ಕೊಳ್ಳೇಗಾಲ ಸಮೀಪ ಎ.ವಿ.ಶೇಷಗಿರಿ ರಾವ್ ನಿರ್ದೇಶನದ ‘ಸಂಪತ್ತಿಗೆ ಸವಾಲ್’ (1974) ಸಿನಿಮಾದ ಚಿತ್ರೀಕರಣ ನಡೆದಿತ್ತು. ಆಗ ಸಾಮಾಜಿಕ ಕಾರ್ಯವೊಂದರ ಸಹಾಯಾರ್ಥ ಸಿನಿಮಾ ಕಲಾವಿದರು ‘ಎಚ್ಚೆಮನಾಯಕ’ ನಾಟಕ ಪ್ರದರ್ಶಿಸಿದ್ದರು. ಈ ಫೋಟೋದಲ್ಲಿ ನಟರಾದ ವಜ್ರಮುನಿ ಮತ್ತು ತೂಗುದೀಪ ಶ್ರೀನಿವಾಸ್ ಇದ್ದಾರೆ. ಎಡತುದಿಯಲ್ಲಿ ಸಿಪಾಯಿ ಪಾತ್ರದಲ್ಲಿರುವವರು ಮೇಕಪ್ ಕಲಾವಿದ ಎಂ.ಎಸ್.ಕೇಶವ. ನಾಟಕದಲ್ಲಿ ನಟ ರಾಜಕುಮಾರ್ ಅವರು ಶೀರ್ಷಿಕೆ ಪಾತ್ರ ನಿರ್ವಹಿಸಿದ್ದರು. (ಫೋಟೊ ಕೃಪೆ: ಎಂ.ಎಸ್.ಕೇಶವ)

ವಜ್ರಮುನಿ – ತೂಗುದೀಪ ಶ್ರೀನಿವಾಸ್
- ಕನ್ನಡ ರಂಗಭೂಮಿ - ಸಿನಿಮಾ
Share this post