ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಮಹಾನಟಿ ಮನೋರಮ

ಪೋಸ್ಟ್ ಶೇರ್ ಮಾಡಿ

‘ಮಾಳಯಿಟ್ಟ ಮಂಗೈ’ (1958) ತಮಿಳು ಚಿತ್ರದೊಂದಿಗೆ ಮನೋರಮ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. 1985ರಲ್ಲಿ ಸಾವಿರ ಸಿನಿಮಾಗಳಲ್ಲಿ ನಟಿಸಿದ ಗಿನ್ನಿಸ್ ದಾಖಲೆ ಅವರ ಹೆಸರಿನಲ್ಲಿತ್ತು. ಇಂದು ಮನೋರಮ (26/10/1937 – 10/10/2015) ಅವರ ಜನ್ಮದಿನ.

  • ಮನೋರಮ ಅವರ ಜನ್ಮನಾಮ ಗೋಪಿಶಾಂತ. ತಂದೆ ಕಾಶಿ ಕಿಲಕುಡಯ್ಯಾರ್‌, ತಾಯಿ ರಾಮಮಿರ್ತಂ. ತಂಜಾವೂರು ಜಿಲ್ಲೆಯ ಮನ್ನಾರ್‌ಗುಡಿ ಅವರ ಹುಟ್ಟೂರು. ಮೊದಲ ಬಾರಿ ನಾಟಕದಲ್ಲಿ ಅಭಿನಯಿಸಿದಾಗ ಅವರಿಗೆ ಹನ್ನೆರೆಡು ವರ್ಷ. ರಂಗ ನಿರ್ದೇಶಕ ತಿರುವೆಂಕಟಂ ಮತ್ತು ಹಾರ್ಮೋನಿಯಂ ಕಲಾವಿದ ತ್ಯಾಗರಾಜನ್‌ ‘ಗೋಪಿಶಾಂತ’ ಹೆಸರನ್ನು ‘ಮನೋರಮ’ ಎಂದು ಬದಲಿಸಲು ಸೂಚಿಸಿದರು.
ತಮಿಳು ಚಿತ್ರವೊಂದರಲ್ಲಿ ನಟ ನಾಗೇಶ್‌ ಅವರೊಂದಿಗೆ
  • ‘ಮಾಳಯಿಟ್ಟ ಮಂಗೈ’ (1958) ತಮಿಳು ಚಿತ್ರದೊಂದಿಗೆ ಮನೋರಮ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. 1985ರಲ್ಲಿ ಸಾವಿರ ಸಿನಿಮಾಗಳಲ್ಲಿ ನಟಿಸಿದ ಗಿನ್ನಿಸ್ ದಾಖಲೆ ಅವರ ಹೆಸರಿನಲ್ಲಿತ್ತು. ಪ್ರಮುಖವಾಗಿ ತಮಿಳು ಸಿನಿಮಾಗಳಲ್ಲಿ ನಟಿಸಿರುವ ಅವರು ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳ 1300ಕ್ಕೂ ಹೆಚ್ಚು ಸಿನಿಮಾಗಳು, ಸಾವಿರಕ್ಕೂ ಹೆಚ್ಚು ರಂಗ ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ಹಲವಾರು ಚಿತ್ರಗಳಲ್ಲಿ ಹಾಡಿದ್ದಾರೆ.
‘ತಿಲ್ಲಾನ ಮೋಹನಾಂಬಳ್‌’ (1968) ತಮಿಳು ಚಿತ್ರದಲ್ಲಿ ನಟ ಶಿವಾಜಿ ಗಣೇಶನ್‌ ಅವರೊಂದಿಗೆ
  • ಶಿವಾಜಿ ಗಣೇಶನ್ ಮತ್ತು ಪದ್ಮಿನಿ ಅಭಿನಯದ ‘ತಿಲ್ಲಾನ ಮೋಹನಾಂಬಳ್‌’ (1968) ಮನೋರಮ ವೃತ್ತಿಬದುಕಿನ ಮೈಲುಗಲ್ಲು. ಈ ಚಿತ್ರದಲ್ಲಿನ ಅವರ ನಟನೆ ಪ್ರೇಕ್ಷಕರು ಹಾಗೂ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಖ್ಯಾತ ತಮಿಳು ನಟರಾದ ನಾಗೇಶ್‌, ರಾಮಸ್ವಾಮಿ, ತೆಂಗೈ ಶ್ರೀನಿವಾಸನ್‌ ಅವರ ಜೋಡಿಯಾಗಿ ಮನೋರಮ ಅವರ ಹಾಸ್ಯಪಾತ್ರಗಳು ಬಹುಜನಪ್ರಿಯ.
‘ನಾಡಿಗನ್‌’ ಚಿತ್ರದಲ್ಲಿ
  • ತಮಿಳುನಾಡು ಮುಖ್ಯಮಂತ್ರಿಗಳಾಗಿದ್ದ ಸಿ.ಎನ್‌.ಅನ್ನಾದೊರೈ ಮತ್ತು ಎಂ.ಕರುಣಾನಿಧಿ ಅವರು ರಚಿಸಿ – ನಿರ್ದೇಶಿಸಿದ ನಾಟಕಗಳಲ್ಲಿ ಮನೋರಮ ನಟಿಸಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ ಎಂ.ಜಿ.ರಾಮಚಂದ್ರನ್‌ ಮತ್ತು ಜಯಲಲಿತಾ ಹಾಗೂ ಆಂಧ್ರದ ಮುಖ್ಯಮಂತ್ರಿಯಾಗಿದ್ದ ಎನ್‌ಟಿಆರ್‌ ಅವರೊಂದಿಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ.
‘ಸಂಸಾರಂ ಅಧು ಮಿನ್ಸಾರಂ’ ಚಿತ್ರದಲ್ಲಿ
  • ಪ್ರೀತಿಯಿಂದ ‘ಆಚ್ಚಿ’ ಎಂದು ಕರೆಸಿಕೊಳ್ಳುವ ಮನೋರಮ ನೂರಕ್ಕೂ ಹೆಚ್ಚು ನಾಟಕಗಳ ಐದು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ಪದ್ಮಶ್ರೀ ಪುರಸ್ಕೃತ ನಟಿ ‘ಪುದಿಯ ಪಥೈ’ (1989) ತಮಿಳು ಚಿತ್ರದ ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.
‘ಚಿನ್ನ ಗೌಂಡರ್’ ಚಿತ್ರದಲ್ಲಿ

ನೆನಪು ಸಾಧನೆ - ಸ್ಫೂರ್ತಿ

ಅಪರೂಪದ ಸಾಧಕ ವೀರಾಸ್ವಾಮಿ

ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ `ಡ್ರೀಮ್‍ಲ್ಯಾಂಡ್’ ಸಿನಿಮಾ ಹಂಚಿಕೆ ಕಚೇರಿ ನಡೆಸುತ್ತಿದ್ದರು. ಅವರಲ್ಲಿ

ಜನಪ್ರಿಯ ಪೋಸ್ಟ್ ಗಳು

ಹಾಸ್ಯನಟ ರತ್ನಾಕರ್ ಚಿತ್ರನಿರ್ದೇಶಕರೂ ಹೌದು

ಕನ್ನಡ ಚಿತ್ರರಂಗ ಕಂಡ ಪ್ರಮುಖ ಹಾಸ್ಯಕಲಾವಿದರಲ್ಲೊಬ್ಬರು ರತ್ನಾಕರ್. ಅವರು ಜನಿಸಿದ್ದು ಕೊಲ್ಲೂರಿನಲ್ಲಿ. ಓದಿದ್ದು ನಾಲ್ಕನೇ ತರಗತಿಯಷ್ಟೆ. ಕಾರಣಾಂತರಗಳಿಂದ ಚಿಕ್ಕಂದಿನಲ್ಲೇ ಅವರು

ಆಡಿಸಿದಾತ…

ಕನ್ನಡ ಸಿನಿಮಾರಂಗದ ಮಹತ್ವದ ಚಿತ್ರಸಾಹಿತಿ ಚಿ.ಉದಯಶಂಕರ್ (18/02/1934 – 02/07/1993) ನಮ್ಮನ್ನಗಲಿದ ದಿನವಿದು. ಅವರೊಂದಿಗೆ ಹತ್ತಿರದಿಂದ ಒಡನಾಡಿದವರು ಲೇಖಕ ಎನ್‌.ಎಸ್‌.ಶ್ರೀಧರಮೂರ್ತಿ.

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ) ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ