ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಸತ್ಯಜಿತ್‌ ರೇ ಅವರಿಗೆ ಆಸ್ಕರ್ ಗೌರವದ ನೆನಪು | ವೀಡಿಯೋ

Share this post

29 ವರ್ಷಗಳ ಹಿಂದೆ 1992, ಮಾರ್ಚ್‌ 30ರಂದು ಭಾರತದ ಖ್ಯಾತ ಚಿತ್ರನಿರ್ದೇಶಕ ಸತ್ಯಜಿತ್‌ ರೇ ಅವರಿಗೆ ಆಸ್ಕರ್‌ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಅನಾರೋಗ್ಯದಿಂದ ರೇ ಅವರು ಕೊಲ್ಕೊತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದ ರೇ ಅವರು ಕೈಲಿ ಆಸ್ಕರ್‌ ಪ್ರಶಸ್ತಿ ಹಿಡಿದು ಅಕಾಡೆಮಿಗೆ ಧನ್ಯವಾದ ಸಮರ್ಪಿಸಿದ್ದರು. ಆಸ್ಕರ್‌ ಕಮಿಟಿಯವರು ಮಾರ್ಚ್‌ 16ರಂದು ಕೊಲ್ಕೊತ್ತಾಗೆ ಧಾವಿಸಿ ಆಸ್ಪತ್ರೆಯಲ್ಲಿದ್ದ ರೇ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದರು. ರೇ ಅವರ ಮಾತುಗಳನ್ನೂ ಅಂದೇ ರೆಕಾರ್ಡ್ ಮಾಡಲಾಗಿತ್ತು. ರೇ ಅವರ ಸಿನಿಮಾ ಪ್ರೀತಿ ಮತ್ತು ಪ್ರಶಸ್ತಿಗೆ ಧನ್ಯವಾದ ಅರ್ಪಿಸಿದ ಮಾತುಗಳನ್ನು ಮಾರ್ಚ್‌ 30ರಂದು 64ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಪ್ರಸಾರ ಮಾಡಲಾಯ್ತು. ಅಂದು ಕಾರ್ಯಕ್ರಮದಲ್ಲಿ ಖ್ಯಾತ ಹಾಲಿವುಡ್ ತಾರೆ ಆಡ್ರೆ ಹಿಪ್‌ಬರ್ನ್‌ ಅವರು ಸತ್ಯಜಿತ್ ರೇ ಅವರನ್ನು ಪರಿಚಯಿಸಿದ್ದರು. ಈ ಅಪರೂಪದ ವೀಡಿಯೋ ಇಲ್ಲಿದೆ ನೋಡಿ. ಇಂದು ಸತ್ಯಜಿತ್‌ ರೇ (02/05/1921 – 23/04/1992) ಅವರ ಜನ್ಮದಿನ.

ಮಾಹಿತಿ - ವಿಶೇಷ - ಇತರೆ ಹಿನ್ನೋಟ

666 ಆಪರೇಷನ್ ಡ್ರೀಮ್ ಥಿಯೇಟರ್ | ಹಾಡಿನ ಚಿತ್ರೀಕರಣಕ್ಕೆ ಅದ್ಧೂರಿ ಸೆಟ್

666 ಆಪರೇಷನ್ ಡ್ರೀಮ್ ಥಿಯೇಟರ್ | ಹಾಡಿನ ಚಿತ್ರೀಕರಣಕ್ಕೆ ಅದ್ಧೂರಿ ಸೆಟ್

‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್‌ ನಿರ್ಮಿಸಲಾಗಿದೆ. ಹೇಮಂತ್‌ ರಾವ್‌ ನಿರ್ದೇಶನದ

ಗಣೇಶ್ ಅಭಿನಯದ 'ಬೃಂದಾವಿಹಾರಿ' ಚಿತ್ರದ 'ರಾಧಾ ರಾಧಾ' ಹಾಡು ಬಿಡುಗಡೆ

ಗಣೇಶ್ ಅಭಿನಯದ ‘ಬೃಂದಾವಿಹಾರಿ’ ಚಿತ್ರದ ‘ರಾಧಾ ರಾಧಾ’ ಹಾಡು ಬಿಡುಗಡೆ

ಶ್ರೀನಿವಾಸ ರಾಜು ನಿರ್ದೇಶನದಲ್ಲಿ ಗಣೇಶ್‌ ನಟಿಸಿರುವ ‘ಬೃಂದಾವಿಹಾರಿ’ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಸಮೃದ್ಧಿ ಮಂಜುನಾಥ್‌ ನಿರ್ಮಾಣದ ಈ ಚಿತ್ರದ

ನೌಷಾದ್‌ ಅಲಿ ನೆನಪು

ಬೆಂಗಳೂರು ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಗೀತ ಸಂಯೋಜಕ ನೌಷಾದ್‌, ಚಿತ್ರಸಾಹಿತಿ ಆರ್‌.ಎನ್‌.ಜಯಗೋಪಾಲ್‌, ಚಿತ್ರಸಾಹಿತಿ – ಜನಪದ ವಿಧ್ವಾಂಸ ಎಸ್‌.ಕೆ.ಕರೀಂಖಾನ್‌,

'ಬಾಲನ್ ದಿ ಬಾಯ್' ಸಿನಿಮಾಗೆ ವಿಶ್ವ ವೇದಿಕೆ ಕಲ್ಪಿಸಿದ ಕೆವಿಎನ್ ಪ್ರೊಡಕ್ಷನ್ಸ್‌

‘ಬಾಲನ್ ದಿ ಬಾಯ್’ ಸಿನಿಮಾಗೆ ವಿಶ್ವ ವೇದಿಕೆ ಕಲ್ಪಿಸಿದ ಕೆವಿಎನ್ ಪ್ರೊಡಕ್ಷನ್ಸ್‌

ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಾಣದ ‘ಬಾಲನ್‌ ದಿ ಬಾಯ್‌’ ಮಲಯಾಳಂ ಸಿನಿಮಾ ಕಾನ್ಸ್‌ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಚಿದಂಬರಂ ನಿರ್ದೇಶನದ ಚಿತ್ರವಿದು. ದಕ್ಷಿಣ