ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಹೊಸ ಅಲೆಯ ಸಿನಿಮಾಗಳ ಪ್ರಮುಖ ನಿರ್ದೇಶಕ ಮೃಣಾಲ್ ಸೇನ್

ಪೋಸ್ಟ್ ಶೇರ್ ಮಾಡಿ

ಭಾರತದ ಹೊಸ ಅಲೆಯ ಸಿನಿಮಾಗಳ ಸಂದರ್ಭದಲ್ಲಿ ಸತ್ಯಜಿತ್ ರೇ, ಋತ್ವಿಕ್ ಘಟಕ್‌ ಅವರೊಂದಿಗೆ ಗುರುತಿಸಬಹುದಾದ ಮತ್ತೊಬ್ಬ ಪ್ರಮುಖ ಬೆಂಗಾಲಿ ನಿರ್ದೇಶಕ ಮೃಣಾಲ್‌ ಸೇನ್‌. ಇಂದು (ಮೇ 14) ಅವರ ಜನ್ಮದಿನ.

ಉತ್ತಮ್‌ ಕುಮಾರ್ ನಟಿಸಿದ್ದ ‘ರಾತ್ ಭೋರೆ’ (1955) ಮೃಣಾಲ್ ಸೇನ್‌ ನಿರ್ದೇಶನದ ಚೊಚ್ಚಲ ಬೆಂಗಾಲಿ ಸಿನಿಮಾ. ಆಗಿನ್ನೂ ಸ್ಟಾರ್ ಆಗಿರದ ಉತ್ತಮ್ ‌ಕುಮಾರ್‌ ಅಭಿನಯದ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿತ್ತು. ನಿರ್ದೇಶನದ ಎರಡನೇ ಸಿನಿಮಾದಲ್ಲಿ (ನೀಲ್‌ ಅಕಶೇರ್‌ ನೀಛೇ) ಪ್ರೇಕ್ಷಕರು ಮೃಣಾಲ್‌ರನ್ನು ಗುರುತಿಸಿದರು. ತಮ್ಮ ನಿರ್ದೇಶನದ ಮೂರನೇ ಸಿನಿಮಾ ‘ಬೈಶೇ ಶ್ರವಣ್’ನಲ್ಲಿ ಅವರಿಗೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿಸಿಕೊಟ್ಟಿತು. ನಂತರ ಅವರು ನಿರ್ದೇಶಿಸಿದ ‘ಭುವನ್‌ ಶೋಮ್‌’ ಭಾರತೀಯ ಹೊಸ ಅಲೆಯ ಸಿನಿಮಾಗಳ ಯಾದಿಯಲ್ಲಿ ಅತ್ಯಂತ ಪ್ರಮುಖ ಚಿತ್ರವೆಂದು ಗುರುತಿಸಿಕೊಂಡಿತು. ಬೆಂಗಾಲಿ ನಿರ್ದೇಶಕರಾದ ಸತ್ಯಜಿತ್ ರೇ ಮತ್ತು ಋತ್ವಿಕ್‌ ಘಟಕ್‌ ಅವರ ಜೊತೆ ಮೃಣಾಲ್‌ ಅವರೂ ಭಾರತೀಯ ಹೊಸ ಅಲೆಯ ಪ್ರಮುಖ ನಿರ್ದೇಶಕರಾಗಿ ಗುರುತಿಸಿಕೊಂಡರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೃಣಾಲ್ ಸಿನಿಮಾಗಳು ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸತೊಡಗಿದವು. ಸಮಾಜದ ವಾಸ್ತವಗಳನ್ನು ತೆರೆಯ ಮೇಲೆ ಕಲಾತ್ಮಕವಾಗಿ ಕಟ್ಟಿಕೊಡುವ ನಿರ್ದೇಶಕನೆಂದು ಅವರು ಹೆಸರಾದರು. ಮಾರ್ಕ್ಸ್‌ ಸಿದ್ಧಾಂತವನ್ನು ಪ್ರತಿಪಾದಿಸುವ ಮೃಣಾಲ್‌ ಸೇನ್‌ ತಮ್ಮ ಚಿತ್ರಗಳಲ್ಲೂ ಈ ನಿಲುವುಗಳನ್ನು ದಾಟಿಸಿದರು. ತಮ್ಮ ಬಹುಪಾಲು ಸಿನಿಮಾಗಳಲ್ಲಿ ಮೃಣಾಲ್ ಕೊಲ್ಕೊತ್ತಾವನ್ನು ಒಂದು ಪಾತ್ರ, ಪ್ರೇರಣೆಯಂತೆ ತೋರಿಸಿದರು. ಭಾರತದಲ್ಲಿ ರಾಜಕೀಯ ಸ್ಥಿತ್ಯಂತರಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಮೃಣಾಲ್‌ ಸೇನ್ ಸಿನಿಮಾಗಳು ಜನಸಾಮಾನ್ಯರ ಮೇಲೆ ದೊಡ್ಡ ಪರಿಣಾಮ ಉಂಟುಮಾಡಿದ್ದು ಹೌದು. ಅವರ ಹಲವಾರು ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಗೌರವ ಸಿಕ್ಕಿದೆ. ದಾದಾ ಸಾಹೇಬ್‌ ಫಾಲ್ಕೆ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಮೃಣಾಲ್‌ ಸೇನ್‌ ಪಾತ್ರರಾಗಿದ್ದಾರೆ.

ಮೃಣಾಲ್‌ ಸೇನ್ ಕುರಿತ ಸಾಕ್ಷ್ಯಚಿತ್ರ ಇಲ್ಲಿದೆ..

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿತ್ರರಂಗಕ್ಕೆ ಆಸರೆಯಾದ ಅರಸು

ಮೈಸೂರು ಅರಸು ಕುಟುಂಬದವರು ಕೆಂಪರಾಜ ಅರಸ್. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರ ಸಹೋದರ. ಗುಬ್ಬಿ ವೀರಣ್ಣನವರು ನಿರ್ಮಿಸಿದ  `ಜೀವನ

ನಟ, ನಿರ್ಮಾಪಕ ಬಿ.ಎಂ.ವೆಂಕಟೇಶ್

ಬೆಂಗಳೂರು ಸಮೀಪದ ಇಮ್ಮಡಿಹಳ್ಳಿಯ ವೆಂಕಟೇಶ್‌ ಅವರಿಗೆ ಶಾಲೆಯಲ್ಲಿ ಓದುತ್ತಿದ್ದಾಗ ಗಾಯಕನಾಗುವ ಉಮೇದು ಇತ್ತು. ಹಿನ್ನೆಲೆ ಗಾಯಕನಾಗುವ ಆಸೆಯಿದ್ದ ಅವರು ಕ್ರಮೇಣ

ಯಶಸ್ವೀ ಚಿತ್ರನಿರ್ದೇಶಕ ವಿಜಯ್

ತಾರಾವ್ಯವಸ್ಥೆಯ ಪರಿಣಾಮಗಳಿಂದ ತೆರೆಯ ಮರೆಯಲ್ಲಿಯೇ ಉಳಿದ  ವಿಜಯ್ ಅವರು ತಾರೆಗಳ ಹಂಗಿಲ್ಲದೆ ನಿರ್ದೇಶಿಸಿದ ‘ರಂಗಮಹಲ್ ರಹಸ್ಯ’ ಅಪೂರ್ವ ಸಸ್ಪೆನ್ಸ್ ಚಿತ್ರ.