ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮಹಾನಟಿ ಮನೋರಮ

ಪೋಸ್ಟ್ ಶೇರ್ ಮಾಡಿ
  • ಮನೋರಮ ಅವರ ಜನ್ಮನಾಮ ಗೋಪಿಶಾಂತ. ತಂದೆ ಕಾಶಿ ಕಿಲಕುಡಯ್ಯಾರ್‌, ತಾಯಿ ರಾಮಮಿರ್ತಂ. ತಂಜಾವೂರು ಜಿಲ್ಲೆಯ ಮನ್ನಾರ್‌ಗುಡಿ ಅವರ ಹುಟ್ಟೂರು. ಮೊದಲ ಬಾರಿ ನಾಟಕದಲ್ಲಿ ಅಭಿನಯಿಸಿದಾಗ ಅವರಿಗೆ ಹನ್ನೆರೆಡು ವರ್ಷ. ರಂಗ ನಿರ್ದೇಶಕ ತಿರುವೆಂಕಟಂ ಮತ್ತು ಹಾರ್ಮೋನಿಯಂ ಕಲಾವಿದ ತ್ಯಾಗರಾಜನ್‌ ‘ಗೋಪಿಶಾಂತ’ ಹೆಸರನ್ನು ‘ಮನೋರಮ’ ಎಂದು ಬದಲಿಸಲು ಸೂಚಿಸಿದರು.
ತಮಿಳು ಚಿತ್ರವೊಂದರಲ್ಲಿ ನಟ ನಾಗೇಶ್‌ ಅವರೊಂದಿಗೆ
  • ‘ಮಾಳಯಿಟ್ಟ ಮಂಗೈ’ (1958) ತಮಿಳು ಚಿತ್ರದೊಂದಿಗೆ ಮನೋರಮ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. 1985ರಲ್ಲಿ ಸಾವಿರ ಸಿನಿಮಾಗಳಲ್ಲಿ ನಟಿಸಿದ ಗಿನ್ನಿಸ್ ದಾಖಲೆ ಅವರ ಹೆಸರಿನಲ್ಲಿತ್ತು. ಪ್ರಮುಖವಾಗಿ ತಮಿಳು ಸಿನಿಮಾಗಳಲ್ಲಿ ನಟಿಸಿರುವ ಅವರು ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳ 1300ಕ್ಕೂ ಹೆಚ್ಚು ಸಿನಿಮಾಗಳು, ಸಾವಿರಕ್ಕೂ ಹೆಚ್ಚು ರಂಗ ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ಹಲವಾರು ಚಿತ್ರಗಳಲ್ಲಿ ಹಾಡಿದ್ದಾರೆ.
‘ತಿಲ್ಲಾನ ಮೋಹನಾಂಬಳ್‌’ (1968) ತಮಿಳು ಚಿತ್ರದಲ್ಲಿ ನಟ ಶಿವಾಜಿ ಗಣೇಶನ್‌ ಅವರೊಂದಿಗೆ
  • ಶಿವಾಜಿ ಗಣೇಶನ್ ಮತ್ತು ಪದ್ಮಿನಿ ಅಭಿನಯದ ‘ತಿಲ್ಲಾನ ಮೋಹನಾಂಬಳ್‌’ (1968) ಮನೋರಮ ವೃತ್ತಿಬದುಕಿನ ಮೈಲುಗಲ್ಲು. ಈ ಚಿತ್ರದಲ್ಲಿನ ಅವರ ನಟನೆ ಪ್ರೇಕ್ಷಕರು ಹಾಗೂ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಖ್ಯಾತ ತಮಿಳು ನಟರಾದ ನಾಗೇಶ್‌, ರಾಮಸ್ವಾಮಿ, ತೆಂಗೈ ಶ್ರೀನಿವಾಸನ್‌ ಅವರ ಜೋಡಿಯಾಗಿ ಮನೋರಮ ಅವರ ಹಾಸ್ಯಪಾತ್ರಗಳು ಬಹುಜನಪ್ರಿಯ.
‘ನಾಡಿಗನ್‌’ ಚಿತ್ರದಲ್ಲಿ
  • ತಮಿಳುನಾಡು ಮುಖ್ಯಮಂತ್ರಿಗಳಾಗಿದ್ದ ಸಿ.ಎನ್‌.ಅನ್ನಾದೊರೈ ಮತ್ತು ಎಂ.ಕರುಣಾನಿಧಿ ಅವರು ರಚಿಸಿ – ನಿರ್ದೇಶಿಸಿದ ನಾಟಕಗಳಲ್ಲಿ ಮನೋರಮ ನಟಿಸಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ ಎಂ.ಜಿ.ರಾಮಚಂದ್ರನ್‌ ಮತ್ತು ಜಯಲಲಿತಾ ಹಾಗೂ ಆಂಧ್ರದ ಮುಖ್ಯಮಂತ್ರಿಯಾಗಿದ್ದ ಎನ್‌ಟಿಆರ್‌ ಅವರೊಂದಿಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ.
‘ಸಂಸಾರಂ ಅಧು ಮಿನ್ಸಾರಂ’ ಚಿತ್ರದಲ್ಲಿ
  • ಪ್ರೀತಿಯಿಂದ ‘ಆಚ್ಚಿ’ ಎಂದು ಕರೆಸಿಕೊಳ್ಳುವ ಮನೋರಮ ನೂರಕ್ಕೂ ಹೆಚ್ಚು ನಾಟಕಗಳ ಐದು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ಪದ್ಮಶ್ರೀ ಪುರಸ್ಕೃತ ನಟಿ ‘ಪುದಿಯ ಪಥೈ’ (1989) ತಮಿಳು ಚಿತ್ರದ ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.
‘ಚಿನ್ನ ಗೌಂಡರ್’ ಚಿತ್ರದಲ್ಲಿ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿತ್ರರಂಗಕ್ಕೆ ಆಸರೆಯಾದ ಅರಸು

ಮೈಸೂರು ಅರಸು ಕುಟುಂಬದವರು ಕೆಂಪರಾಜ ಅರಸ್. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರ ಸಹೋದರ. ಗುಬ್ಬಿ ವೀರಣ್ಣನವರು ನಿರ್ಮಿಸಿದ  `ಜೀವನ

ನಟ, ನಿರ್ಮಾಪಕ ಬಿ.ಎಂ.ವೆಂಕಟೇಶ್

ಬೆಂಗಳೂರು ಸಮೀಪದ ಇಮ್ಮಡಿಹಳ್ಳಿಯ ವೆಂಕಟೇಶ್‌ ಅವರಿಗೆ ಶಾಲೆಯಲ್ಲಿ ಓದುತ್ತಿದ್ದಾಗ ಗಾಯಕನಾಗುವ ಉಮೇದು ಇತ್ತು. ಹಿನ್ನೆಲೆ ಗಾಯಕನಾಗುವ ಆಸೆಯಿದ್ದ ಅವರು ಕ್ರಮೇಣ

ಯಶಸ್ವೀ ಚಿತ್ರನಿರ್ದೇಶಕ ವಿಜಯ್

ತಾರಾವ್ಯವಸ್ಥೆಯ ಪರಿಣಾಮಗಳಿಂದ ತೆರೆಯ ಮರೆಯಲ್ಲಿಯೇ ಉಳಿದ  ವಿಜಯ್ ಅವರು ತಾರೆಗಳ ಹಂಗಿಲ್ಲದೆ ನಿರ್ದೇಶಿಸಿದ ‘ರಂಗಮಹಲ್ ರಹಸ್ಯ’ ಅಪೂರ್ವ ಸಸ್ಪೆನ್ಸ್ ಚಿತ್ರ.