍ನವರು ಕಕ್ಕಾಬಿಕ್ಕಿ!

ಮತ್ತಷ್ಟು ಸೋಜಿಗ

ಮೀಸೆ ಕಾಣದಂತೆ ಟೇಪ್ ಅಂಟಿಸಬಹುದು!

ನಿರ್ದೇಶಕರು ಹೆಚ್ಚು ಅವಧಿಯ ಶಾಟ್‍ಗಳನ್ನು ಚಿತ್ರಿಸುತ್ತಿದ್ದರೆ ನಿರ್ಮಾಪಕರು ಕೈಕೈ ಹಿಸುಕಿಕೊಳ್ಳುತ್ತಿದ್ದರು. ರೀಲ್‍ಗಳು ಪೋಲಾಗುತ್ತವೆಂದು

ಜನಪ್ರಿಯ ಪೋಸ್ಟ್ ಗಳು

ದಾರಿಯುದ್ದಕ್ಕೂ ಜನ ಸೆಲ್ಯೂಟ್ ಹೊಡೆದರು!

ಡಾ.ರಾಜಕುಮಾರ್ ಅಭಿನಯದ `ದ್ರುವತಾರೆ’ ಚಿತ್ರದಲ್ಲಿ ನನಗೆ ಪೊಲೀಸ್‌ ಇನ್‍ಸ್ಪೆಕ್ಟರ್ ಪಾತ್ರವಿತ್ತು. ಕೆಂಗೇರಿ ಮತ್ತು ರಾಮನಗರ ಮಧ್ಯೆಯಿದ್ದ ಗ್ರಾಮವೊಂದರಲ್ಲಿ ಶೂಟಿಂಗ್. ಈ

ಕೋಪ ಮಾಡಿಕೊಂಡ ಉದಯ್‌ಕುಮಾರ್‌

ಐದಾರು ಟೇಕ್‍ಗಳಾದರೂ ಶಾಟ್ ಓಕೆಯಾಗಲಿಲ್ಲ. `ಜಿ.ವಿ.ಅಯ್ಯರ್ ಅವರು ಮಾಡುವಂಥ ಪಾತ್ರವನ್ನು ಈ ಹುಡುಗನಿಗೆ ಕೊಟ್ಟಿದ್ದೀರಿ..’ ಎನ್ನುತ್ತಾ ಉದಯಕುಮಾರ್ ಕೋಪ ಮಾಡಿಕೊಂಡು

ನಾನ್ಯಾವಾಗ ನಿಮ್ ಸೆರಗು ತಗೊಂಡೆ!?

ಅತಿ ಹೆಚ್ಚು ಸಿನಿಮಾಗಳಲ್ಲಿ ಡಾ.ರಾಜಕುಮಾರ್ ಅವರಿಗೆ ನಾಯಕಿಯಾದ ಹೆಗ್ಗಳಿಕೆ ಜಯಂತಿ ಅವರದು. ‘ದೇವರು ಕೊಟ್ಟ ತಂಗಿ’ ಸಿನಿಮಾ ಚಿತ್ರೀಕರಣದಲ್ಲಿನ ತಮಾಷೆಯೊಂದನ್ನು