ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬೆಳ್ಳಿತೆರೆ ಮೇಲೆ ನಾರದನ ಪಾತ್ರಧಾರಿಗಳು

Share this post

ಭಾರತೀಯ ಪುರಾಣದ ಅತ್ಯಂತ ಜನಪ್ರಿಯ ಪಾತ್ರಗಳಲ್ಲಿ ‘ನಾರದ’ರ ಪಾತ್ರವೂ ಒಂದು. ಸಂದೇಶ ತಲುಪಿಸುವ, ಜಗಳ ತಂದಿಡುವ, ಜಗಳ ಸರಿಪಡಿಸುವ ವ್ಯಕ್ತಿಯಾಗಿ ಪುರಾಣದ ಕತೆಗಳಲ್ಲಿ ನಾರದರು ಹೆಸರುವಾಸಿ. ಪೌರಾಣಿಕ ಮತ್ತು ಸಾಮಾಜಿಕ ಕನ್ನಡ ಚಿತ್ರಗಳಲ್ಲಿ ಜನಪ್ರಿಯ ನಟರು ನಾರದನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆರ್‌.ನಾಗೇಂದ್ರರಾವ್‌ (ಭೂಕೈಲಾಸ), ಬಿ.ಎಸ್‌.ರಾಜಯ್ಯಂಗಾರ್‌ (ಹರಿಶ್ಚಂದ್ರ), ಹೊನ್ನಪ್ಪ ಭಾಗವತರ್‌ (ಕೃಷ್ಣಲೀಲಾ), ಕೆ.ಎಸ್‌.ಅಶ್ವಥ್‌ (ಸ್ವರ್ಣ ಗೌರಿ, ಗಂಗೆ ಗೌರಿ, ಸತಿ ಸುಕನ್ಯ), ರಾಜಕುಮಾರ್ (ಮಹಾಸತಿ ಅನಸೂಯ, ಮೂರೂವರೆ ವಜ್ರಗಳು), ಉದಯಕುಮಾರ್ (ಪಾರ್ವತಿ ಕಲ್ಯಾಣ), ಕಲ್ಯಾಣ್‌ ಕುಮಾರ್ (ಭೂಕೈಲಾಸ), ಬಾಲಕೃಷ್ಣ (ಮೋಹಿನಿ ಭಸ್ಮಾಸುರ), ರಘು ರಾಮಯ್ಯ (ವಾಲ್ಮೀಕಿ), ಶೋಭನ್ ಬಾಬು (ಶಿವರಾತ್ರಿ ಮಹಾತ್ಮೆ), ಶ್ರೀನಾಥ್ (ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ, ಶ್ರೀ ಶ್ರೀನಿವಾಸ ಕಲ್ಯಾಣ), ಅನಂತನಾಗ್‌ (ಭಕ್ತಪ್ರಹ್ಲಾದ) ಮತ್ತಿತರರು ತೆರೆಯ ಮೇಲೆ ನಾರದರಾಗಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣರು ತಾವು ಸೆರೆಹಿಡಿದ ಮತ್ತು ತಮ್ಮಲ್ಲಿನ ಸಂಗ್ರಹದ ನಾರದ ಪಾತ್ರಧಾರಿಗಳ ಫೋಟೋಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. (ಪೂರಕ ಮಾಹಿತಿ ಕೃಪೆ: ರಾಮಕುಮಾರ್‌ – ಪದ್ಮಶ್ರೀ)

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ