ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಮೇಕಪ್‌ಮ್ಯಾನ್ ರಾಜಕುಮಾರ್!

ಪೋಸ್ಟ್ ಶೇರ್ ಮಾಡಿ

ಮೈಸೂರು ಸಮೀಪದ ಮಹದೇವಪುರದಲ್ಲಿ ‘ಮನಮೆಚ್ಚಿದ ಹುಡುಗಿ’ (1987) ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಎಂ.ಎಸ್‌.ರಾಜಶೇಖರ್‌ ನಿರ್ದೇಶನದ ಈ ಸಿನಿಮಾದಲ್ಲಿ ಶಿವರಾಜಕುಮಾರ್ ಮತ್ತು ಸುಧಾರಾಣಿ ಪ್ರಮುಖ ಪಾತ್ರಧಾರಿಗಳು. ಆ ದಿನಗಳಲ್ಲೊಮ್ಮೆ ಡಾ.ರಾಜಕುಮಾರ್ ಬೆಂಗಳೂರಿನಿಂದ ತಮ್ಮ ಹುಟ್ಟೂರು ಗಾಜನೂರಿಗೆ ಹೊರಟಿದ್ದರು. ಮಾರ್ಗಮಧ್ಯೆ ‘ಮನಮೆಚ್ಚಿದ ಹುಡುಗಿ’ ಚಿತ್ರೀಕರಣ ನಡೆಯುತ್ತಿದ್ದ ಮಹದೇವಪುರಕ್ಕೆ ಭೇಟಿ ನೀಡಿದ್ದರು.

ಸನ್ನಿವೇಶವೊಂದನ್ನು ಚಿತ್ರಿಸಲು ಚಿತ್ರದ ಮೇಕಪ್ ಕಲಾವಿದ ಎಂ.ಎಸ್.ಕೇಶವ ಅವರು ಪೈಲ್ವಾನ್‌ ಪಾತ್ರಧಾರಿ ಎನ್‌.ಎನ್‌.ಸಿಂಹ ಅವರಿಗೆ ಮೇಕಪ್ ಮಾಡಿದ್ದರು. ಸಿಂಹ ಅವರು ಖ್ಯಾತ ರಂಗಭೂಮಿ ಕಲಾವಿದರು. ರಾಜಕುಮಾರ್ ಅವರ ಶಿಫಾರಸಿನ ಮೇಲೆ ಚಿತ್ರದಲ್ಲಿ ಅವರಿಗೆ ಪೈಲ್ವಾನ್ ಪಾತ್ರ ಲಭಿಸಿತ್ತು. ರಾಜಕುಮಾರ್ ಅವರಿಗೆ ಪೈಲ್ವಾನ್ ಮೇಕಪ್‌ನಲ್ಲಿ ಕೊಂಚ ಬದಲಾವಣೆ ಬೇಕೆನಿಸಿತು. ಮೇಕಪ್ ಕಲಾವಿದ ಎಂ.ಎಸ್‌.ಕೇಶವ ಅವರಿಂದ ಕತ್ತರಿ, ಬಾಚಣಿಗೆ ಪಡೆದು ಸ್ವತಃ ತಾವೇ ಮೇಕಪ್‌ಗೆ ನಿಂತರು. “ಪೈಲ್ವಾನ್‌ ಮೀಸೆ ಹೀಗೆ ಸುರುಳಿಯಾಗಿದ್ದರೆ ಅದರ ಖದರ್ರೇ ಬೇರೆ” ಎನ್ನುತ್ತಾ ಮೀಸೆ ಮೇಲೆ ಕತ್ತರಿಯಾಡಿಸಿ ಸರಿಪಡಿಸಿದರು.

ಆ ಘಟನೆ ಸ್ಮರಿಸುತ್ತಾ ಮೇಕಪ್ ಕಲಾವಿದ ಎಂ.ಎಸ್‌.ಕೇಶವ ಅವರು ಹೇಳುವುದು ಹೀಗೆ – “ರಾಜಕುಮಾರ್ ಅವರಿಗೆ ನಮ್ಮ ತಂದೆ ಎಂ.ಎಸ್‌.ಸುಬ್ಬಣ್ಣ ಮೇಕಪ್ ಮಾಡುತ್ತಿದ್ದರು. ಅಣ್ಣಾವ್ರಿಗೆ ನಮ್ಮ ತಂದೆಯವರನ್ನು ಕಂಡರೆ ತುಂಬಾ ಗೌರವ, ಅಭಿಮಾನ. ನಾನು ಚಿಕ್ಕಂದಿನಲ್ಲೇ ತಂದೆಗೆ ಸಹಾಯಕನಾಗಿ ಮೇಕಪ್‌ ಕಲೆ ಶುರುಮಾಡಿದ್ದು. ಅಪ್ಪ ತೀರಿಕೊಂಡಾಗ ನನಗಿನ್ನೂ ಹದಿನೆಂಟು ವರ್ಷ. ಅವರ ನಂತರ ನಾನೇ ರಾಜಕುಮಾರ್ ಅವರಿಗೆ ಮೇಕಪ್‌ ಮಾಡಲು ಶುರುಮಾಡಿದೆ. ಅಣ್ಣಾವ್ರ ಪ್ರೋತ್ಸಾಹದಿಂದ ಹದಿನೆಂಟರ ಹರಯದಲ್ಲೇ ಚೀಫ್ ಮೇಕಪ್‌ಮ್ಯಾನ್‌ ಆದೆ. ರಂಗಭೂಮಿಯಲ್ಲಿ ನಾಟಕಗಳನ್ನು ಮಾಡುವಾಗ ರಾಜಕುಮಾರ್‌ ಸ್ವತಃ ತಾವೇ ಮೇಕಪ್ ಮಾಡಿಕೊಳ್ಳುತ್ತಿದ್ದವರು. ಮುಂದೆ ಸಿನಿಮಾಗಳಲ್ಲಿ ಮೇಕಪ್ ಮಾಡುವಾಗ ನಾನೇನಾದರೂ ತಪ್ಪು ಮಾಡಿದಾಗ ಅವರು ತಿದ್ದುತ್ತಾ ಗುರುವೂ ಆದರು. ಅಪ್ಪ ಕಾಲವಾದ ನಂತರ ಮೇಕಪ್ ಕಲೆಯ ಬಗ್ಗೆ ರಾಜಕುಮಾರ್ ಅವರಲ್ಲಿ ಸಾಕಷ್ಟು ಕಲಿತೆ”

‘ಮನಮೆಚ್ಚಿದ ಹುಡುಗಿ’ ಚಿತ್ರೀಕರಣದಲ್ಲಿ ನಿರ್ದೇಶಕ ಎಂ.ಎಸ್‌.ರಾಜಶೇಖರ್‌, ರಾಜಕುಮಾರ್‌, ಮೇಕಪ್ ಕಲಾವಿದ ಎಂ.ಎಸ್‌.ಕೇಶವ ಮತ್ತಿತರರಿದ್ದಾರೆ.

ಇನ್ನಷ್ಟು ಕಥೆ

ಹೆಳವನಕಟ್ಟೆ ಗಿರಿಯಮ್ಮ

ಸಂಕೇತ್ ಸ್ಟುಡಿಯೋದಲ್ಲಿ ‘ಹೆಳವನಕಟ್ಟೆ ಗಿರಿಯಮ್ಮ’ ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಪಿಬಿಎಸ್ ಜೊತೆ

ಜನಪ್ರಿಯ ಪೋಸ್ಟ್ ಗಳು

‘ಬಿಳಿ ಹೆಂಡ್ತಿ’ ಮಾರ್ಗರೆಟ್

ಅಮೆರಿಕ ಮೂಲದ ಮಾರ್ಗರೆಟ್ ಥಾಮ್ಸನ್ ‘ಬಿಳಿ ಹೆಂಡ್ತಿ’ ಚಿತ್ರಕ್ಕೆ ಆಯ್ಕೆಯಾದದ್ದು ಆಕಸ್ಮಿಕ. ಹದಿನೆಂಟರ ಹರೆಯದ ಮಾರ್ಗರೆಟ್ ಆಗ ‘ಭಾರತದ ಗ್ರಾಮೀಣ

ಕಲೋಪಾಸಕರು – ಪತ್ರಕರ್ತ ಹಾ.ವೆಂ.ಸೀತಾರಾಮಯ್ಯ ನೆನಪು

ಈ ಫೋಟೋದಲ್ಲಿ ನಟ ಅಶ್ವತ್ಥ್ ಅವರೊಂದಿಗಿರುವವರು ಪತ್ರಕರ್ತ ಹಾ.ವೆಂ.ಸೀತಾರಾಮಯ್ಯನವರು. ವೃತ್ತಿಯ ಬಹುಪಾಲು ಅವಧಿ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಕಾರ್ಯನಿರ್ವಹಣೆ. ರಂಗಭೂಮಿ ಮತ್ತು

‘ಗಂಧರ್ವಗಿರಿ’ ಮುಹೂರ್ತ

`ಶಂಕರಾಭರಣಂ’ ತೆಲುಗು ಸಿನಿಮಾ ಖ್ಯಾತಿಯ ನಟ ಸೋಮಯಾಜುಲು ಮುಖ್ಯಪಾತ್ರದಲ್ಲಿ ನಟಿಸಿದ್ದ `ಗಂಧರ್ವಗಿರಿ’ (1983) ಮುಹೂರ್ತದ ಸಂದರ್ಭವಿದು. ಚನ್ನರಾಯಪಟ್ಟಣ ಸಮೀಪದ ನುಗ್ಗೇಹಳ್ಳಿಯ

ರಾಜ್‌ ಅವರಿಗೆ ಕಲರ್ ಷರ್ಟ್ ಹಾಕಿಸಿದ್ದು!

ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಸಿನಿ ಪತ್ರಿಕೆಗಳಿಗೂ ಕಾರ್ಯನಿರ್ವಹಿಸಿದ್ದಾರೆ. ವಿ.ಎನ್.ಸುಬ್ಬರಾವ್ ಸಂಪಾದಕತ್ವದ `ತಾರಾಲೋಕ’ ಪತ್ರಿಕೆಯ ಸಂದರ್ಭವೊಂದು ಅವರ