ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬಿ.ಎನ್.ಹರಿದಾಸ್

ಸಿನಿಮಾ ಛಾಯಾಗ್ರಾಹಕ
ಪೋಸ್ಟ್ ಶೇರ್ ಮಾಡಿ

ಬೆಂಗಳೂರು ಮೂಲದ ಹರಿದಾಸ್ ಕನ್ನಡ, ತಮಿಳಿನ ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. `ಫಲಿತಾಂಶ’ ಸೇರಿದಂತೆ ಪುಟ್ಟಣ್ಣನವರ `ಬಿಳಿ ಹೆಂಡ್ತಿ’, `ಕಥಾ ಸಂಗಮ’ ಮತ್ತು `ಕಾಲೇಜು ರಂಗ’ ಚಿತ್ರಗಳಿಗೆ ಹರಿದಾಸ್ ಕ್ಯಾಮೆರಾ ಕೆಲಸವಿದೆ. ಅಮರಶಿಲ್ಪಿ ಜಕಣಾಚಾರಿ (1964), ಮಹಾಸತಿ ಅನಸೂಯ, ಚಂದ್ರಹಾಸ, ಬಂಗಾರದ ಹೂವು, ಭಲೇ ಬಸವ, ಹಾಸ್ಯರತ್ನ ರಾಮಕೃಷ್ಣ, ಶ್ರೀಗಂಧ, ಗಾನಯೋಗಿ ಪಂಚಾಕ್ಷರ ಗವಾಯಿ (1995) ಅವರ ಛಾಯಾಗ್ರಾಹಣದ ಕೆಲವು ಪ್ರಮುಖ ಸಿನಿಮಾಗಳು.

‘ಫಲಿತಾಂಶ’ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ನಟ ಅಮರೀಶ್ ಪುರಿ, ನಿರ್ದೇಶಕ ಪುಟ್ಟಣ್ಣ ಕಣಗಾಲ್‌, ಛಾಯಾಗ್ರಾಹಕ ಹರಿದಾಸ್‌

`ಒಡಹುಟ್ಟಿದವರು’ (1969), `ಆಶಾಕಿರಣ’, `ಸೂರ್ಯಪುತ್ರ’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ತಂತ್ರಜ್ಞರೊಲ್ಲಬ್ಬರಾದ ಬಿ.ಎಸ್.ರಂಗಾ ಅವರ ಭಾಮೈದ ಹರಿದಾಸ್. ಮದರಾಸಿನಲ್ಲಿದ್ದ ರಂಗಾ ಅವರ ವಿಕ್ರಂ ಸ್ಟುಡಿಯೋ ಯಶಸ್ಸಿನಲ್ಲಿ ಇವರ ಕೊಡುಗೆಯೂ ಇದೆ. ಉತ್ತಮ ಕ್ಯಾಮೆರಾ ತಂತ್ರಗಾರಿಕೆಯಿಂದ ಹಲವು ಉತ್ತಮ ಪ್ರಯೋಗಗಳಿಗೆ ಸಾಕ್ಷಿಯಾದ ಹರಿದಾಸ್ ಈಗ ನಮ್ಮೊಂದಿಗಿಲ್ಲ.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಅಪರೂಪದ ಸಾಧಕ ವೀರಾಸ್ವಾಮಿ

ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ `ಡ್ರೀಮ್‍ಲ್ಯಾಂಡ್’ ಸಿನಿಮಾ ಹಂಚಿಕೆ ಕಚೇರಿ ನಡೆಸುತ್ತಿದ್ದರು. ಅವರಲ್ಲಿ ಸಾಮಾನ್ಯ ನೌಕರನಾಗಿ ಕೆಲಸಕ್ಕೆ ಸೇರಿದ ವೀರಾಸ್ವಾಮಿ

ಫಾರೂಕ್ ಶೇಕ್

ಭಾರತೀಯ ಚಿತ್ರರಂಗದ ಹೊಸ ಅಲೆಯ ಸಿನಿಮಾ ಯಾದಿಯಲ್ಲಿ ನಟ ಫಾರೂಕ್ ಶೇಕ್‌ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗುತ್ತದೆ. ರಂಗಭೂಮಿ, ಸಿನಿಮಾ ಮತ್ತು