ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬಿ.ಎನ್.ಹರಿದಾಸ್

ಸಿನಿಮಾ ಛಾಯಾಗ್ರಾಹಕ
ಪೋಸ್ಟ್ ಶೇರ್ ಮಾಡಿ

ಬೆಂಗಳೂರು ಮೂಲದ ಹರಿದಾಸ್ ಕನ್ನಡ, ತಮಿಳಿನ ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. `ಫಲಿತಾಂಶ’ ಸೇರಿದಂತೆ ಪುಟ್ಟಣ್ಣನವರ `ಬಿಳಿ ಹೆಂಡ್ತಿ’, `ಕಥಾ ಸಂಗಮ’ ಮತ್ತು `ಕಾಲೇಜು ರಂಗ’ ಚಿತ್ರಗಳಿಗೆ ಹರಿದಾಸ್ ಕ್ಯಾಮೆರಾ ಕೆಲಸವಿದೆ. ಅಮರಶಿಲ್ಪಿ ಜಕಣಾಚಾರಿ (1964), ಮಹಾಸತಿ ಅನಸೂಯ, ಚಂದ್ರಹಾಸ, ಬಂಗಾರದ ಹೂವು, ಭಲೇ ಬಸವ, ಹಾಸ್ಯರತ್ನ ರಾಮಕೃಷ್ಣ, ಶ್ರೀಗಂಧ, ಗಾನಯೋಗಿ ಪಂಚಾಕ್ಷರ ಗವಾಯಿ (1995) ಅವರ ಛಾಯಾಗ್ರಾಹಣದ ಕೆಲವು ಪ್ರಮುಖ ಸಿನಿಮಾಗಳು.

‘ಫಲಿತಾಂಶ’ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ನಟ ಅಮರೀಶ್ ಪುರಿ, ನಿರ್ದೇಶಕ ಪುಟ್ಟಣ್ಣ ಕಣಗಾಲ್‌, ಛಾಯಾಗ್ರಾಹಕ ಹರಿದಾಸ್‌

`ಒಡಹುಟ್ಟಿದವರು’ (1969), `ಆಶಾಕಿರಣ’, `ಸೂರ್ಯಪುತ್ರ’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ತಂತ್ರಜ್ಞರೊಲ್ಲಬ್ಬರಾದ ಬಿ.ಎಸ್.ರಂಗಾ ಅವರ ಭಾಮೈದ ಹರಿದಾಸ್. ಮದರಾಸಿನಲ್ಲಿದ್ದ ರಂಗಾ ಅವರ ವಿಕ್ರಂ ಸ್ಟುಡಿಯೋ ಯಶಸ್ಸಿನಲ್ಲಿ ಇವರ ಕೊಡುಗೆಯೂ ಇದೆ. ಉತ್ತಮ ಕ್ಯಾಮೆರಾ ತಂತ್ರಗಾರಿಕೆಯಿಂದ ಹಲವು ಉತ್ತಮ ಪ್ರಯೋಗಗಳಿಗೆ ಸಾಕ್ಷಿಯಾದ ಹರಿದಾಸ್ ಈಗ ನಮ್ಮೊಂದಿಗಿಲ್ಲ.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

‘ದಾದಾ’ ಎಂದೇ ಕರೆಸಿಕೊಳ್ಳುತ್ತಿದ್ದ ನಿರ್ಮಾಣ ನಿರ್ವಾಹಕ, ನಟ ಶಿವಾಜಿ ರಾವ್

ಸಿನಿಮಾವೊಂದು ತಯಾರಾಗುವ ಪ್ರತೀ ಹಂತದಲ್ಲಿ ನಿರ್ಮಾಣ ನಿರ್ವಾಹಕನ ಪಾತ್ರ ದೊಡ್ಡದು. ಚಿತ್ರದಲ್ಲಿ ಕೆಲಸ ಮಾಡುವ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಚಿತ್ರೀಕರಣದ

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ) ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ