ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಸಿನಿಮಾ ಮತ್ತು ನಂಬಿಕೆಗಳು!

Share this post
ಪ್ರಗತಿ ಆಶ್ವತ್ಥ ನಾರಾಯಣ
ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ

ಚಿತ್ರದ ಒಂದು ಸನ್ನಿವೇಶದಲ್ಲಿ ಪಾತ್ರಧಾರಿಯ ಸಾವಿನ ದೃಶ್ಯ ಬರುತ್ತದೆ. ಹಾಗೆ ಆ ದೃಶ್ಯ ಚಿತ್ರೀಕರಿಸಿದ ನಂತರ ಆ ಪಾತ್ರಧಾರಿ ಸಾವಿನ ಭಂಗಿಯಿಂದ ಏಳುವ ದೃಶ್ಯವನ್ನು  ಸಹ ಚಿತ್ರೀಕರಿಸಲಾಗುತ್ತಿತ್ತು!

ಎಲ್ಲಾ ಕಡೆ ಇರುವಂತೆ ನಮ್ಮ ಚಿತ್ರರಂಗದಲ್ಲೂ ಕೆಲವು ನಂಬಿಕೆ, ಆಚರಣೆಗಳು ನಡೆದುಕೊಂಡು ಬಂದಿವೆ. ಹೊಸ ಚಿತ್ರದ ಚಿತ್ರೀಕರಣವನ್ನು ಆರಂಭಿಸುವ ಮುನ್ನ ಒಳ್ಳೆಯ ಮುಹೂರ್ತ, ದಿನ, ಕಾಲ ನೋಡುವುದು ವಾಡಿಕೆ. ನಿರ್ಮಾಪಕರು ಪ್ರಥಮ ದೃಶ್ಯವನ್ನು ಚಿತ್ರೀಕರಿಸಲು ಅದೃಷ್ಟವಂತರು ಎಂದು ತಾವು ನಂಬಿರುವ ವ್ಯಕ್ತಿಗಳಿಂದ ಕ್ಲ್ಯಾಪ್‌ ಹಾಗೂ ಕ್ಯಾಮೆರಾ ಸ್ವಿಚ್‌ಆನ್ ಮಾಡಿಸುತ್ತಾರೆ.

ಇದಲ್ಲದೆ ಪ್ರತಿದಿನವೂ ಕ್ಯಾಮರಾ, ಸೌಂಡ್, ಮತ್ತು ಇತರೆ ಪರಿಕರಗಳಿಗೆ ಪೂಜೆ ಸಲ್ಲಿಸಿದ ನಂತರವೇ ಅಂದಿನ ಚಿತ್ರೀಕರಣ ಶುರುವಾಗುವುದು. ಯಾವುದೋ ಕಲಾವಿದ ಮೇಕಪ್ ಮಾಡಿಕೊಂಡು ತನ್ನ ದೃಶ್ಯಗಳಿಗಾಗಿ ಕಾಯುತ್ತಿರುತ್ತಾರೆ, ಆದರೆ ಕಾರಣನಾಂತರದಿಂದ ಅಂದು ಅ ಕಲಾವಿದರ ದೃಶ್ಯ ಚಿತ್ರೀಕರಣ ಮಾಡಲು ಸಾಧ್ಯವಾಗುವುದಿಲ್ಲ. ಹಾಗೆಯೇ ಮೇಕಪ್ ತೆಗೆಯಬೇಕಾಗುತ್ತದೆ. ಹಾಗೆ ಒಂದೂ ಶಾಟ್ ಚಿತ್ರೀಕರಣವಿಲ್ಲದೆ ಮೇಕಪ್ ತೆಗೆಯುವುದು ಆ ಕಲಾವಿದರ ವೃತ್ತಿ ಜೀವನಕ್ಕೆ ಒಳ್ಳೆಯದಲ್ಲವೆಂಬ ನಂಬಿಕೆ. ಅದಕ್ಕೆ ಪರಿಹಾರವಾಗಿ ನಿರ್ದೇಶಕರು ಒಂದು ಪೋಟೋ ತೆಗೆಸಿಕೊಂಡು ಮೇಕಪ್ ತೆಗೆಯುತ್ತಿದ್ದರು!

ಚಿತ್ರದ ಒಂದು ಸನ್ನಿವೇಶದಲ್ಲಿ ಪಾತ್ರಧಾರಿಯ ಸಾವಿನ ದೃಶ್ಯ ಬರುತ್ತದೆ. ಹಾಗೆ ಆ ದೃಶ್ಯ ಚಿತ್ರೀಕರಿಸಿದ ನಂತರ ಆ ಪಾತ್ರಧಾರಿ ಸಾವಿನ ಭಂಗಿಯಿಂದ ಏಳುವ ದೃಶ್ಯವನ್ನು  ಸಹ ಚಿತ್ರೀಕರಿಸಲಾಗುತ್ತಿತ್ತು. ಅದರೆ ಆ ತುಣುಕುಗಳು ಚಿತ್ರದಲ್ಲಿ ಇರುತ್ತಿರಲಿಲ್ಲ. ಇನ್ನು ಚಿತ್ರೀಕರಣ ಪೂರ್ಣ ಮುಗಿದು ಕೊನೆಯ ಶಾಟ್ ತೆಗೆದ ನಂತರ ಎಲ್ಲರಿಗೂ ಸಿಹಿ ಹಂಚಿ, ಕುಂಬಳಕಾಯಿ ತಂದು ಎಲ್ಲಾ ಶೂಟಿಂಗ್ ಪರಿಕರಗಳಿಗೂ ಪೂಜೆ ಸಲ್ಲಿಸಿ ಕುಂಬಳಕಾಯಿ ಒಡೆದರೆ ಚಿತ್ರೀಕರಣ ಮುಕ್ತಾಯವಾದಂತೆ. ಹೀಗೆ, ಇಂತಹ ಇನ್ನೂ ಹತ್ತಾರು ವಿಶಿಷ್ಟ ಆಚರಣೆ, ನಂಬಿಕೆಗಳು ಆಗ ಜಾರಿಯಲ್ಲಿದ್ದವು. ಈಗ ಹೇಗಿದೆಯೋ!?

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ಬೇಡರ ಕಣ್ಣಪ್ಪ

`ಬೇಡರ ಕಣ್ಣಪ್ಪ’ (1954) ಚಿತ್ರದೊಂದಿಗೆ ರಾಜಕುಮಾರ್‌ ನಾಯಕನಟರಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದು ಗೊತ್ತಿರುವಂಥದ್ದೆ. ಈ