ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

‘ಶೋಲೆ’ – ಬಾಕ್ಸ್ ಆಫೀಸ್ ದಾಖಲೆಗಳು

Share this post

1975, ಆಗಸ್ಟ್‌ 15ರ ಸ್ವಾತಂತ್ರ್ಯ ದಿನದಂದು ‘ಶೋಲೆ’ ಹಿಂದಿ ಸಿನಿಮಾ ಬಿಡುಗಡೆಯಾಗಿತ್ತು. ಮೊದಲ ಎರಡು ವಾರ ಜನರು ಥಿಯೇಟರ್‌ಗೆ ಬರಲಿಲ್ಲ. ಸಿನಿ ವಿಮರ್ಶಕರು ಕೂಡ ಚಿತ್ರವನ್ನು ಟೀಕಿಸಿ ಬರೆದಿದ್ದರು. ಆದರೆ ಮೂರನೇ ವಾರದಲ್ಲಿ ಚಿತ್ರಣ ಸಂಪೂರ್ಣ ಬದಲಾಯ್ತು. ಜನರು ದೊಡ್ಡ ಸಂಖ್ಯೆಯಲ್ಲಿ ಥಿಯೇಟರ್‌ಗೆ ಬರತೊಡಗಿದರು. ಪ್ರೇಕ್ಷಕರ ಮೆಚ್ಚುಗೆಯ ಮಾತುಗಳೇ ಪ್ರಚಾರದ ಸರಕಾಯ್ತು. ಮುಂದಿನದ್ದು ಇತಿಹಾಸ!

ಆರಂಭದಲ್ಲಿ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಸಿಕ್ಕಾಗ ನಿರ್ಮಾಪಕ ರಮೇಶ್ ಸಿಪ್ಪಿ, ನಿರ್ದೇಶಕ ಜಿ.ಪಿ.ಸಿಪ್ಪಿ ಚಿತ್ರದಲ್ಲಿ ಕೆಲವು ಬದಲಾವಣೆ ಮಾಡಲು ಯೋಜಿಸಿದ್ದರು. ಚಿತ್ರದಲ್ಲಿ ಅಮಿತಾಭ್‌ ಪಾತ್ರ (ಜೈ) ಕೊನೆಯುಸಿರೆಳೆಯುತ್ತದೆ. ಇದು ಪ್ರೇಕ್ಷಕರಿಗೆ ಇಷ್ಟವಾಗಿರಲಿಕ್ಕಿಲ್ಲ ಎಂದು ಚಿತ್ರದ ತಂತ್ರಜ್ಞರು ಭಾವಿಸಿದ್ದರು. ಕೆಲವು ಸನ್ನಿವೇಶಗಳನ್ನು ಮತ್ತೆ ಚಿತ್ರಿಸಿ ಸಿನಿಮಾಗೆ ಸೇರಿಸಲು ಯೋಜಿಸಿದ್ದರು. ಅಷ್ಟರಲ್ಲಿ ಚಿತ್ರಣ ಬದಲಾಗಿತ್ತು. ಥಿಯೇಟರ್‌ಗಳು ಭರ್ತಿಯಾಗತೊಡಗಿದಾಗ ನಿರ್ಮಾಪಕರು ನಿಟ್ಟುಸಿರುಬಿಟ್ಟರು.

ದೇಶದ ಎಲ್ಲಾ ನಗರಗಳಲ್ಲಿ ಸಿನಿಮಾಗೆ ಭರ್ಜರಿ ಯಶಸ್ಸು ಸಿಕ್ಕಿತು. ದೇಶದ 60 ಥಿಯೇಟರ್‌ಗಳಲ್ಲಿ ಸಿನಿಮಾ ಸ್ವರ್ಣ ಮಹೋತ್ಸವ (ನಿರಂತರ 50 ವಾರಗಳು) ಆಚರಿಸಿಕೊಂಡಿತು. ಇದು ಇಂದಿಗೂ ದಾಖಲೆಯಾಗಿ ಉಳಿದಿದೆ. ದೇಶದ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬೆಳ್ಳಿ ಮಹೋತ್ಸವ (ನಿರಂತರ 25 ವಾರಗಳು) ಆಚರಿಸಿಕೊಂಡಿತು. ಭಾರತೀಯ ಸಿನಿಮಾ ಇತಿಹಾಸದಲ್ಲೇ ಇದು ದಾಖಲೆಯ ಪ್ರದರ್ಶನ.

ಮುಂಬಯಿಯ ಮಿನರ್ವ ಥಿಯೇಟರ್‌ನಲ್ಲಿ ‘ಶೋಲೆ’ ಐದು ವರ್ಷಗಳ ಕಾಲ ಪ್ರದರ್ಶನಗೊಂಡಿತು. ‘ದಿಲ್‌ವಾಲೇ ದುಲ್ಹಾನಿಯಾ ಲೇ ಜಾಯೇಂಗೆ’ ಸಿನಿಮಾ ಸದ್ದು ಮಾಡುವವರೆಗೂ ಈ ದಾಖಲೆ ‘ಶೋಲೆ’ ಹೆಸರಿನಲ್ಲಿತ್ತು. 2001ರಲ್ಲಿ ‘ದಿಲ್‌ವಾಲೇ..’ ಈ ದಾಖಲೆ ಸರಿಗಟ್ಟಿ ಮುಂದುವರೆಯಿತು. ಸುಮಾರು 2 ಕೋಟಿ ಬಜೆಟ್‌ನಲ್ಲಿ ತಯಾರಾದ ಚಿತ್ರ ಮೊದಲ ರಿಲೀಸ್‌ನಲ್ಲಿ 15 ಕೋಟಿ ರೂಪಾಯಿ ಗಳಿಸಿತು ಎನ್ನುವುದು ಅಂದಾಜು. ಮುಂದಿನ ಹತ್ತೊಂಬತ್ತು ವರ್ಷಗಳವರೆಗೆ ಈ ದಾಖಲೆ ‘ಶೋಲೆ’ ಹೆಸರಿನಲ್ಲಿತ್ತು. ಆರಂಭದ ಗಳಿಕೆ ಮತ್ತು ಮುಂದಿನ ಮೂವತ್ತು ವರ್ಷಗಳ ಗಳಿಕೆಯನ್ನೂ ಗಣನೆಗೆ ತೆಗೆದುಕೊಳ್ಳುವುದಾದರೆ (ಹಣದುಬ್ಬರ) ಭಾರತೀಯ ಸಿನಿಮಾ ಇತಿಹಾಸದಲ್ಲೇ ‘ಶೋಲೆ’ ಗಳಿಕೆ ಸಾರ್ವಕಾಲಿಕ ದಾಖಲೆ.
(ಫೋಟೊ ಕೃಪೆ: ಮೋಹನ್‌ ಬಾಬು ಬಿ.ಕೆ.)

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ಬೇಡರ ಕಣ್ಣಪ್ಪ

`ಬೇಡರ ಕಣ್ಣಪ್ಪ’ (1954) ಚಿತ್ರದೊಂದಿಗೆ ರಾಜಕುಮಾರ್‌ ನಾಯಕನಟರಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದು ಗೊತ್ತಿರುವಂಥದ್ದೆ. ಈ

ಬಾಲಿವುಡ್'ಗೆ ಅಡಿಯಿಟ್ಟ ಆರ್ ಚಂದ್ರು | PAN ಇಂಡಿಯಾ ಚಿತ್ರ ನಿರ್ಮಾಣ

ಬಾಲಿವುಡ್’ಗೆ ಅಡಿಯಿಟ್ಟ ಆರ್ ಚಂದ್ರು | PAN ಇಂಡಿಯಾ ಚಿತ್ರ ನಿರ್ಮಾಣ

ಕನ್ನಡ ಚಿತ್ರನಿರ್ಮಾಪಕ ಆರ್‌.ಚಂದ್ರು ಕನ್ನಡವೂ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಕನ್ನಡ ಚಿತ್ರದಲ್ಲಿ

'ಅಕ್ಕ - ಸಿನಿಗನ್ನಡ ಚಲನಚಿತ್ರೋತ್ಸವ' | ಬೆಂಗಳೂರಿನಲ್ಲಿ ಅದ್ಧೂರಿ ಪ್ರಶಸ್ತಿ ಸಮಾರಂಭ

‘ಅಕ್ಕ – ಸಿನಿಗನ್ನಡ ಚಲನಚಿತ್ರೋತ್ಸವ’ | ಬೆಂಗಳೂರಿನಲ್ಲಿ ಅದ್ಧೂರಿ ಪ್ರಶಸ್ತಿ ಸಮಾರಂಭ

ಅಮೆರಿಕದಲ್ಲಿ ಸೆಪ್ಟೆಂಬರ್‌ನಲ್ಲಿ ಅಕ್ಕ ಸಮ್ಮೇಳನ ನಡೆಯಲಿದೆ. ಈ ಬಾರಿ 25ನೇ ಬೆಳ್ಳಿಹಬ್ಬದ ಸಂಭ್ರಮದ ಭಾಗವಾಗಿ ಅವರು ಸಿನಿಗನ್ನಡ ಚಲನಚಿತ್ರೋತ್ಸವ ಆಯೋಜಿಸುತ್ತಿದ್ದಾರೆ.

ಶ್ರೀಕೃಪಾ | ಕನ್ನಡ ಸಿನಿಮಾ ಪತ್ರಿಕೋದ್ಯಮ ಮರೆಯಬಾರದ ವ್ಯಕ್ತಿತ್ವ

ಶ್ರೀಕೃಪಾ | ಕನ್ನಡ ಸಿನಿಮಾ ಪತ್ರಿಕೋದ್ಯಮ ಮರೆಯಬಾರದ ವ್ಯಕ್ತಿತ್ವ

ಸುಮಾರು ಐದು ದಶಕಗಳ ಕಾಲ ಕನ್ನಡ ಸಿನಿಮಾ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸಿದವರು ಶ್ರೀಕೃಪಾ. ಪತ್ರಕರ್ತರಾಗಿ ಮಾತ್ರವಲ್ಲದೆ ಸಿನಿಮಾ – ಕಿರುತೆರೆ ಬರಹಗಾರರಾಗಿಯೂ