ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಭಾರತೀಯ ಸಿನಿಮಾದ ಸಾಹಸಿ ಮಹಿಳೆ ಜದ್ದಾನ್‌ಬಾಯಿ

ನಟಿ, ಗಾಯಕಿ, ಚಿತ್ರನಿರ್ದೇಶಕಿ
ಪೋಸ್ಟ್ ಶೇರ್ ಮಾಡಿ

ಭಾರತೀಯ ಸಿನಿಮಾದ ಆರಂಭದ ದಿನಗಳ ಸಾಧಿಕಿಯರಲ್ಲಿ ಜದ್ದಾನ್‌ಬಾಯಿ ಪ್ರಮುಖರು. ನಟಿ, ಸಂಗೀತ ಸಂಯೋಜಕಿ, ಚಿತ್ರನಿರ್ದೇಶಕಿ, ನಿರ್ಮಾಪಕಿಯಾಗಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಸಾಹಸಿ ಮಹಿಳೆ. ಚಿಕ್ಕಂದಿನಿಂದಲೇ ಶಾಸ್ತ್ರೀಯ ಸಂಗೀತದ ವಿದ್ಯಾರ್ಥಿಯಾಗಿದ್ದ ಅವರು ಸೂಕ್ತ ತರಬೇತಿಯೊಂದಿಗೇ ಚಿತ್ರರಂಗಕ್ಕೆ ಬಂದವರು. ಸಿನಿಮಾಗೆ ಬರುವ ಮುನ್ನ ರೇಡಿಯೋದಲ್ಲಿ ಜನಪ್ರಿಯ ಗಝಲ್ ಗಾಯಕಿಯಾಗಿ ಅವರು ಹೆಸರು ಮಾಡಿದ್ದರು.

‘ರಾಜಾ ಗೋಪಿಚಂದ್‌’ (1933) ಚಿತ್ರದೊಂದಿಗೆ ಅವರ ಬೆಳ್ಳಿತೆರೆ ಪ್ರವೇಶವಾಯ್ತು. ಕರಾಚಿ ಮೂಲದ ನಿರ್ಮಾಪಕರ ‘ಇನ್ಸಾನ್‌ ಯಾ ಶೈತಾನ್‌’ ಅವರ ಮುಂದಿನ ಸಿನಿಮಾ. ‘ತಲಾಶ್ ಎ ಹಕ್‌’ (1935) ಅವರ ಮಹತ್ವದ ಸಿನಿಮಾ. ಈ ಚಿತ್ರದಲ್ಲಿ ನಟಿಯಾಗಿ ಮಾತ್ರವಲ್ಲದೆ ಸಂಗೀತ ಸಂಯೋಜಕಿಯಾಗಿಯೂ ಅವರು ಹೆಸರು ಮಾಡಿದರು. ಆಗಿನ ಕಾಲಕ್ಕೆ ಮಹಿಳೆಯೊಬ್ಬರು ಸಿನಿಮಾಗೆ ಸಂಗೀತ ಸಂಯೋಜಿಸಿದ್ದು ದೊಡ್ಡ ವಿಚಾರವೇ ಆಗಿತ್ತು.

ಪುತ್ರಿ, ನಟಿ ನರ್ಗಿಸ್ ಜೊತೆ ಜದ್ದಾನ್‌ಬಾಯಿ (Photo Courtesy: Cinestaan)

ಮುಂದೆ ತಮ್ಮದೇ ಚಿತ್ರನಿರ್ಮಾಣ ಸಂಸ್ಥೆ ‘ಸಂಗೀತ್ ಫಿಲ್ಮ್ಸ್‌’ ಸ್ಥಾಪಿಸಿದರು. ಆರು ವರ್ಷದ ಪುತ್ರಿ ಫಾತಿಮಾಳ ಹೆಸರನ್ನು ಬೇಬಿ ರಾಣಿ ಎಂದು ಬದಲಿಸಿ ‘ಮೇಡಂ ಫ್ಯಾಷನ್‌’ (1936) ಚಿತ್ರದ ಬಾಲನಟಿಯನ್ನಾಗಿ ಪರಿಚಯಿಸಿದರು. ಈ ಬಾಲನಟಿಯೇ ಮುಂದೆ ಹಿಂದಿ ಚಿತ್ರರಂಗದ ಜನಪ್ರಿಯ ನಾಯಕನಟಿಯಾಗಿ ಹೆಸರು ಮಾಡಿದ ನರ್ಗಿಸ್‌! ಮುಂದೆ ನರ್ಗಿಸ್‌ ಅವರು ಮೆಹಬೂಬ್‌ ಖಾನ್‌ ನಿರ್ದೇಶನದ ‘ತಕ್ದೀರ್‌’ (1943) ಚಿತ್ರದಲ್ಲಿ ಮೋತಿಲಾಲ್‌ ಅವರಿಗೆ ನಾಯಕಿಯಾದರು.

ಮೂಲತಃ ನಟಿ, ಗಾಯಕಿಯಾದ ಜದ್ದಾನ್‌ಬಾಯಿ ಹೃದಯ ಮಂಥನ್‌, ಮೇಡಂ ಫ್ಯಾಷನ್‌, ಜೀವನ್ ಸಪ್ನಾ ಮತ್ತು ಮೋತಿಯೋ ಕಾ ಹಾರ್‌ ಚಿತ್ರಗಳನ್ನು ನಿರ್ದೇಶಿಸಿದರು. ಭಾರತೀಯ ಸಿನಿಮಾ ಇತಿಹಾಸದಲ್ಲಿ ತಮ್ಮದೇ ಛಾಪು ಮೂಡಿಸಿದ ಜದ್ದಾನ್ ಬಾಯಿ ಯಶಸ್ವೀ ಚಿತ್ರೋದ್ಯಮಿಯೂ ಹೌದು. ಪುತ್ರಿ ನರ್ಗಿಸ್‌ರನ್ನು ಜನಪ್ರಿಯ ನಾಯಕನಟಿಯಾಗಿ ರೂಪಿಸುವಲ್ಲಿ ಅವರ ಪಾತ್ರ ದೊಡ್ಡದು. ಚಿತ್ರರಂಗದಿಂದ ಹೆಣ್ಣುಮಕ್ಕಳು ದೂರವೇ ಇರುತ್ತಿದ್ದ ಮಡಿವಂತಿಕೆಯ ಕಾಲವದು. ಜದ್ದಾನ್‌ಬಾಯಿ ಸಿನಿಮಾರಂಗದ ವಿವಿಧ ಕ್ಷೇತ್ರಗಳಲ್ಲ ದಿಟ್ಟತನದ ಸವಾಲುಗಳನ್ನು ಎದುರಿಸಿ ಗೆದ್ದು ಮಾದರಿಯಾದರು.

ಜದ್ದಾನ್‌ಬಾಯಿ | ಜನನ: 1882 | ನಿಧನ: 08/04/1949

ಜದ್ದಾನ್‌ಬಾಯಿ

ನೆನಪು ಸಾಧನೆ - ಸ್ಫೂರ್ತಿ

ಅಪರೂಪದ ಸಾಧಕ ವೀರಾಸ್ವಾಮಿ

ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ `ಡ್ರೀಮ್‍ಲ್ಯಾಂಡ್’ ಸಿನಿಮಾ ಹಂಚಿಕೆ ಕಚೇರಿ ನಡೆಸುತ್ತಿದ್ದರು. ಅವರಲ್ಲಿ

ಮಹಾನಟಿ ಮನೋರಮ

‘ಮಾಳಯಿಟ್ಟ ಮಂಗೈ’ (1958) ತಮಿಳು ಚಿತ್ರದೊಂದಿಗೆ ಮನೋರಮ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. 1985ರಲ್ಲಿ

ಜನಪ್ರಿಯ ಪೋಸ್ಟ್ ಗಳು

ಹಾಸ್ಯನಟ ರತ್ನಾಕರ್ ಚಿತ್ರನಿರ್ದೇಶಕರೂ ಹೌದು

ಕನ್ನಡ ಚಿತ್ರರಂಗ ಕಂಡ ಪ್ರಮುಖ ಹಾಸ್ಯಕಲಾವಿದರಲ್ಲೊಬ್ಬರು ರತ್ನಾಕರ್. ಅವರು ಜನಿಸಿದ್ದು ಕೊಲ್ಲೂರಿನಲ್ಲಿ. ಓದಿದ್ದು ನಾಲ್ಕನೇ ತರಗತಿಯಷ್ಟೆ. ಕಾರಣಾಂತರಗಳಿಂದ ಚಿಕ್ಕಂದಿನಲ್ಲೇ ಅವರು

ಆಡಿಸಿದಾತ…

ಕನ್ನಡ ಸಿನಿಮಾರಂಗದ ಮಹತ್ವದ ಚಿತ್ರಸಾಹಿತಿ ಚಿ.ಉದಯಶಂಕರ್ (18/02/1934 – 02/07/1993) ನಮ್ಮನ್ನಗಲಿದ ದಿನವಿದು. ಅವರೊಂದಿಗೆ ಹತ್ತಿರದಿಂದ ಒಡನಾಡಿದವರು ಲೇಖಕ ಎನ್‌.ಎಸ್‌.ಶ್ರೀಧರಮೂರ್ತಿ.

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ) ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ