ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ನಜೀರ್

ಕಲಾನಿರ್ದೇಶಕ
ಪೋಸ್ಟ್ ಶೇರ್ ಮಾಡಿ

ಶಿರಸಿ ಮೂಲದ ನಜೀರ್ ಕಲಿತದ್ದು ಚಿತ್ರಕಲೆ. ನಂತರ ಮದರಾಸಿನ ಫಿಲ್ಮ್ ಸೆಂಟರ್ ಸ್ಟುಡಿಯೋದಲ್ಲಿ ಕೆಲಸ ಮಾಡಿದರು. ಇವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು ನಿರ್ದೇಶಕ ಸಿದ್ದಲಿಂಗಯ್ಯ ಮತ್ತು ನಿರ್ಮಾಪಕ ಆರ್.ಲಕ್ಷ್ಮಣ್‌. ಸಿದ್ದಲಿಂಗಯ್ಯ ನಿರ್ದೇಶನದ `ದೂರದ ಬೆಟ್ಟ’ ಚಿತ್ರದ ಕಲಾನಿರ್ದೇಶಕರಾಗಿ ನಜೀರ್ ಚಿತ್ರರಂಗ ಪ್ರವೇಶಿಸಿದರು. `ಬೂತಯ್ಯನ ಮಗ ಅಯ್ಯು’ ಸಿನಿಮಾದ ಅದ್ಭುತ ಕ್ಲೈಮ್ಯಾಕ್ಸ್ ರೂಪುಗೊಳ್ಳುವಲ್ಲಿ ನಜೀರ್ ಕೈಚಳಕವೂ ಇದೆ. `ಬಂಗಾರದ ಪಂಜರ’, `ಜೀವನ ಚಕ್ರ’, `ಬಂಧನ’, `ರಣಧೀರ’, `ಹೇಮಾವತಿ’, `ಜೀವನ ಚೈತ್ರ’ ಇವರ ಕಲಾ ನಿರ್ದೇಶನದ ಪ್ರಮುಖ ಸಿನಿಮಾಗಳು. `ಸಿಪಾಯಿ’ ಚಿತ್ರದಲ್ಲಿನ ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ ನಜೀರ್ ರಾಜ್ಯ ಪ್ರಶಸ್ತಿ (1995-96) ಪಡೆದಿದ್ದರು. ಕನ್ನಡ ಚಿತ್ರರಂಗದ ಮತ್ತೊಬ್ಬ ಪ್ರಮುಖ ಕಲಾನಿರ್ದೇಶಕ ಇಸ್ಮಾಯಿಲ್ ಅವರೊಂದಿಗೆ ನಜೀರ್ ಈ ಪ್ರಶಸ್ತಿ ಹಂಚಿಕೊಂಡಿದ್ದರು.

ಸಿದ್ದಲಿಂಗಯ್ಯ ನಿರ್ದೇಶನದ `ಬಿಳಿಗಿರಿಯ ಬನದಲ್ಲಿ’ (1980) ಚಿತ್ರಕ್ಕಾಗಿ ಕಲಾ ನಿರ್ದೇಶಕ ನಜೀರ್ ವಿನ್ಯಾಸಗೊಳಿಸಿದ್ದ ಗೆಸ್ಟ್ ಹೌಸ್ ಸೆಟ್ ಇದು. ಜೋಗ್ ಫಾಲ್ಸ್ ಸಮೀಪ ರಸ್ತೆಯ ತಿರುವೊಂದರಲ್ಲಿ ಈ ಸುಂದರ ಸೆಟ್ ಹಾಕಲಾಗಿತ್ತು.

ನೆನಪು ಸಾಧನೆ - ಸ್ಫೂರ್ತಿ

ಅಪರೂಪದ ಸಾಧಕ ವೀರಾಸ್ವಾಮಿ

ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ `ಡ್ರೀಮ್‍ಲ್ಯಾಂಡ್’ ಸಿನಿಮಾ ಹಂಚಿಕೆ ಕಚೇರಿ ನಡೆಸುತ್ತಿದ್ದರು. ಅವರಲ್ಲಿ

ಮಹಾನಟಿ ಮನೋರಮ

‘ಮಾಳಯಿಟ್ಟ ಮಂಗೈ’ (1958) ತಮಿಳು ಚಿತ್ರದೊಂದಿಗೆ ಮನೋರಮ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. 1985ರಲ್ಲಿ

ಜನಪ್ರಿಯ ಪೋಸ್ಟ್ ಗಳು

ಸಿನಿಮಾ ಮಾಹಿತಿ ಭಂಡಾರ ಆರ್.ಲಕ್ಷ್ಮಣ್

ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಶ್ರಮಿಸಿದ ಹಲವರಲ್ಲಿ ಆರ್‌.ಲಕ್ಷ್ಮಣ್ ಹೆಸರೂ ಪ್ರಸ್ತಾಪವಾಗುತ್ತದೆ. ಚಿತ್ರನಿರ್ಮಾಪಕ, ವಿತರಕರಾಗಿ ಅಷ್ಟೇ ಅಲ್ಲ ಕನ್ನಡ ಸಿನಿಮಾಗೆ

ಅಭಿಜಾತ ಕಲಾವಿದ ನರಸಿಂಹರಾಜು

ಜುಲೈ ತಿಂಗಳಿನಲ್ಲಿ ಹುಟ್ಟಿ ಜುಲೈ ತಿಂಗಳಿನಲ್ಲಿಯೇ ಇಹಲೋಕ ತ್ಯಜಿಸಿದ ಕನ್ನಡದ ಸರ್ವಶ್ರೇಷ್ಠ ಹಾಸ್ಯನಟ ಟಿ.ಆರ್.ನರಸಿಂಹರಾಜು ಅವರು ಈಗ ನಮ್ಮೊಂದಿಗೆ ಇದ್ದಿದ್ದರೆ