ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಶಿಸ್ತಿನ ಮಾಲೀಕರ ಸುಸಜ್ಜಿತ ಚಾಮುಂಡೇಶ್ವರಿ ಸ್ಟುಡಿಯೋ

Share this post
ಪ್ರಗತಿ ಅಶ್ವತ್ಥ ನಾರಾಯಣ
ಸ್ಥಿರಚಿತ್ರ ಛಾಯಾಗ್ರಾಹಕ

ಸ್ಟುಡಿಯೋ ಆವರಣದಲ್ಲಿ ಸಿಗರೇಟು ಸೇದಿದ ಕ್ಯಾಮರಾಮನ್‌ ಸಿಗರೇಟಿನ ತುಂಡು ಅಲ್ಲೇ ಎಸೆದರು. ‘ರೀ ಮಿಸ್ಟರ್ ಅದನ್ನು ತೆಗೆಯಿರಿ’ ಎಂದರು ಮಾಲೀಕ ರಾಮುಲುನಾಯ್ಡು. –  ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರ ಚಾಮುಂಡೇಶ್ವರಿ ಸ್ಟುಡಿಯೋ ಕುರಿತ ನೆನಪು.

ಕರ್ನಾಟಕದಲ್ಲಿನ ಸಿನಿಮಾ ಸ್ಟುಡಿಯೋಗಳಲ್ಲಿ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋಗೆ ವಿಶಿಷ್ಟ ಸ್ಥಾನವಿದೆ. ಶಿಸ್ತು, ನೈರ್ಮಲ್ಯ, ಶೂಟಿಂಗ್ ಮಾಡಲು ಪೂರಕವಾದ ವಾತಾವರಣಗಳಿಗೆ ಹೆಸರುವಾಸಿಯಾಗಿದ್ದ ಸ್ಟುಡಿಯೋ. ಇದರ ಮೊದಲ ಮಾಲಿಕರು ಶ್ರೀ ರಾಮಲು ನಾಯ್ಡು ಅವರು ಕೊಯಮತ್ತೂರಿನಲ್ಲಿ ಪಕ್ಷಿರಾಜ ಸ್ಟುಡಿಯೋ ನಡೆಸುತ್ತಿದ್ದರು. 70ರ ದಶಕದಲ್ಲಿ ಕರ್ನಾಟಕದ ಚಿತ್ರೋದ್ಯಮದ ಬೆಳೆವಣಿಗೆ ಕಂಡು ತಮ್ಮ ಸ್ಟುಡಿಯೋಗೆ ‘ಚಾಮುಂಡೇಶ್ವರಿ ಸ್ಟುಡಿಯೋ’ ಎಂದು ಮರುನಾಮಕರಣ ಮಾಡಿ ಬೆಂಗಳೂರಿಗೆ ಸ್ಟುಡಿಯೋ ಸ್ಥಳಾಂತರ ಮಾಡಿದರು.

ಕೊಯಮತ್ತೂರಿನ ಪಕ್ಷಿರಾಜ ಸ್ಟುಡಿಯೋ ಮಾಲೀಕರಾದ ಶ್ರೀರಾಮುಲು ನಾಯ್ಡು ಅವರು ನಿರ್ಮಿಸಿ, ನಿರ್ದೇಶಿಸಿದ ‘ಬೆಟ್ಟದ ಕಳ್ಳ’ (1957) ಚಿತ್ರತಂಡ. 1) ಕುಪ್ಪುಸ್ವಾಮಿ ನಾಯ್ಡು, 2) ನಾಯಕನಟ ಕಲ್ಯಾಣ್ಕುಮಾರ್, 3) ಶ್ರೀರಾಮುಲು ನಾಯ್ಡು, 4) ಈ ಚಿತ್ರದ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ನಾಗೇಶ್ ಬಾಬ (ಪ್ರಗತಿ ಅಶ್ವತ್ಥ ನಾರಾಯಣ ಅವರ ಸಹೋದರ), 5) ನಟಿ ಮೈನಾವತಿ, 6) ನಟಿ ಫಂಡರೀಬಾಯಿ

ಮೊದಲು ಸ್ಟುಡಿಯೋದಲ್ಲಿ ಒಂದು ಪ್ಲೋರ್ ಇತ್ತು. ನಂತರ ಮೂರು ಫ್ಲೋರ್ ಮಾಡಿದರು. ಚಿತ್ರನಿರ್ಮಾಣಕ್ಕೆ ಬೇಕಾಗಿದ್ದ ಎಲ್ಲಾ ಸೌಲಭ್ಯಗಳು ಅಲ್ಲಿದ್ದವು‌. ಲ್ಯಾಬ್, ಹಾಡುಗಳ ಧ್ವನಿಮುದ್ರಣ, ಎಡಿಟಿಂಗ್, ಡಬಿಂಗ್ ವ್ಯವಸ್ಥೆ, ಹೀಗೆ ಎಲ್ಲವೂ. ಮತ್ತೊಂದು ಅನೂಕೂಲಕರ ವಿಷಯವೆಂದರೆ ನಗರದ ಮದ್ಯಬಾಗದಲ್ಲಿದ್ದುದು. ಇತರೆ ಯಾವುದೇ ಸ್ಟುಡಿಯೋನಲ್ಲಿ ಇಲ್ಲದ ಶಿಸ್ತು ಅಲ್ಲಿತ್ತು. ಶೂಟಿಂಗ್ ಸೆಟ್‌ನಲ್ಲಿ ಯಾರೂ ಸಿಗರೇಟು ಸೇದುವಂತೆ ಇರಲಿಲ್ಲ. ನಂತರದ ದಿನಗಳಲ್ಲಿ ವಿನಾಯಿತಿ ದೊರೆತು Ashtray ಬಳಸಬೇಕಾಗಿತ್ತು.

ಒಮ್ಮೆ ಒಬ್ಬ ಕ್ಯಾಮೆರಾಮನ್ ಸ್ಟುಡಿಯೋ ಆವರಣದಲ್ಲಿ ಸಿಗರೇಟ್ ತುಂಡನ್ನು ನೆಲದ ಮೇಲೆ ಹಾಕಿ ಮುಂದೆ ಹೋಗುತ್ತಿದ್ದರು. ಹಿಂದೆ ಮಾಲೀಕ ಶ್ರೀ ರಾಮಲು ನಾಯ್ಡು ಅವರು ಇದ್ದುದನ್ನು ಆತ ನೋಡಿರಲಿಲ್ಲ. ಕೋಪಗೊಂಡ ಮಾಲೀಕರು ‘ರೀ ಮಿಸ್ಟರ್ ಅದನ್ನು ತೆಗೆಯಿರಿ’ ಎಂದರು. ಅಲ್ಲಿನ ಶಿಸ್ತು ಗೊತ್ತಿದ್ದ ಕ್ಯಾಮರಾಮನ್ ಏನೂ ಮಾತನಾಡದೆ ಸಿಗರೇಟ್ ತುಂಡನ್ನು ತೆಗೆದು ಪಕ್ಕದಲ್ಲಿದ್ದ ಕಸದ ತೊಟ್ಟಿಗೆ ಹಾಕಿದರು. ಪಕ್ಕದಲ್ಲೇ ಮತ್ತೊಂದು ಸಿಗರೇಟ್ ತುಂಡು ಇತ್ತು. ‘ಅದನ್ನೂ ತೆಗೆದುಹಾಕಿ. ಅದನ್ನೂ ನೀವೇ ಹಾಕಿರಬಹುದು’ ಎಂದು ಹೇಳಿದರು. ಕ್ಯಾಮರಾಮನ್ ಮರುಮಾತನಾಡದೆ ಆ ತುಂಡನ್ನು ಕಸದಬುಟ್ಟಿಯಲ್ಲಿ ಹಾಕಿ ಮುಂದೆ ನಡೆದರು. ನನ್ನ ಕಣ್ಣಮುಂದೆ ನಡೆದ ಘಟನೆಯಿದು. ಶಿಸ್ತಿನ ಪಾಠ, ಶಿಕ್ಷೆ ಎರಡೂ ಒಟ್ಟಿಗೆ! ಪ್ರಸ್ತುತ ಈಗ ಸ್ಟುಡಿಯೋದಲ್ಲಿ ಶೂಟಿಂಗ್ ಫ್ಲೋರ್‌ಗಳು ಇಲ್ಲ. ಕೆಲವು ವಿಭಾಗಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.

ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಮತ್ತು ಅವರ ಪತ್ನಿ ‘ಉಪಾಸನೆ’ ಸಿನಿಮಾ ವೀಕ್ಷಣೆಗೆ ಬಂದ ಸಂದರ್ಭ. ನಿರ್ದೇಶಕ ಪುಟ್ಟಣ್ಣ ಕಣಗಾಲ್‌, ನಿರ್ಮಾಪಕ ರಾಮನಾಥ್‌ ಮತ್ತಿತರರು ಇದ್ದಾರೆ.

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ