‘ಅನುಗ್ರಹ’ (1971) ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ನಟರಾದ ಬಾಲಕೃಷ್ಣ ಮತ್ತು ನರಸಿಂಹರಾಜು ಅವರಿಗೆ ಚಿತ್ರದ ನಿರ್ದೇಶಕ ಎಚ್.ಎಲ್.ಎನ್.ಸಿಂಹ ಅವರಿಂದ ಸೂಚನೆ. ನಾಟಕಕಾರ, ನಟ, ಚಿತ್ರನಿರ್ದೇಶಕ ಎಚ್.ಎಲ್.ಎನ್.ಸಿಂಹ ಕನ್ನಡ ಚಿತ್ರರಂಗಕ್ಕೆ ಭದ್ರ ಅಡಿಪಾಯ ಹಾಕಿದ ಮಹನೀಯರಲ್ಲೊಬ್ಬರು. ವರನಟ ಡಾ.ರಾಜಕುಮಾರ್ ನಾಯಕನಟರಾಗಿ ಪರಿಚಯವಾದ ‘ಬೇಡರ ಕಣ್ಣಪ್ಪ’, ಸಿಂಹ ನಿರ್ದೇಶನದಲ್ಲಿ ತಯಾರಾದ ಸಿನಿಮಾ. ‘ಅನುಗ್ರಹ’ ಅವರ ನಿರ್ದೇಶನದ ಕೊನೆಯ ಸಿನಿಮಾ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

‘ಅನುಗ್ರಹ’ ಹೊರಾಂಗಣ ಚಿತ್ರೀಕರಣ
- ಕನ್ನಡ ಸಿನಿಮಾ
Share this post