ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಎಸ್.ಜಾನಕಿ | 5 ಭಾಷೆಗಳ ಮೊದಲ ಹಾಡುಗಳು

Share this post

ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಸಿನ್ಹಳ ಭಾಷಾ ಸಿನಿಮಾಗಳಿಗೆ ಎಸ್‌.ಜಾನಕಿ ಹಾಡಿದ ಮೊದಲ ಹಾಡುಗಳು ಇಲ್ಲಿವೆ. ಇವೆಲ್ಲವೂ 1957ರಲ್ಲಿ ಧ್ವನಿಮುದ್ರಣಗೊಂಡ ಹಾಡುಗಳು. ಜಾನಕಮ್ಮ ಮೊದಲ ಹಾಡು ಹಾಡಿದ್ದು ‘ವಿಧಿಯಿನ್‌ ವಿಳಯಟ್ಟು’ ತಮಿಳು ಚಿತ್ರಕ್ಕೆ. ಟಿ.ಛಲಪತಿ ರಾವ್ ಸಂಗೀತ ಸಂಯೋಜಕರು. ಈ ಸಿನಿಮಾ ತೆರೆಕಾಣಲಿಲ್ಲ.

ಕನ್ನಡ | ಭಲೇ ಭಲೇ ಗಾರುಡಿ | ಸಿನಿಮಾ: ಶ್ರೀಕೃಷ್ಣಗಾರಡಿ | ಪೆಂಡ್ಯಾಲ ಸಂಗೀತ ಸಂಯೋಜನೆಯಲ್ಲಿ ಧ್ವನಿಮುದ್ರಣಗೊಂಡ ಮೊದಲ ಕನ್ನಡ ಹಾಡಿದು. ಕೆಲವೇ ದಿನಗಳಲ್ಲಿ ಅವರು ‘ರಾಯರ ಸೊಸೆ’ ಸಿನಿಮಾದ ಶ್ಲೋಕ ಹಾಡಿದ್ದರು. ಲತಾ ಮಂಗೇಶ್ಕರ್ ಹಾಡಿದ್ದ ಮರಾಠಿ ಭಾವಗೀತೆಯ ಟ್ಯೂನ್‌ ಆಧರಿಸಿ ಕನ್ನಡ ಶ್ಲೋಕ ರೂಪುಗೊಂಡಿತ್ತು. ಬಿಡುಗಡೆಯಾದ ಮೊದಲ ಹಾಡು ಇದೇ ಆಯ್ತು.

ತಮಿಳು | ಕಣ್ಣುಕ್ಕು ನೀರ | ಸಿನಿಮಾ: ಮಗಲಥ ನಟ್ಟು ಮೇರಿ | ಈ ಹಾಡಿಗೆ ಆರ್‌.ಪಾರ್ಥಸಾರತಿ ಸಂಗೀತ ಸಂಯೋಜನೆಯಿದೆ. ಪಿ.ಬಿ.ಶ್ರೀನಿವಾಸ್ ಅವರೊಂದಿಗೆ ಈ ಡ್ಯೂಯೆಟ್‌ ಗೀತೆಗೆ ದನಿಯಾಗಿದ್ದಾರೆ ಜಾನಕಿ.

ಮಲಯಾಳಂ | ಇರುಳ್‌ ಮೂಡುಕಾಯೋ ಎನ್ ವಾಝಿಲ್‌ | ಸಿನಿಮಾ: ಮಿನ್ನುನ್ನಾಥೆಲಾಮ್‌ ಪೊಣ್ಣಲ್ಲ | ಎಸ್‌.ಎನ್‌.ರಂಗನಾಥನ್ ಸಂಗೀತ ಸಂಯೋಜನೆಯ ಹಾಡಿದು. ‘ನಾಗಿನ್‌’ ಹಿಂದಿ ಚಿತ್ರಕ್ಕಾಗಿ ಹೇಮಂತ್ ಕುಮಾರ್ ಸಂಗೀತ ಸಂಯೋಜಿಸಿದ್ದ, ಲತಾ ಮಂಗೇಶ್ಕರ್‌ ಹಾಡಿದ್ದ ಹಾಡಿನ ಟ್ಯೂನ್‌ ಇಲ್ಲಿ ಬಳಕೆಯಾಗಿತ್ತು.

ತೆಲುಗು | ಗೀತೆ: ನೀ ಆಸಾ ಅದಿಯಾಸಾ | ಸಿನಿಮಾ: ಎಂಎಲ್‌ಎ | ಮೊದಲ ಹಾಡು ಪ್ರಯತ್ನದಲ್ಲೇ ಐವತ್ತರ ದಶಕದ ಜನಪ್ರಿಯ ಗಾಯಕ ಘಂಟಸಾಲ ಅವರೊಂದಿಗೆ ಹಾಡುವ ಅದೃಷ್ಟ ಅವರದಾಯ್ತು. ಸಂಗೀತ ಸಂಯೋಜಕ ಪೆಂಡ್ಯಾಲ. ಜಾನಕಮ್ಮನವರ ಮೊದಲ ಈ ಹಾಡು ಸಾಕಷ್ಟು ಜನಪ್ರಿಯವಾಯ್ತು. ಇಂದಿಗೂ ಅದು ಕ್ಲಾಸಿಕ್‌ ಹಾಡು. ಇದೇ ಸಿನಿಮಾಗೆ ಅವರು ಘಂಟಸಾಲ ಜೊತೆಗೆ ‘ಇದೇನಂಡಿ ಇದೇನಂಡಿ ಭಾಗ್ಯನಗರಮು’ ಡ್ಯೂಯೆಟ್ ಹಾಡಿದ್ದಾರೆ.

https://youtu.be/qpKgMTeY2Yc

ಸಿನ್ಹಳ | ಸದೈ ವೇದನಾ | ಸಿನಿಮಾ: ಅಯಿಯೈ ಮುಳ್ಳಿಯಿ | ‘ಭಾಯ್‌ ಭಾಯ್‌’ ಹಿಂದಿ ಚಿತ್ರದ ಸಿನ್ಹಳ ಅವತರಣಿಕೆಯ ಸಿನಿಮಾದ ಐದು ಹಾಡುಗಳನ್ನು ಜಾನಕಮ್ಮ ಹಾಡಿದ್ದರು. ಮೂಲ ಹಿಂದಿ ಚಿತ್ರದಲ್ಲಿ ಲತಾ ಮಂಗೇಶ್ಕರ್‌ ಹಾಡಿದ್ದರು.
(Information – Photo credit: S Janaki Net)

ಜಾನಕಮ್ಮ ಮೊದಲ ಹಾಡು ಹಾಡಿದ್ದು ‘ವಿಧಿಯಿನ್ ವಿಳಯಟ್ಟು’ ತಮಿಳು ಚಿತ್ರಕ್ಕೆ. ಟಿ.ಛಲಪತಿ ರಾವ್ ಸಂಗೀತ ಸಂಯೋಜಕರು. ಈ ಸಿನಿಮಾ ತೆರೆಕಾಣಲಿಲ್ಲ.

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ