ಸಿದ್ದಲಿಂಗಯ್ಯ ನಿರ್ದೇಶನದ ‘ಬಿಳಿಗಿರಿಯ ಬನದಲ್ಲಿ’ (1980) ಚಿತ್ರದಲ್ಲಿ ಬಾಲಕೃಷ್ಣ. ಕಾದಂಬರಿಕಾರ ತ.ಪು.ವೆಂಕಟರಾಂ ಅವರ ಕೃತಿಯನ್ನು ಆಧರಿಸಿದ ಚಿತ್ರವಿದು. ಜಯದೇವಿ ನಿರ್ಮಾಣದ ಸಿನಿಮಾಗೆ ರಾಜನ್ – ನಾಗೇಂದ್ರ ಸಂಗೀತ ಸಂಯೋಜನೆ, ಎಂ.ಡಿ.ಸುಂದರ್ ಚಿತ್ರಕಥೆ, ಚಿ.ಉದಯಶಂಕರ್ ಸಂಭಾಷಣೆ, ಆರ್.ಚಿಟ್ಟಿಬಾಬು ಛಾಯಾಗ್ರಹಣ, ಪಿ.ಭಕ್ತವತ್ಸಲಂ ಸಂಕಲನವಿದೆ. ವಿಷ್ಣುವರ್ಧನ್, ಎಂ.ಪಿ.ಶಂಕರ್, ಶ್ರೀನಿವಾಸಮೂರ್ತಿ ಇತರೆ ಪ್ರಮುಖ ತಾರಾಬಳಗದಲ್ಲಿದ್ದಾರೆ. ಚಿತ್ರದಲ್ಲಿ ನಿರ್ದೇಶಕ ಸಿದ್ದಲಿಂಗಯ್ಯ ಅವರ ಪುತ್ರರಾದ ಮುರಳಿ (ಖ್ಯಾತ ನಟ) ಮತ್ತು ಸುರೇಶ್ ನಟಿಸಿದ್ದರು. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಬಿಳಿಗಿರಿಯ ಬನದಲ್ಲಿ
- ಕನ್ನಡ ಸಿನಿಮಾ
Share this post