ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಹಂಸಲೇಖ – ರಾಹುಚಂದ್ರ

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಹಂಸಲೇಖ ಅವರು 1981ರಲ್ಲೇ ‘ರಾಹುಚಂದ್ರ’ ಚಿತ್ರದೊಂದಿಗೆ ನಿರ್ದೇಶಕರಾಗಬೇಕಿತ್ತು. ಈ ಚಿತ್ರದ ಮುಹೂರ್ತ ಸಂದರ್ಭದ ಫೋಟೊ ಇದು. ಚಿತ್ರದಲ್ಲಿ ಲೋಕೇಶ್, ಪದ್ಮಾವಾಸಂತಿ ಪ್ರಮುಖ ಪಾತ್ರಗಳಿಗೆ ಆಯ್ಕೆಯಾಗಿದ್ದರು. ಗಾಯಕ ಗುರುರಾಜ್ ಹೊಸಕೋಟೆ ಅವರ ಜನಪ್ರಿಯ ಗೀತೆ ‘ಕಲೀತ ಹುಡುಗಿ ಕುದುರಿ ನಡಿಗಿ’ ಹಾಡನ್ನು ಧ್ವನಿಮುದ್ರಿಸಿಕೊಳ್ಳಲಾಗಿತ್ತು. ಕಾರಣಾಂತರಗಳಿಂದ ಚಿತ್ರ ಸ್ಥಗಿತಗೊಂಡಿತು. ಮುಂದೆ ‘ಪ್ರೇಮಲೋಕ’ದ ಸಂಚಲನದೊಂದಿಗೆ ಸಂಗೀತ ಸಂಯೋಜನೆ, ಚಿತ್ರಸಾಹಿತ್ಯದಲ್ಲಿ ಅವರು ಹೊಸ ಹಾದಿ ಸೃಷ್ಟಿಸಿದ್ದು ಇತಿಹಾಸ. ಇಂದು (ಜೂನ್‌ 23) ಹಂಸಲೇಖ ಹುಟ್ಟುಹಬ್ಬ. (ಫೋಟೊ – ಮಾಹಿತಿ ಕೃಪೆ: ವೆಂಕಟೇಶ್ ನಾರಾಯಣಸ್ವಾಮಿ)

Share this post