ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಬಾಲನಟಿ ಖುಷ್ಬೂ

Share this post

ಬಹುಭಾಷಾ ನಟಿ ಖುಷ್ಬೂ ಬೆಳ್ಳಿತೆರೆ ಪ್ರವೇಶಿಸಿದ್ದು ಬಾಲನಟಿಯಾಗಿ. ‘ಬರ್ನಿಂಗ್ ಟ್ರೈನ್‌’ (1980) ಚಿತ್ರದ ‘ತೇರಿ ಹೈ ಜಮೀನ್‌ ತೇರಾ ಆಸ್ಮಾನ್‌’ ಹಾಡಿನಲ್ಲಿ ಅವರು ಮೊದಲ ಬಾರಿ ಕ್ಯಾಮೆರಾ ಎದುರಿಸಿದರು. ಮುಂದಿನ ನಾಲ್ಕೈದು ವರ್ಷ ‘ನಸೀಬ್‌’, ‘ಲಾವಾರಿಸ್‌’, ‘ಕಾಲಿಯಾ’, ‘ದರ್ದ್‌ ಕಾ ರಿಶ್ತಾ’, ‘ಬೆಮಿಸಾಲ್‌’ ಹಿಂದಿ ಚಿತ್ರಗಳಲ್ಲಿ ಅವರು ಬಾಲನಟಿಯಾಗಿ ನಟಿಸಿದರು. ಅವರು ಕಾಣಿಸಿಕೊಂಡ ‘ದರ್ದ್‌ ಕಾ ರಿಶ್ತಾ’ (1982) ಚಿತ್ರದ ‘ಮೈ ಪರಿಯೋ ಕಿ ಶೆಹ್‌ಜಾದಿ’ ಹಾಡು ಬಹು ಜನಪ್ರಿಯ. ಶಾಲೆಗಳ ವಾರ್ಷಿಕೋತ್ಸವಗಳಲ್ಲಿ ಇಂದಿಗೂ ಮಕ್ಕಳು ಈ ಹಾಡಿಗೆ ನೃತ್ಯ ಪ್ರದರ್ಶನ ನೀಡುತ್ತಾರೆ.

‘ಬರ್ನಿಂಗ್ ಟ್ರೈನ್‌’ (1980) ಚಿತ್ರದಲ್ಲಿ ಬಾಲನಟಿ ಖುಷ್ಬೂ

‘ಮೇರಿ ಜಂಗ್‌’ (1985) ಚಿತ್ರದಲ್ಲಿ ಜಾವೆದ್ ಜಾಫ್ರಿ ಜೊತೆ ಖುಷ್ಬೂ ‘ಬೋಲ್ ಬೇಬಿ ಬೋಲ್‌’ ಹಾಡಿನಲ್ಲಿ ನರ್ತಿಸಿದ್ದರು. ಅದು ಅವರ ಮೊದಲ ಡ್ಯಾನ್ಸಿಂಗ್ ರೋಲ್‌. ಇದೇ ವರ್ಷ ತೆರೆಕಂಡ ‘ಜಾನೂ’ ಚಿತ್ರದಲ್ಲಿ ಜಾಕಿ ಶ್ರಾಫ್ ಜೋಡಿಯಾಗಿ ಅವರು ನಾಯಕನಟಿಯಾದರು. ಮರುವರ್ಷ ಗೋವಿಂದ ಅವರು ನಾಯಕನಾಗಿ ನಟಿಸಿದ ಮೊದಲ ಸಿನಿಮಾ ‘ತನ್ ಬದನ್‌’ನಲ್ಲಿ ಅವರಿಗೆ ನಾಯಕಿಯ ಪಾತ್ರ ಸಿಕ್ಕಿತು.

ಶಶಿಕಪೂರ್ ಜೊತೆ

ಅಮೀರ್ ಖಾನ್ ಮತ್ತು ಮಾಧುರಿ ದೀಕ್ಷಿತ್‌ ಅಭಿನಯದ ‘ದೀವಾನಾ ಮುಝ್‌ಸಾ ನಹೀ’ (1990) ಚಿತ್ರದಲ್ಲಿ ಖುಷ್ಬೂಗೆ ಪ್ರಮುಖ ಪಾತ್ರವಿತ್ತು. ಚಿತ್ರದಲ್ಲಿನ ಅವರ ‘ಸಾರೆ ಲಡ್ಕೇ ಕೊ ಕರ್‌ ದೋ ಶಾದಿ’ ಹಾಡು ಜನಪ್ರಿಯವಾಯ್ತು. ಉತ್ತರ ಭಾರತದ ಮದುವೆ ಸಮಾರಂಭಗಳ ಮೆಹಂದಿ ಕಾರ್ಯಕ್ರಮಗಳಲ್ಲಿ ಇಂದಿಗೂ ಈ ಹಾಡು ಕೇಳಿಸುತ್ತದೆ. ಈ ಹಿಂದಿ ಚಿತ್ರದ ನಂತರ ಖಷ್ಬೂ ದಕ್ಷಿಣ ಭಾರತದತ್ತ ಹೊರಳಿದರು. ತಮಿಳು, ಕನ್ನಡ, ಮಲಯಾಳಂ, ತೆಲುಗಿನಲ್ಲಿ ಖುಷ್ಬೂ ನಟಿಸಿರುವ ಚಿತ್ರಗಳ ಸಂಖ್ಯೆ ಇನ್ನೂರು ದಾಟುತ್ತದೆ.

ಅಮಿತಾಭ್ ಜೊತೆ ಬಾಲನಟಿಯಾಗಿ

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ