ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಮ್ಮ ಹೆಣ್ಮಕ್ಳಿಗೆ ಹುಡುಗರನ್ನ ಹುಡುಕಿ ಕೊಡಿ!

ಪೋಸ್ಟ್ ಶೇರ್ ಮಾಡಿ
ಸಿ.ವಿ.ಶಿವಶಂಕರ್‌
ಚಿತ್ರಸಾಹಿತಿ, ನಿರ್ದೇಶಕ

`ಅಯ್ಯೋ, ನಾನು ಸಿನಿಮಾದಲ್ಲಷ್ಟೇ ಬ್ರೋಕರ್ ಎಂದು ಅವರಿಗೆ ಹೇಳಿಬಿಡಪ್ಪ. ಅವರು ನನ್ನ ನಂಬಿಕೊಂಡು ಹಾಳಾಗೋದು ಬೇಡ!’ ಎಂದು ನೊಂದುಕೊಂಡರು ಬಾಲಣ್ಣ.

`ಕನ್ಯಾದಾನ’ ಚಿತ್ರದಲ್ಲಿ ಬಾಲಣ್ಣ, `ಬ್ರೋಕರ್ ಸೀತಾರಾಮಯ್ಯ’ ಪಾತ್ರ ಮಾಡಿದ್ದರು. ಸೂಕ್ತ ವಧು – ವರರನ್ನು ಹುಡುಕಿ ಮದುವೆ ಮಾಡಿಸುವ ಬ್ರೋಕರ್ ಪಾತ್ರ ಜನಪ್ರಿಯವಾಗಿತ್ತು. ಇದೇ ಸಮಯದಲ್ಲಿ ಬಾಲಣ್ಣನವರು ತಮ್ಮೂರು ಅರಸೀಕೆರೆಗೊಮ್ಮೆ ಭೇಟಿ ನೀಡಿದ್ದರು. ಊರಿನ ಹಿರಿಯರೊಬ್ಬರು ಬಾಲಣ್ಣನನ್ನು ತಮ್ಮ ಮನೆಗೆ ಊಟಕ್ಕೆ ಕರೆದಿದ್ದರು. ಒಳ್ಳೆಯ ಊಟ ಹಾಕಿ ತಟ್ಟೆಯೊಂದರಲ್ಲಿ ಹಣ್ಣು-ಕಾಯಿ, ಐವತ್ತು ರೂಪಾಯಿ ದಕ್ಷಿಣೆ ಇಟ್ಟು ಬಾಲಣ್ಣನವರಿಗೆ ಕೊಟ್ಟು ಹೇಳಿದರು – `ನಮ್ಮ ಮನೆಯಲ್ಲಿ ಬೆಳೆದು ನಿಂತ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದಯಮಾಡಿ ತಾವು ಅವರಿಗೆ ಒಳ್ಳೆಯ ಹುಡುಗರನ್ನು ಹುಡುಕಿಕೊಡಬೇಕು!’

ಶ್ರವಣದೋಷವಿದ್ದ ಬಾಲಣ್ಣನವರಿಗೆ ಹಿರಿಯರು ಹೇಳಿದ್ದೇನೆಂದು ಸರಿಯಾಗಿ ಗೊತ್ತಾಗಲಿಲ್ಲ. `ಕನ್ಯಾರತ್ನ’ ಚಿತ್ರದ ತಮ್ಮ ಅಭಿನಯ ಮೆಚ್ಚಿ ಮಾತನಾಡುತ್ತಿದ್ದಾರೆಂದು ಭಾವಿಸಿ, `ಸರಿ ಸರಿ’ ಎನ್ನುತ್ತಾ ಹೊರನಡೆದರು. ಅವರ ಹಿಂದೆಯೇ ಬಂದ ಹಿರಿಯರು ತಮ್ಮ ಹೆಣ್ಣುಮಕ್ಕಳ ಜಾತಕಗಳನ್ನು ಬಾಲಣ್ಣನವರ ಕೈಗಿತ್ತರು. `ಇದೇನಿದು’ ಎಂದು ಬಾಲಣ್ಣ ನನ್ನ ಮುಖ ನೋಡಿದರು! ನಾನು ಸನ್ನಿವೇಶ ವಿವರಿಸಿದೆ. `ಅಯ್ಯೋ, ನಾನು ಸಿನಿಮಾದಲ್ಲಷ್ಟೇ ಬ್ರೋಕರ್ ಎಂದು ಅವರಿಗೆ ಹೇಳಿಬಿಡಪ್ಪ. ಅವರು ನನ್ನ ನಂಬಿಕೊಂಡು ಹಾಳಾಗೋದು ಬೇಡ!’ ಎಂದು ನೊಂದುಕೊಂಡರು ಬಾಲಣ್ಣ.

ಮತ್ತಷ್ಟು ಸೋಜಿಗ

ಜನಪ್ರಿಯ ಪೋಸ್ಟ್ ಗಳು

ಬಾಲಣ್ಣ ನೆರವಿಗೆ ಬಂದರು…

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ಬಾಲಕೃಷ್ಣ ಅವರೊಂದಿಗೆ ಚಿತ್ರವೊಂದರಲ್ಲಿ ನಟಿಸುವ ಪುಟ್ಟ ಅವಕಾಶ ಸಿಕ್ಕಿತ್ತು. ಆಗಿನ್ನೂ ನಾನು ಸಿನಿಮಾಗೆ

ಮಹಿರಾವಣನ ಮೀಸೆಗೇ ಸವಾಲು!

ರಟ್ಟಿಹಳ್ಳಿ ನಾಗೇಂದ್ರರಾಯರು ಕನ್ನಡ ಚಿತ್ರರಂಗದಲ್ಲಿ `ಆರ್‍ಎನ್‍ಆರ್’ ಎಂದೇ ಖ್ಯಾತರಾದವರು. ಮಾತಿನ ಯುಗಕ್ಕೂ ಮುನ್ನ ಮೂಕಿ ಚಿತ್ರಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಅವರದು.

ದಾರಿಯುದ್ದಕ್ಕೂ ಜನ ಸೆಲ್ಯೂಟ್ ಹೊಡೆದರು!

ಡಾ.ರಾಜಕುಮಾರ್ ಅಭಿನಯದ `ದ್ರುವತಾರೆ’ ಚಿತ್ರದಲ್ಲಿ ನನಗೆ ಪೊಲೀಸ್‌ ಇನ್‍ಸ್ಪೆಕ್ಟರ್ ಪಾತ್ರವಿತ್ತು. ಕೆಂಗೇರಿ ಮತ್ತು ರಾಮನಗರ ಮಧ್ಯೆಯಿದ್ದ ಗ್ರಾಮವೊಂದರಲ್ಲಿ ಶೂಟಿಂಗ್. ಈ