ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಬಾಲಣ್ಣ ನೆರವಿಗೆ ಬಂದರು…

ಪೋಸ್ಟ್ ಶೇರ್ ಮಾಡಿ
ಬ್ಯಾಂಕ್ ಜನಾರ್ಧನ, ನಟ

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ಬಾಲಕೃಷ್ಣ ಅವರೊಂದಿಗೆ ಚಿತ್ರವೊಂದರಲ್ಲಿ ನಟಿಸುವ ಪುಟ್ಟ ಅವಕಾಶ ಸಿಕ್ಕಿತ್ತು. ಆಗಿನ್ನೂ ನಾನು ಸಿನಿಮಾಗೆ ಹೊಸಬ. (ಆ ಚಿತ್ರದ ಹೆಸರು, ನಿರ್ದೇಶಕರ ಮಾಹಿತಿ ಸದ್ಯಕ್ಕೆ ಬೇಡ). ಶೂಟಿಂಗ್ ವೇಳೆ ನಿರ್ದೇಶಕರು ಆ್ಯಕ್ಷನ್ ಹೇಳುತ್ತಿದ್ದಂತೆ ಬಾಲಣ್ಣ ಒಂದೇ ಟೇಕ್‍ನಲ್ಲಿ ತಮ್ಮ ಪಾಲಿನ ಉದ್ದನೆಯ ಡೈಲಾಗ್ ಒಪ್ಪಿಸಿದರು. ನಂತರ ಸಂಭಾಷಣೆ ಹೇಳಬೇಕಿದ್ದ ನಾನು ತಡವರಿಸಿದೆ. ಕೂಡಲೇ ಬಾಲಣ್ಣ ಅವರಿಗೆ ಏನನ್ನಿಸಿತೋ, ನನ್ನ ಸಂಭಾಷಣೆಯನ್ನೂ ಹೇಳಿಬಿಟ್ಟರು!

ಕಸಿವಿಸಿಗೊಂಡ ನಿರ್ದೇಶಕರು, `ಸರ್ ಅವರ ಡೈಲಾಗ್ ನೀವೇಕೆ ಹೇಳಿದಿರಿ?’ ಎಂದರು. `ನೀವು ಅಷ್ಟು ವೇಗವಾಗಿ ಹೇಳಿಕೊಟ್ಟರೆ ಆ ಹುಡುಗನಿಗೆ ಹೇಗೆ ಅರ್ಥವಾಗಬೇಕು? ಹೊಸಬರಿಗೆ ಪಾತ್ರ ಹೇಳಿಕೊಡುವಾಗ ನಿಮಗೆ ಸಮಾಧಾನ ಇರಬೇಕು. ಕಲಾವಿದರಿಗೆ ಸಂದರ್ಭ, ಸನ್ನಿವೇಶ ವಿವರಿಸುವುದು ಬೇಡವೇ?’ ಎಂದು ಬಾಲಣ್ಣ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. ಆಗಷ್ಟೇ ಕಲಾವಿದರಾಗಿ ಕಣ್ಣು ಬಿಡುತ್ತಿದ್ದ ನಮ್ಮ ನೆರವಿಗೆ ಬಾಲಣ್ಣ ನಿಂತಿದ್ದರು! ಇದು ನಿರ್ದೇಶಕರು ಸೇರಿದಂತೆ ನಮಗೂ ಪಾಠವಾಯ್ತು.

ಮತ್ತಷ್ಟು ಸೋಜಿಗ

ಜನಪ್ರಿಯ ಪೋಸ್ಟ್ ಗಳು

ಮೀಸೆ ಕಾಣದಂತೆ ಟೇಪ್ ಅಂಟಿಸಬಹುದು!

ನಿರ್ದೇಶಕರು ಹೆಚ್ಚು ಅವಧಿಯ ಶಾಟ್‍ಗಳನ್ನು ಚಿತ್ರಿಸುತ್ತಿದ್ದರೆ ನಿರ್ಮಾಪಕರು ಕೈಕೈ ಹಿಸುಕಿಕೊಳ್ಳುತ್ತಿದ್ದರು. ರೀಲ್‍ಗಳು ಪೋಲಾಗುತ್ತವೆಂದು ಕೆಲವು ಬಾರಿ ಆ ನಿರ್ಮಾಪಕ ಕ್ಯಾಮರಾಗೆ

ಸರಿಯಾಗಿ ಚಾಮರ ಬೀಸೋಕೂ ಬರೋಲ್ವೆ?

ಸೀನ್ ಕಂಟ್ಯೂನಿಟಿಗೆ ತೊಂದರೆಯಾಯ್ತು. ನಿರ್ದೇಶಕರು ಬೇಡಿಕೊಂಡರೂ ಸಖಿಯ ಕೋಪ ತಣ್ಣಗಾಗಲಿಲ್ಲ. ಕ್ಯಾಮರಾಮನ್ ಖುದ್ದಾಗಿ ಬಂದು ಕ್ಷಮೆಯಾಚಿಸುವವರೆಗೂ ಬರೋಲ್ಲ ಎಂದು ಆಕೆ