ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ವಿಡಿಯೋ | ‘ಉಯ್ಯಾಲೆ’ಯಲ್ಲಿ ಬುದ್ದನಾಗಿ ರಾಜ್

Share this post

ನಿರ್ದೇಶಕ ಎನ್‌.ಲಕ್ಷ್ಮೀನಾರಾಯಣ್‌ ತಮ್ಮ ‘ಉಯ್ಯಾಲೆ’ ಚಿತ್ರದಲ್ಲಿ ಕತೆಗೆ ಪೂರಕವಾಗಿ ನಾಟಕದ ಸನ್ನಿವೇಶವೊಂದನ್ನು ಸೃಷ್ಟಿಸಿ ಬುದ್ದನನ್ನು ಕಾಣಿಸುತ್ತಾರೆ. ರಾಜ್‌ ಬುದ್ದನ ಪಾತ್ರದಲ್ಲಿದ್ದು, ಲೀಲಾವತಿ ಕಿಸಾಗೌತಮಿಯಾಗಿ ನಟಿಸಿದ್ದಾರೆ. ಇದು ಬುದ್ದ ಪೂರ್ಣಿಮೆ (ಮೇ 26) ವಿಶೇಷ.

ಎನ್‌.ಲಕ್ಷ್ಮೀನಾರಾಯಣ್ ನಿರ್ದೇಶನದ ‘ಉಯ್ಯಾಲೆ’ ಕನ್ನಡದ ಗಮನಾರ್ಹ ಚಿತ್ರಗಳಲ್ಲೊಂದು. ಸಾಹಿತಿ ಚದುರಂಗ ಅವರ ಕೃತಿಯನ್ನು ಆಧರಿಸಿದ ಪ್ರಯೋಗವಿದು. ಚಿತ್ರದಲ್ಲಿ ಶೇಷಗಿರಿ (ಅಶ್ವಥ್‌) ಮತ್ತು ಕೃಷ್ಣೇಗೌಡ (ರಾಜಕುಮಾರ್‌) ಆತ್ಮೀಯ ಸ್ನೇಹಿತರು. ಶೇಷಗಿರಿ ಪತ್ನಿ ರಾಧಾ. ಶ್ರೀರಂಗಪಟ್ಟಣದಿಂದ ಮೈಸೂರಿಗೆ ಓದಲು ಬಂದ ಕೃಷ್ಣೇಗೌಡನನ್ನು ತನ್ನ ಮನೆಗೇ ಕರೆತರುತ್ತಾನೆ ಶೇಷಗಿರಿ. ಆಕಸ್ಮಿಕವೊಂದರಲ್ಲಿ ಶೇಷಗಿರಿ – ರಾಧಾ ದಂಪತಿಯ ಪುಟ್ಟ ಮಗಳು ಅಸುನೀಗುತ್ತಾಳೆ. ರಾಧಾ ತೀವ್ರ ಸಂಕಟದಿಂದ ಬಳಲುತ್ತಿದ್ದ ಈ ಸಂದರ್ಭದಲ್ಲಿ ನಿರ್ದೇಶಕ ಲಕ್ಷ್ಮೀನಾರಾಯಣ್ ಅವರು ಬುದ್ದನ ನಾಟಕವೊಂದನ್ನು ಚಿತ್ರಕಥೆಯಲ್ಲಿ ಅಳವಡಿಸಿದ್ದಾರೆ. ‘ಜಾತಸ್ಯ ಮರಣಂ ಧ್ರುವಂ’ ಎನ್ನುವ ವಾಸ್ತವದ ಸಂದೇಶ ದಾಟಿಸುವ ಈ ನಾಟಕದ ವೀಡಿಯೋ ಇಲ್ಲಿದೆ.

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ