ವರನಟ ಡಾ.ರಾಜಕುಮಾರ್ ಅವರೊಂದಿಗೆ ರಂಗಕರ್ಮಿ, ಪತ್ರಕರ್ತ ಎ.ಎಸ್.ಮೂರ್ತಿ. ಆಕಾಶವಾಣಿ ಕಲಾವಿದರಾಗಿ ‘ಆಕಾಶವಾಣಿ ಈರಣ್ಣ’ ಎಂದೇ ಕರೆಸಿಕೊಳ್ಳುತ್ತಿದ್ದ ಎ.ಎಸ್.ಮೂರ್ತಿ ಅವರ ಜನ್ಮದಿನವಿಂದು (ಆಗಸ್ಟ್ 16). ‘ಅಭಿನಯ ತರಂಗ’ ರಂಗತಂಡ, ‘ಗೆಳೆಯರ ಗುಂಪು’ ಬೀದಿನಾಟಕ ತಂಡ ರೂಪಿಸಿದ ಮೂರ್ತಿಯವರು ಹತ್ತಾರು ರೇಡಿಯೋ ನಾಟಕಗಳನ್ನು ರಚಿಸಿದ್ದು, ಕವಿತೆಗಳಿಗೆ ರಂಗರೂಪ ನೀಡಿದ್ದಾರೆ. ಚಲನಚಿತ್ರಗಳಿಗೆ ಸಂಭಾಷಣೆ ರಚಿಸಿದ್ದು, ಬೆಳ್ಳಿತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. 2012ರ ಡಿಸೆಂಬರ್ 18ರಂದು ಅವರು ನಮ್ಮನ್ನು ಅಗಲಿದರು. (ಫೋಟೊ ಕೃಪೆ: ಗೌರಿ ದತ್ತು)

ಎ.ಎಸ್.ಮೂರ್ತಿ ನೆನಪು
- ಕನ್ನಡ ರಂಗಭೂಮಿ - ಸಿನಿಮಾ
Share this post