ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಗಜಾನನ ಜಾಗೀರ್‌ದಾರ

ನಟ, ಬರಹಗಾರ
ಪೋಸ್ಟ್ ಶೇರ್ ಮಾಡಿ

ಮಹಾರಾಷ್ಟ್ರದ ಅಮರಾವತಿಯಲ್ಲಿ ಜನಿಸಿದ ಗಜಾನನ ಜಾಗೀರ್‌ದಾರ ಕಾಲೇಜು ದಿನಗಳಲ್ಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಮಹಾರಾಷ್ಟ್ರದ ವಿವಿಧ ನಗರದಲ್ಲಿ ನಾಟಕಗಳ ಪ್ರದರ್ಶನ ನೀಡಿದ ಅನುಭವ ಅವರದಾಯ್ತು. ಓದು ಮುಗಿಸಿದ ನಂತರ ಶಿಕ್ಷಕ ವೃತ್ತಿ ಕೈಗೊಂಡ ಅವರಿಗೆ ರಂಗಭೂಮಿ ಸೆಳೆತ ತೀವ್ರವಾಯ್ತು. ಕೆಲ ದಿನಗಳಲ್ಲೇ ವೃತ್ತಿ ತೊರೆದು ನಟನಾಗುವ ಇರಾದೆಯಿಂದ ಸಿನಿಮಾರಂಗದತ್ತ ಹೊರಳಿದರು.

ವಿ.ಶಾಂತಾರಾಂ ಅವರಲ್ಲಿ ಸಹಾಯಕರಾಗಿ ಸೇರಿದ ಜಾಗೀರ್‌ದಾರ್ ಅವರಿಗೆ ಶಾಂತಾರಾಂ ಅವರ ‘ಜಲ್ತಿ ನಿಶಾನಿ’ ಹಿಂದಿ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಮುಂದೆ ಬಾಲ್‌ಜಿ ಪೆಂಡಾರ್ಕರ್‌ ಅವರಲ್ಲಿ ಸಹಾಯಕ ನಿರ್ದೇಶಕರಾಗಿ, ಬರಹಗಾರರಾಗಿ ಅನುಭವ ಪಡೆದರು. ಹಿಂದಿ, ಉರ್ದು, ಮರಾಠಿ ಮತ್ತು ಇಂಗ್ಲಿಷ್‌ನಲ್ಲಿ ಪರಿಣತಿಯಿದ್ದ ಅವರು ನಟ-ನಟಿಯರಿಗೆ ಸಂಭಾಷಣೆ ಉಚ್ಛಾರಣೆಗೆ ಸಂಬಂಧಿಸಿದಂತೆ ತರಬೇತಿ ನೀಡುತ್ತಿದ್ದರು. ‘ಸಂತ ತುಳಸೀದಾಸ್‌’ ಚಿತ್ರಕ್ಕೆ ಹದಿಮೂರು ಹಾಡುಗಳನ್ನು ರಚಿಸಿದ ಅವರಿಗೆ ನಟನೆ ಮತ್ತು ಬರವಣಿಗೆಯಲ್ಲಿ ರಂಗಭೂಮಿ ಅನುಭವ ನೆರವಿಗೆ ಬಂತು.

ಸಹಕಲಾವಿದನೊಂದಿಗೆ ಗಾಜನನ ಜಾಗೀರ್‌ದಾರ (ಫೋಟೊ ಕೃಪೆ: cinestaan)

‘ಸಿನ್ಹಾಸನ್‌’ ಚಿತ್ರದೊಂದಿಗೆ ನಿರ್ದೇಶಕರಾದ ಗಜಾನನ ‘ಬೇಗುನಾಹ್‌’, ‘ವಸಂತಸೇನಾ’ ಚಿತ್ರಗಳ ನಿರ್ದೇಶನಕ್ಕೆ ಮೆಚ್ಚುಗೆ ಗಳಿಸಿದರು. ನಟ ಮತ್ತು ನಿರ್ದೇಶಕನಾಗಿ ‘ರಾಮಶಾಸ್ತ್ರಿ’ ಅವರಿಗೆ ಹೆಸರು ತಂದುಕೊಟ್ಟಿತು. ನಟನಾ ಬದುಕಿನುದ್ದಕ್ಕೂ ಅವರು ಹಿಂದಿ ಮತ್ತು ಮರಾಠಿ ಎರಡೂ ಭಾಷೆಗಳ ಚಿತ್ರಗಳಲ್ಲಿ ಕೆಲಸ ಮಾಡುತ್ತಾ ಬಂದರು. ಅಸಿತ್ ಸೇನ್ ನಿರ್ದೇಶನದ ‘ಅಪರಾಧಿ ಕೌನ್‌’ ಅವರ ಮತ್ತೊಂದು ಮಹತ್ವದ ಸಿನಿಮಾ. ಈ ಚಿತ್ರದಲ್ಲಿ ಅವರು ದ್ವಿಪಾತ್ರದಲ್ಲಿ ಗಮನ ಸೆಳೆದರು. ಎರಡು ವರ್ಷ ಅವರು ಪುಣೆಯ ಸಿನಿಮಾ ಮತ್ತು ಟೀವಿ ಇನ್‌ಸ್ಟಿಟ್ಯೂಟ್‌ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿದರು.

ಹಮ್ ದೋನೋ, ಗೈಡ್, ದೇಸ್ ಪರ್‌ದೇಸ್‌, ಉಮ್ರಾವೋ ಜಾನ್‌, ಸೂತ್ರಧಾರ್‌, ಪ್ಯಾಸೆ ನಯನ್‌… ಪೋಷಕ ಪಾತ್ರಗಳಲ್ಲಿ ಗಜಾನನ ಅವರು ನಟಿಸಿದ ಕೆಲವು ಪ್ರಮುಖ ಹಿಂದಿ ಚಿತ್ರಗಳು. ತಮ್ಮ ಸಿನಿಮಾ – ಬದುಕಿನ ಕುರಿತಾಗಿ ಅವರು ಎರಡು ಆತ್ಮಚರಿತ್ರೆ ಪುಸ್ತಕಗಳನ್ನು ರಚಿಸಿದ್ದು, ಸಿನಿಮಾ ಕಲೆಯ ಬಗ್ಗೆ ಪುಸ್ತಕ ಬರೆದಿದ್ದಾರೆ.

ಗಜಾನನ ಜಾಗೀರ್‌ದಾರ | ಜನನ: 02/04/1907 | ನಿಧನ: 13/08/1988

ಹಿಂದಿ ಚಿತ್ರವೊಂದರಲ್ಲಿ ನಾಯಕನಟ ಸುನೀಲ್ ದತ್‌ ಅವರೊಂದಿಗೆ (ಫೋಟೊ ಕೃಪೆ: cinestaan)

ನೆನಪು ಸಾಧನೆ - ಸ್ಫೂರ್ತಿ

ಅಪರೂಪದ ಸಾಧಕ ವೀರಾಸ್ವಾಮಿ

ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ `ಡ್ರೀಮ್‍ಲ್ಯಾಂಡ್’ ಸಿನಿಮಾ ಹಂಚಿಕೆ ಕಚೇರಿ ನಡೆಸುತ್ತಿದ್ದರು. ಅವರಲ್ಲಿ

ಮಹಾನಟಿ ಮನೋರಮ

‘ಮಾಳಯಿಟ್ಟ ಮಂಗೈ’ (1958) ತಮಿಳು ಚಿತ್ರದೊಂದಿಗೆ ಮನೋರಮ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. 1985ರಲ್ಲಿ

ಜನಪ್ರಿಯ ಪೋಸ್ಟ್ ಗಳು

ಹಾಸ್ಯನಟ ರತ್ನಾಕರ್ ಚಿತ್ರನಿರ್ದೇಶಕರೂ ಹೌದು

ಕನ್ನಡ ಚಿತ್ರರಂಗ ಕಂಡ ಪ್ರಮುಖ ಹಾಸ್ಯಕಲಾವಿದರಲ್ಲೊಬ್ಬರು ರತ್ನಾಕರ್. ಅವರು ಜನಿಸಿದ್ದು ಕೊಲ್ಲೂರಿನಲ್ಲಿ. ಓದಿದ್ದು ನಾಲ್ಕನೇ ತರಗತಿಯಷ್ಟೆ. ಕಾರಣಾಂತರಗಳಿಂದ ಚಿಕ್ಕಂದಿನಲ್ಲೇ ಅವರು

ಆಡಿಸಿದಾತ…

ಕನ್ನಡ ಸಿನಿಮಾರಂಗದ ಮಹತ್ವದ ಚಿತ್ರಸಾಹಿತಿ ಚಿ.ಉದಯಶಂಕರ್ (18/02/1934 – 02/07/1993) ನಮ್ಮನ್ನಗಲಿದ ದಿನವಿದು. ಅವರೊಂದಿಗೆ ಹತ್ತಿರದಿಂದ ಒಡನಾಡಿದವರು ಲೇಖಕ ಎನ್‌.ಎಸ್‌.ಶ್ರೀಧರಮೂರ್ತಿ.

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ) ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ