ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಭೂಕೈಲಾಸ

ಕೆ.ಶಂಕರ್‌ ನಿರ್ದೇಶನದ ‘ಭೂಕೈಲಾಸ (1958) ಚಿತ್ರದಲ್ಲಿ ರಾಜಕುಮಾರ್‌, ಕಲ್ಯಾಣ್‌ ಕುಮಾರ್‌ ಮತ್ತು ಎಸ್‌.ವಿ.ರಂಗರಾವ್‌. ಚಿತ್ರದಲ್ಲಿ ಈ ಮೂವರೂ ರಾವಣ, ನಾರದ ಮತ್ತು ಮಾಯಾಸುರನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಎಸ್‌ವಿಆರ್‌’ ಎಂದೇ ಕರೆಸಿಕೊಳ್ಳುವ ಎಸ್‌.ವಿ.ರಂಗರಾವ್ ತೆಲುಗು ಚಿತ್ರರಂಗ ಕಂಡ ಮೇರು ಕಲಾವಿದ. ನಟ, ನಿರ್ದೇಶಕ, ನಿರ್ಮಾಪಕರಾಗಿ ಅವರದು ದೊಡ್ಡ ಹೆಸರು. ಪೌರಾಣಿಕ, ಐತಿಹಾಸಿಕ ಚಿತ್ರಗಳಲ್ಲಿನ ಅವರ ಪಾತ್ರಗಳು ಬಹುಜನಪ್ರಿಯ. ಶ್ರೇಷ್ಠ ನಟನೆಗಾಗಿ ಐದು ಬಾರಿ ರಾಷ್ಟ್ರಪತಿ ಗೌರವ ಪಡೆದಿದ್ದು, ಆಫ್ರೋ-ಏಷ್ಯನ್ ಚಿತ್ರೋತ್ಸವದಲ್ಲಿ ಉತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇಂದು ಎಸ್‌ವಿಆರ್‌ (03/07/1918 – 18/07/1974) ಜನ್ಮದಿನ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು