ಜ್ಞಾನಪೀಠ ಪುರಸ್ಕೃತ ಸಾಹಿತಿ ಕುವೆಂಪು ಅವರ ‘ಬೊಮ್ಮನಹಳ್ಳಿಯ ಕಿಂದರಜೋಗಿ’ ಕೃತಿ ‘ರಂಗಾಯಣ’ಕ್ಕೆ (ಮೈಸೂರು) ನಾಟಕವಾಯ್ತು (1990). ಖ್ಯಾತ ರಂಗಕರ್ಮಿ ಬಿ.ವಿ.ಕಾರಂತರು ಕೃತಿಯನ್ನು ರಂಗಕ್ಕೆ ಅಳವಡಿಸಿದ್ದರು. ಆಗೊಮ್ಮೆ ಕಾರಂತರು ನಾಟಕದ ಕಲಾವಿದರನ್ನೆಲ್ಲಾ ಕುವೆಂಪು ಅವರ ‘ಉದಯರವಿ’ ಮನೆಗೆ ಕರೆದೊಯ್ದಿದ್ದರು. ಕಲಾವಿದರೆಲ್ಲರೂ ಕುವೆಂಪು ಅವರೆದುರು ಕಾರಂತರ ಸಂಗೀತ ಸಂಯೋಜನೆಯಲ್ಲಿ ‘ಕಿಂದರಜೋಗಿ’ ಕಾವ್ಯವನ್ನು ಪ್ರಸ್ತುತಪಡಿಸಿದ ಸಂದರ್ಭವಿದು. ಆಗ ‘ರಂಗಾಯಣ’ದ ವಿದ್ಯಾರ್ಥಿಯಾಗಿದ್ದ ನಟ ಮಂಡ್ಯ ರಮೇಶ್ ಫೋಟೋದಲ್ಲಿದ್ದಾರೆ.

ಕುವೆಂಪು – ಕಿಂದರಜೋಗಿ
- ಕನ್ನಡ ರಂಗಭೂಮಿ - ಸಿನಿಮಾ
Share this post