ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಜಯಪ್ರದ – 59 | ಜನಪ್ರಿಯ ವೀಡಿಯೋ ಹಾಡುಗಳು

Share this post

ತೆಲುಗು ಮೂಲದ ಬಹುಭಾಷಾ ತಾರೆ ಜಯಪ್ರದ ಇಂದು (ಏಪ್ರಿಲ್‌ 3) 59ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ‘ಭೂಮಿ ಕೋಸಂ’ (1974) ತೆಲುಗು ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದಾಗ ಅವರಿಗೆ ಹದಿನಾಲ್ಕು ವರ್ಷ. ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ, ಮರಾಠಿ ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಜಕುಮಾರ್‌, ಎನ್‌ಟಿಆರ್‌, ಅಮಿತಾಭ್ ಬಚ್ಚನ್‌, ಕಮಲ ಹಾಸನ್‌, ವಿಷ್ಣುವರ್ಧನ್‌, ಅಂಬರೀಶ್‌, ರಜನೀಕಾಂತ್‌, ಮೋಹನ್‌ ಲಾಲ್‌ ಅವರಂತಹ ಮೇರು ನಟರ ಯಶಸ್ವೀ ಸಿನಿಮಾಗಳ ನಾಯಕನಟಿ. ಭಾರತೀಯ ಚಿತ್ರರಂಗ ಕಂಡ ಸುಂದರ ನಾಯಕನಟಿಯರ ಪಟ್ಟಿಯಲ್ಲಿ ಜಯಪ್ರದ ಹೆಸರು ಮುಂಚೂಣಿಯಲ್ಲಿದೆ. ಚಿತ್ರರಂಗದ ಅವರ ಯಶಸ್ಸು ರಾಜಕಾರಣದಲ್ಲೂ ಮುಂದುವರೆಯಿತು. ಲೋಕಸಭಾ ಸದಸ್ಯೆಯಾಗಿ ಕಾರ್ಯನಿರ್ವಹಿಸಿದರು.

ವರನಟ ಡಾ.ರಾಜಕುಮಾರ್ ಅವರ ಜೋಡಿಯಾಗಿ ‘ಸನಾದಿ ಅಪ್ಪಣ್ಣ’ ಚಿತ್ರದೊಂದಿಗೆ ಕನ್ನಡ ಬೆಳ್ಳಿತೆರೆಗೆ ಬಂದ ಅವರಿಗೆ ಇಲ್ಲಿ ದೊಡ್ಡ ಮನ್ನಣೆ ಸಿಕ್ಕಿತು. ಈ ಚಿತ್ರದ ನಂತರ ರಾಜ್ ಅವರೊಂದಿಗೆ ‘ಹುಲಿಯ ಹಾಲಿನ ಮೇವು’ ಮತ್ತು ‘ಕವಿರತ್ನ ಕಾಳಿದಾಸ’ ಚಿತ್ರಗಳಲ್ಲಿ ಕನ್ನಡಿಗರ ಮನಸೂರೆಗೊಂಡರು. ನಂತರದ ದಿನಗಳಲ್ಲಿ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ ಅವರು 2012ರ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪಾತ್ರದಲ್ಲಿ ಗಮನ ಸೆಳೆದಿದ್ದರು. ಜಯಪ್ರದ ಅವರ ಜನಪ್ರಿಯ ವೀಡಿಯೋ ಹಾಡುಗಳು ಇಲ್ಲಿವೆ

ಗೀತೆ: ಕರೆದರೂ ಕೇಳದೆ | ಸಿನಿಮಾ: ಸನಾದಿ ಅಪ್ಪಣ್ಣ (1977)
ಗೀತೆ: ಬೆಳದಿಂಗಳಾಗಿ ಬಾ | ಸಿನಿಮಾ: ಹುಲಿಯ ಹಾಲಿನ ಮೇವು (1979)
ಗೀತೆ: ಪ್ರಿಯತಮಾ | ಸಿನಿಮಾ: ಕವಿರತ್ನ ಕಾಳಿದಾಸ (1983)
ಗೀತೆ: ನಿನ್ನ ಸ್ನೇಹ ಚೆನ್ನ | ಸಿನಿಮಾ: ಏಕಲವ್ಯ (1990)
ಗೀತೆ: ಈ ಕಾಂಚನ ಗಂಗಾ ನಮದೂ | ಸಿನಿಮಾ: ಹಿಮಪಾತ (1995)

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ