ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಚಿತ್ರನಿರ್ದೇಶಕ ವಿ.ಸೋಮಶೇಖರ್

ಕನ್ನಡ ಸಿನಿಮಾ ಚಿತ್ರೀಕರಣವೊಂದರಲ್ಲಿ ನಿರ್ದೇಶಕ ವಿ.ಸೋಮಶೇಖರ್‌, ನಟ ವಿಷ್ಣುವರ್ಧನ್‌, ನಿರ್ದೇಶಕ ವಿಜಯಾರೆಡ್ಡಿ. ಎಪ್ಪತ್ತರ ದಶಕದ ಜನಪ್ರಿಯ ಕನ್ನಡ ಚಿತ್ರನಿರ್ದೇಶಕ ವಿ.ಸೋಮಶೇಖರ್. ನಿರ್ದೇಶಕರಾದ ರವೀ, ವೈ.ಆರ್.ಸ್ವಾಮಿ, ಆರ್.ರಾಮಮೂರ್ತಿ ಅವರಿಗೆ ಸಹಾಯಕರಾಗಿ ದುಡಿದ ಸೋಮಶೇಖರ್ `ಬಂಗಾರದ ಪಂಜರ’ ಚಿತ್ರದೊಂದಿಗೆ ಸ್ವತಂತ್ರ ನಿರ್ದೇಶಕರಾದರು. ಮುಂದೆ ರಾಜಕುಮಾರ್ ನಟನೆಯ `ಪ್ರೇಮದ ಕಾಣಿಕೆ’, `ಶಂಕರ್ ಗುರು’ ಚಿತ್ರಗಳು ಹೆಸರು ತಂದುಕೊಟ್ಟವು. ಮೂವತ್ತೈದಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸೋಮಶೇಖರ್ ಅವರಿಗೆ 1999-2000 ಸಾಲಿನ ರಾಜ್ಯ ಸರ್ಕಾರದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಸಂದಿದೆ. ಇಂದು ಸೋಮಶೇಖರ್ (27/07/1937 – 22/08/2003) ಅವರ ಸಂಸ್ಮರಣಾ ದಿನ. (ಫೋಟೊ: ಭವಾನಿ ಲಕ್ಷ್ಮೀನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು