ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಎಲ್ಲವನ್ನೂ ಮಿಕ್ಸ್ ಮಾಡಿ ಕುಡಿಯುತ್ತಿದ್ದೆವು!

ಪೋಸ್ಟ್ ಶೇರ್ ಮಾಡಿ
ಭಾರ್ಗವ,
ನಿರ್ದೇಶಕ – ನಿರ್ಮಾಪಕ

ಸಿದ್ದಲಿಂಗಯ್ಯ ನಿರ್ದೇಶನದ `ಭೂತಯ್ಯನ ಮಗ ಅಯ್ಯು’ ಚಿತ್ರಕ್ಕೆ ಚಿಕ್ಕಮಗಳೂರಿನ ಕಳಸಾಪುರದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ನಾನು ಈ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಆಗಿನ್ನೂ ವಿಷ್ಣು ಮೂರ್ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದ್ದ ಹೀರೋ. ಒಂದು ಸೂಟ್‍ಕೇಸ್‍ನೊಂದಿಗೆ ಚಿತ್ರೀಕರಣಕ್ಕೆ ಬಂದಿದ್ದ. ಉಳಿದುಕೊಳ್ಳಲು ಊರಿನಲ್ಲಿ ನಮಗೊಂದು ಪುಟ್ಟ ಮನೆಯ ವ್ಯವಸ್ಥೆಯಾಗಿತ್ತು. ನಾನು, ವಿಷ್ಣು ಸೇರಿದಂತೆ ಚಿತ್ರತಂಡದ ಆರೇಳು ಜನರು ಆ ಮನೆಯಲ್ಲಿರುತ್ತಿದ್ದೆವು.

ಅಲ್ಲಿ ನಿತ್ಯ ಬೆಳಗ್ಗೆ ನಾವು ಹಾಲು ಕುಡಿಯುವ ಪರಿಯೇ ವಿಚಿತ್ರವಾಗಿರುತ್ತಿತ್ತು. ಅದೇಕೆ ಅಂಥ ರೂಢಿ ಬೆಳೆಸಿಕೊಂಡಿದ್ದೆವೋ ಈಗ ನೆನಪು ಮಾಡಿಕೊಂಡರೆ ನಗು ಬರುತ್ತದೆ. ಹೋಟೆಲ್‍ನಿಂದ ಥರ್ಮಾಫ್ಲಾಸ್ಕ್‍ನಲ್ಲಿ ಬಿಸಿ ಹಾಲು ತರುತ್ತಿದ್ದೆವು. ಅದಕ್ಕೆ ಹಾರ್ಲಿಕ್ಸ್, ಬೋರ್ನ್‍ವಿಟ, ವಿವಿಟ ಸೇರಿದಂತೆ ಇನ್ನೂ ಎರಡು ಬಗೆಯ ಪುಡಿಗಳನ್ನು ಮಿಕ್ಸ್ ಮಾಡಿ ಕುಡಿಯುತ್ತಿದ್ದೆವು. ಹೀಗೆ ವಿಶೇಷ ಪಾನೀಯದೊಂದಿಗೆ ನಮ್ಮ ದಿನ ಆರಂಭವಾಗುತ್ತಿತ್ತು!

ಮತ್ತಷ್ಟು ಸೋಜಿಗ

ಜನಪ್ರಿಯ ಪೋಸ್ಟ್ ಗಳು

ಅಡುಗೆ ಭಟ್ಟ ಡಿಂಗ್ರಿಗೆ ಒದೆ!

ಅವರು ಸೀದಾ ಅಡುಗೆ ಮನೆಗೆ ನುಗ್ಗಿದರು. ಅಲ್ಲಿದ್ದ ಪರಿಕರಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ನಮ್ಮನ್ನು ಹಿಗ್ಗಾಮುಗ್ಗ ಥಳಿಸಿದರು. ರೌಡಿಗಳ ಹಾಗಿದ್ದ ಅವರಿಗೆ

ಕೋಪ ಮಾಡಿಕೊಂಡ ಉದಯ್‌ಕುಮಾರ್‌

ಐದಾರು ಟೇಕ್‍ಗಳಾದರೂ ಶಾಟ್ ಓಕೆಯಾಗಲಿಲ್ಲ. `ಜಿ.ವಿ.ಅಯ್ಯರ್ ಅವರು ಮಾಡುವಂಥ ಪಾತ್ರವನ್ನು ಈ ಹುಡುಗನಿಗೆ ಕೊಟ್ಟಿದ್ದೀರಿ..’ ಎನ್ನುತ್ತಾ ಉದಯಕುಮಾರ್ ಕೋಪ ಮಾಡಿಕೊಂಡು

‘ಡಮ್ಮಿ’ ಜೊತೆ ನಿಜ ಕಲ್ಲುಗಳನ್ನೂ ಬೀಸಿದರು!

ಸಿದ್ದಲಿಂಗಯ್ಯ ನಿರ್ದೇಶನದ ‘ಹೇಮಾವತಿ’ ಕಥಾವಸ್ತುವಿನ ದೃಷ್ಟಿಯಿಂದ ಮಹತ್ವದ ಚಿತ್ರವಾಗಿ ದಾಖಲಾಗಿದೆ. ಚಿತ್ರದ ಹಲವು ಸನ್ನಿವೇಶಗಳಲ್ಲಿ ನಟ-ನಟಿಯರ ಜೊತೆ ಸ್ಥಳೀಯರೂ ಪಾತ್ರಧಾರಿಗಳಾಗಿದ್ದಾರೆ.