ವರಕವಿ ಕುವೆಂಪು ಅವರ ಮೇರು ಕೃತಿಯನ್ನು ಆಧರಿಸಿ ತಯಾರಾದ ‘ಕಾನೂರು ಹೆಗ್ಗಡತಿ’ (1999) ಚಿತ್ರದಲ್ಲಿ ಗಿರೀಶ್ ಕಾರ್ನಾಡ್ ಮತ್ತು ತಾರಾ. ನಟ – ನಿರ್ದೇಶಕ ಗಿರೀಶ್ ಕಾರ್ನಾಡರು ಚಿತ್ರಕಥೆ ರಚಿಸಿ ಚಿತ್ರ ನಿರ್ದೇಶಿಸಿದ್ದರು. ಸಂಗೀತ ಸಂಯೋಜನೆ ಬಿ.ವಿ.ಕಾರಂತ. ಈ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ರಾಷ್ಟ್ರಪ್ರಶಸ್ತಿ ಸಂದಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ನಾಟಕಕಾರ ಗಿರೀಶ್ ಕಾರ್ನಾಡ್ (19/05/1938 – 10/06/2019) ಅಗಲಿದ ದಿನವಿದು.

ಕಾರ್ನಾಡ್ ನೆನಪು
- ಕನ್ನಡ ಸಿನಿಮಾ
Share this post