ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ರಂಗಭೂಮಿ – ಸಿನಿಮಾ ನಟಿ ಶಾಂತಮ್ಮ

ಪೋಸ್ಟ್ ಶೇರ್ ಮಾಡಿ

ಕನ್ನಡ ಚಿತ್ರರಂಗದ ಆರಂಭದ ದಿನಗಳು, ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದ ಕಲಾವಿದೆ ಶಾಂತಮ್ಮ. ಅವರ ಪತಿ ಬಿ.ಅನಿಲ್ ಕುಮಾರ್ ವೃತ್ತಿರಂಗಭೂಮಿ ನಟ ಮತ್ತು ನೃತ್ಯ ನಿರ್ದೇಶಕ. ಅನಿಲ್ ಕುಮಾರ್ ಅವರು ರಂಗನಟಿ ಬಿ.ಜಯಮ್ಮ ಅವರ ಸಹೋದರ. ಅನಿಲ್ ಕುಮಾರ್ ಅವರನ್ನು ವಿವಾಹವಾದ ನಂತರ ನಟನೆ ಆರಂಭಿಸಿದ ಶಾಂತಮ್ಮ ಆರಂಭದಲ್ಲಿ ಗೋಕಾಕ್ ಮತ್ತು ಗುಬ್ಬಿ ಕಂಪನಿಗಳ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ‘ಹರಿಭಕ್ತ’ (1956) ಅವರ ಚೊಚ್ಚಲ ಸಿನಿಮಾ. ವರನಟ ರಾಜಕುಮಾರ್ ಅವರಿಗೆ ಇದು ನಾಲ್ಕನೇ ಸಿನಿಮಾ. ‘ಹರಿಭಕ್ತ’ ಚಿತ್ರದೊಂದಿಗೆ ಆರಂಭವಾದ ಅವರ ಸಿನಿಮಾ ನಂಟು ಕೊನೆಯ ದಿನಗಳವರೆಗೂ ಜಾರಿಯಲ್ಲಿತ್ತು. ಕನ್ನಡ ಮತ್ತು ತಮಿಳಿನ ಕೆಲವು ಸಿನಿಮಾಗಳು ಸೇರಿದಂತೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಕಿರುತೆರೆ ಧಾರಾವಾಹಿಗಳಲ್ಲೂ ನಟಿಸಿರುವ ಅವರು ಕೆಲವು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿರುವುದು ವಿಶೇಷ.

ರಾಜಕುಮಾರ್ ಅವರ ಬಹಳಷ್ಟು ಸಿನಿಮಾಗಳಲ್ಲಿ ಶಾಂತಮ್ಮ ಅಭಿನಯಿಸಿದ್ದು, ಅವರ ಕುಟುಂಬಕ್ಕೆ ನಿಕಟವರ್ತಿಯಾಗಿದ್ದವರು. ಕನ್ನಡ ಚಿತ್ರರಂಗ ಕಂಡ ಖ್ಯಾತನಾಮ ನಾಯಕನಟರಿಗೆ ತಾಯಿಯಾಗಿ ಕಾಣಿಸಿಕೊಂಡಿರುವ ಶಾಂತಮ್ಮ ಮೂರು ತಲೆಮಾರಿನ ಕಲಾವಿದರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಚಂದವಳ್ಳಿಯ ತೋಟ, ರಣಧೀರ ಕಂಠೀರವ, ಸನಾದಿ ಅಪ್ಪಣ್ಣ, ಕಾಮನಬಿಲ್ಲು, ಕೆರಳಿದ ಸಿಂಹ, ಹೊಸ ತೀರ್ಪು, ಲಾರಿ ಡ್ರೈವರ್, ಲವ್ ಮಾಡಿ ನೋಡು, ರಾಣಿ ಮಹಾರಾಣಿ, ಅಣ್ಣಯ್ಯ, ಮನೆದೇವ್ರು, ಜೈಲರ್ ಜಗನ್ನಾಥ್, ಬೇಡಕೃಷ್ಣ ರಂಗಿನಾಟ, ಶುಭಲಗ್ನ, ಸೌಭಾಗ್ಯ ದೇವತೆ, ಕೊಟ್ರೇಶಿ ಕನಸು, ಕೆಂಡದ ಮಳೆ, ಹುಡುಗ್ರು, ಅವರ ಕೆಲವು ಪ್ರಮುಖ ಸಿನಿಮಾಗಳು. ಶಾಂತಮ್ಮಅವರ ಪುತ್ರ ನಂದಕುಮಾರ್ ಮತ್ತು ಪುತ್ರಿ ಸುಮಾ ಬಾಲಕಲಾವಿದರಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾ ಮುಂದೆ ಕನ್ನಡ, ತೆಲುಗು, ಮಲಯಾಳಂ ಚಿತ್ರಗಳ ಪ್ರಮುಖ ಪಾತ್ರಗಳಲ್ಲಿ ನಟಿಸಿದರು. ಮತ್ತೊಬ್ಬ ಮಗಳು ಸುನಂದಾ ಅವರು ಕೂಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ರಾಜ್ಯ ಸರ್ಕಾರ ಶಾಂತಮ್ಮ ಅವರಿಗೆ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಿದೆ.

(ಫೋಟೋ: ಪ್ರಗತಿ ಅಶ್ವತ್ಥ ನಾರಾಯಣ)

‘ಕೊಟ್ರೇಶಿ ಕನಸು’ ಚಿತ್ರದಲ್ಲಿ ಶಾಂತಮ್ಮ, ವಿಜಯ ರಾಘವೇಂದ್ರ

ನೆನಪು ಸಾಧನೆ - ಸ್ಫೂರ್ತಿ

ಅಪರೂಪದ ಸಾಧಕ ವೀರಾಸ್ವಾಮಿ

ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ `ಡ್ರೀಮ್‍ಲ್ಯಾಂಡ್’ ಸಿನಿಮಾ ಹಂಚಿಕೆ ಕಚೇರಿ ನಡೆಸುತ್ತಿದ್ದರು. ಅವರಲ್ಲಿ

ಮಹಾನಟಿ ಮನೋರಮ

‘ಮಾಳಯಿಟ್ಟ ಮಂಗೈ’ (1958) ತಮಿಳು ಚಿತ್ರದೊಂದಿಗೆ ಮನೋರಮ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. 1985ರಲ್ಲಿ

ಜನಪ್ರಿಯ ಪೋಸ್ಟ್ ಗಳು

ಸ್ವರ ಸಾರ್ವಭೌಮ ‘ಟಿ.ಜಿ.ಲಿಂಗಪ್ಪ’

‘ಕಿತ್ತೂರುಚೆನ್ನಮ್ಮ’ ಚಿತ್ರದಲ್ಲಿ ಅಕ್ಕಮಹಾದೇವಿಯವರ ‘ತನುಕರದವರಲ್ಲಿ’ ವಚನವನ್ನು ಅಳವಡಿಸಿದರು. ಆಗ ವಚನ ಗಾಯನಕ್ಕೆ ಒಂದು ಪದ್ಧತಿ ರೂಪುಗೊಂಡಿತ್ತು. ಲಿಂಗಪ್ಪನವರು ಅದನ್ನು ಬಿಟ್ಟು

ಕಮಿಡಿಯನ್ ಗುಗ್ಗು

ಕನ್ನಡ ಸಿನಿಮಾ ರೂಪುಗೊಂಡ ಹಾದಿಯಲ್ಲಿ ಹಲವಾರು ಅಪರೂಪದ ವ್ಯಕ್ತಿತ್ವಗಳು, ಸಂದರ್ಭಗಳು ಕಾಣಸಿಗುತ್ತವೆ. ಈ ಹಾದಿಯಲ್ಲಿನ ಅಂತಹ ವಿಶಿಷ್ಟ ವ್ಯಕ್ತಿ ಕಮೆಡಿಯನ್

‘ಅಂಕಲ್‌’ ಲೋಕನಾಥ್

ಸಿದ್ದಲಿಂಗಯ್ಯ ನಿರ್ದೇಶನದ ‘ಬೂತಯ್ಯನ ಮಗ ಅಯ್ಯು’ ಚಿತ್ರದ ಉಪ್ಪಿನಕಾಯಿ ಪ್ರಿಯ ಮಾಚ, ಪುಟ್ಟಣ್ಣರ ‘ನಾಗರಹಾವು’ ಚಿತ್ರದ ಖಡಕ್ ಪ್ರಿನ್ಸಿಪಾಲ್‌ ಶ್ಯಾಮರಾಯರ