ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ನಜೀರ್

ಕಲಾನಿರ್ದೇಶಕ
ಪೋಸ್ಟ್ ಶೇರ್ ಮಾಡಿ

ಶಿರಸಿ ಮೂಲದ ನಜೀರ್ ಕಲಿತದ್ದು ಚಿತ್ರಕಲೆ. ನಂತರ ಮದರಾಸಿನ ಫಿಲ್ಮ್ ಸೆಂಟರ್ ಸ್ಟುಡಿಯೋದಲ್ಲಿ ಕೆಲಸ ಮಾಡಿದರು. ಇವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು ನಿರ್ದೇಶಕ ಸಿದ್ದಲಿಂಗಯ್ಯ ಮತ್ತು ನಿರ್ಮಾಪಕ ಆರ್.ಲಕ್ಷ್ಮಣ್‌. ಸಿದ್ದಲಿಂಗಯ್ಯ ನಿರ್ದೇಶನದ `ದೂರದ ಬೆಟ್ಟ’ ಚಿತ್ರದ ಕಲಾನಿರ್ದೇಶಕರಾಗಿ ನಜೀರ್ ಚಿತ್ರರಂಗ ಪ್ರವೇಶಿಸಿದರು. `ಬೂತಯ್ಯನ ಮಗ ಅಯ್ಯು’ ಸಿನಿಮಾದ ಅದ್ಭುತ ಕ್ಲೈಮ್ಯಾಕ್ಸ್ ರೂಪುಗೊಳ್ಳುವಲ್ಲಿ ನಜೀರ್ ಕೈಚಳಕವೂ ಇದೆ. `ಬಂಗಾರದ ಪಂಜರ’, `ಜೀವನ ಚಕ್ರ’, `ಬಂಧನ’, `ರಣಧೀರ’, `ಹೇಮಾವತಿ’, `ಜೀವನ ಚೈತ್ರ’ ಇವರ ಕಲಾ ನಿರ್ದೇಶನದ ಪ್ರಮುಖ ಸಿನಿಮಾಗಳು. `ಸಿಪಾಯಿ’ ಚಿತ್ರದಲ್ಲಿನ ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ ನಜೀರ್ ರಾಜ್ಯ ಪ್ರಶಸ್ತಿ (1995-96) ಪಡೆದಿದ್ದರು. ಕನ್ನಡ ಚಿತ್ರರಂಗದ ಮತ್ತೊಬ್ಬ ಪ್ರಮುಖ ಕಲಾನಿರ್ದೇಶಕ ಇಸ್ಮಾಯಿಲ್ ಅವರೊಂದಿಗೆ ನಜೀರ್ ಈ ಪ್ರಶಸ್ತಿ ಹಂಚಿಕೊಂಡಿದ್ದರು.

ಸಿದ್ದಲಿಂಗಯ್ಯ ನಿರ್ದೇಶನದ `ಬಿಳಿಗಿರಿಯ ಬನದಲ್ಲಿ’ (1980) ಚಿತ್ರಕ್ಕಾಗಿ ಕಲಾ ನಿರ್ದೇಶಕ ನಜೀರ್ ವಿನ್ಯಾಸಗೊಳಿಸಿದ್ದ ಗೆಸ್ಟ್ ಹೌಸ್ ಸೆಟ್ ಇದು. ಜೋಗ್ ಫಾಲ್ಸ್ ಸಮೀಪ ರಸ್ತೆಯ ತಿರುವೊಂದರಲ್ಲಿ ಈ ಸುಂದರ ಸೆಟ್ ಹಾಕಲಾಗಿತ್ತು.

ನೆನಪು ಸಾಧನೆ - ಸ್ಫೂರ್ತಿ

ಅಪರೂಪದ ಸಾಧಕ ವೀರಾಸ್ವಾಮಿ

ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ `ಡ್ರೀಮ್‍ಲ್ಯಾಂಡ್’ ಸಿನಿಮಾ ಹಂಚಿಕೆ ಕಚೇರಿ ನಡೆಸುತ್ತಿದ್ದರು. ಅವರಲ್ಲಿ

ಮಹಾನಟಿ ಮನೋರಮ

‘ಮಾಳಯಿಟ್ಟ ಮಂಗೈ’ (1958) ತಮಿಳು ಚಿತ್ರದೊಂದಿಗೆ ಮನೋರಮ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. 1985ರಲ್ಲಿ

ಜನಪ್ರಿಯ ಪೋಸ್ಟ್ ಗಳು

ಪ್ರತಿಮಾದೇವಿ

ಕನ್ನಡ ಚಿತ್ರರಂಗದ ಆರಂಭದ ದಿನಗಳ ನಾಯಕನಟಿ ಪ್ರತಿಮಾದೇವಿ. ಹುಟ್ಟೂರು ಉಡುಪಿ. ಅವರ ಜನ್ಮನಾಮ ಮೋಹಿನಿ. ಅಭಿನಯ ಶುರು ಮಾಡಿದ್ದು ನಾಟಕಗಳಲ್ಲಿ.

ಮೇರು ತಾರೆ ದಿಲೀಪ್ ಕುಮಾರ್

ಹಿಂದಿ ಚಿತ್ರರಂಗದ ಮೇರು ನಟ ದಿಲೀಪ್ ಕುಮಾರ್ ಹುಟ್ಟಿದ್ದು ಪೇಶಾವರದಲ್ಲಿ (ಈಗಿನ ಪಾಕಿಸ್ತಾನ) 1922, ಡಿಸೆಂಬರ್ 11ರಂದು. ಜನ್ಮನಾಮ ಮೊಹಮ್ಮದ್

ಕನ್ನಡಕ್ಕೊಬ್ಬರೇ ಬಾಲಣ್ಣ

ಬಾಲಣ್ಣ ತೀರಿಹೋಗಿ 26 ವರ್ಷ ಆಗಿದ್ದರೂ ಅವರಿಗೆ ಅವರ ಪಾತ್ರಗಳಿಗೆ ಸರಿಸಾಟಿ ಯಾರಿದ್ದಾರೆ? ಬಾಲಣ್ಣನವರಿಗೆ ಸರಿಸಾಟಿಯಾಗಿ ನಿಲ್ಲುವವರು ಬಾಲಣ್ಣನವರು ಮಾತ್ರ.

ಎಂ.ವಿ.ವಾಸುದೇವರಾವ್

‘ಚೋಮನದುಡಿ’ ಚಿತ್ರದಲ್ಲಿನ ‘ಚೋಮ’ನ ಪಾತ್ರದ ಅತ್ಯುತ್ತಮ ನಟನೆಗೆ ಕನ್ನಡಕ್ಕೆ ಮೊದಲ ‘ಅತ್ಯುತ್ತಮ ನಟ’ ರಾಷ್ಟ್ರಪ್ರಶಸ್ತಿ ತಂದುಕೊಟ್ಟವರು ವಾಸುದೇವರಾವ್‌. ಬಾಲನಟನಾಗಿ ವೃತ್ತಿರಂಗಭೂಮಿಗೆ