ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಪುಟ್ಟಣ್ಣ ಸಿನಿಮಾಗಳ ತಂತ್ರಜ್ಞ ಎಂದಾಕ್ಷಣ ಒಪ್ಪಿದರು…

Share this post
ಪ್ರಗತಿ ಅಶ್ವತ್ಥ ನಾರಾಯಣ
ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ

ಚಿತ್ರೀಕರಣ ಸಂದರ್ಭದಲ್ಲಿ ಬಾಲಚಂದರ್ ಅವರು ನನ್ನೊಂದಿಗೆ ಪುಟ್ಟಣ್ಣನವರ ಕಾರ್ಯವೈಖರಿ ಬಗ್ಗೆ ಅಗಾಗ್ಗೆ ಕೇಳುತ್ತಿದ್ದರು. ಅವರಿಗೆ ಪುಟ್ಟಣ್ಣ ಎಂದರೆ ಅಪಾರ ಗೌರವ. – ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥರ ಒಂದು ಅನುಭವ.

ಕನ್ನಡ ಚಿತ್ರರಂಗ ಕಂಡ ಸದಭಿರುಚಿಯ ಚಿತ್ರನಿರ್ಮಾಪಕರೊಲ್ಲಬ್ಬರು ಚಂದೂಲಾಲ್ ಜೈನ್. ತಮಿಳಿನ ಖ್ಯಾತ ಚಿತ್ರನಿರ್ದೇಶಕ ಕೆ.ಬಾಲಚಂದರ್‌ ಅವರಿಂದ ಕನ್ನಡದಲ್ಲಿ ಒಂದು ಸಿನಿಮಾ ನಿರ್ದೇಶಿಸಬೇಕು ಎನ್ನುವುದು ಚಂದೂಲಾಲ್ ಅವರ ಆಸೆಯಾಗಿತ್ತು. ಆದರೆ ಪ್ರಯೋಗಶೀಲ ಸಿನಿಮಾಗಳ ಮೂಲಕ ತಮ್ಮದೇ ಒಂದು ಹಾದಿ ಸೃಷ್ಟಿಸಿಕೊಂಡಿದ್ದ ಬಾಲಚಂದರ್‌ ಅವರನ್ನು ಒಪ್ಪಿಸುವುದು ಸುಲಭವಿರಲಿಲ್ಲ. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆದವು. ಕೊನೆಗೆ ಹಲವು ನಿಬಂಧನೆಗಳೊಂದಗೆ  ಬಾಲಚಂದರ್‌ ಕನ್ನಡ ಸಿನಿಮಾ ನಿರ್ದೇಶಿಸಲು ಒಪ್ಪಿದರು. ಅದೇ ‘ಬೆಂಕಿಯಲ್ಲಿ ಅರಳಿದ ಹೂವು’ (1983). ಇದು ಬಾಲಚಂದರ್‌ ಅವರೇ ನಿರ್ದೇಶಿಸಿದ್ದ ‘ಅವಳ್‌ ಒರು ತೊಡರ್‌ ಕಥೈ’ (1974) ತಮಿಳು ಚಿತ್ರದ ಕನ್ನಡ ಅವತರಣಿಕೆ.

ಪುಟ್ಟಣ್ಣ, ಚಂದೂಲಾಲ್ ಜೈನ್‌

ಬಾಲಚಂದರ್‌ ನಿಬಂಧನೆಗಳ ಪ್ರಕಾರ ತಂತ್ರಜ್ಞರೆಲ್ಲರೂ ತಮ್ಮ ಸಿನಿಮಾಗಳಲ್ಲಿ ಕೆಲಸ ಮಾಡಿದವರೇ ಆಗಿರಬೇಕು, ಅವರೆಲ್ಲರೂ ಮದರಾಸಿನಿಂದಲೇ ಬರುತ್ತಾರೆ ಎನ್ನುವುದಾಗಿತ್ತು. ನಿರ್ಮಾಪಕ ಇದಕ್ಕೆ ಜೈನ್ ಒಪ್ಪಿದ್ದರು. ಅದರೆ ಚಿತ್ರೀಕರಣ ಪ್ರಾರಂಭವಾಗುವ ಸ್ವಲ್ಪ ದಿನಗಳ ಮುನ್ನ ಜೈನ್‌ ಅವರು ನನ್ನನ್ನು ಬಾಲಚಂದರ್ ಬಳಿಕರೆದುಕೊಂಡು ಹೋದರು. “ಸಾರ್ ಇವರು ಅಶ್ವತ್ಥ ನಾರಾಯಣ, ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರು. ನಮ್ಮ ಈ ಚಿತ್ರಕ್ಕೆ ನೇಮಕ ಮಾಡಿಕೊಳ್ಳಬೇಕು ಎಂದಿದ್ದೇನೆ” ಎಂದು ಹಿಂಜರಿಕೆಯಿಂದಲೇ ವಿನಂತಿಸಿಕೊಂಡರು. ಬಾಲಚಂದರ್ ಸ್ವಲ್ಪ ಸಮಯ ಏನೂ ಮಾತನಾಡಲಿಲ್ಲ. ಆಗ ಜೈನ್ ಅವರು, “ಸರ್, ಇವರು ಪುಟ್ಟಣ್ಣ ಕಣಗಾಲರ ಬಹಳಷ್ಟು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ” ಎಂದು ಹೇಳಿದರು. ಆಗ ಬಾಲಚಂದರ್‌, “ಓ ಹಾಗಾದ್ರೆ ಸರಿ” ಎಂದು ಮರುಮಾತಿಲ್ಲದೆ ಒಪ್ಪಗೆ ಸೂಚಿಸಿದರು. ಅದು ಪುಟ್ಟಣ್ಣ, ಅವರ ಸಿನಿಮಾ, ಅವರ ವೃತ್ತಿಪರತೆ ಬಗ್ಗೆ ಕೆ.ಬಾಲಚಂದರ್‌ ಅವರಿಗಿದ್ದ ಗೌರವ, ಅಭಿಮಾನ.

‘ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರದ ಸ್ಥಿರಚಿತ್ರ – 1

ಚಿತ್ರೀಕರಣ ಸಂದರ್ಭದಲ್ಲಿ ಬಾಲಚಂದರ್ ಅವರು ನನ್ನೊಂದಿಗೆ ಪುಟ್ಟಣ್ಣನವರ ಕಾರ್ಯವೈಖರಿ ಬಗ್ಗೆ ಅಗಾಗ್ಗೆ ಕೇಳುತ್ತಿದ್ದರು. ಅವರಿಗೆ ಪುಟ್ಟಣ್ಣ ಎಂದರೆ ಅಪಾರ ಗೌರವ. ಜೈನ್‌ರವರಿಗೆ ನನ್ನನ್ನು ನೇಮಕ ಮಾಡಿಕೊಳ್ಳಲು ಅವರ ಸ್ವಾರ್ಥ ಸಹ ಇತ್ತು. ಮದರಾಸಿನ ಛಾಯಾಗ್ರಾಹಕರನ್ನು ನೇಮಕ ಮಾಡಿಕೊಂಡಿದ್ದರೆ ಫೋಟೋಗಳ ಪ್ರೊಸೆಸಿಂಗ್‌ ತಡವಾಗಿ ಚಿತ್ರೀಕರಣಕ್ಕೆ ಅಡ್ಡಿಯಾಗುತ್ತಿತ್ತು. ನಾನಾದರೆ ಅವರಿಗೆ ಸುಪರಿಚಿತ ತಂತ್ರಜ್ಞ. ಅಲ್ಲದೆ ಇಲ್ಲೇ ಸ್ಟುಡಿಯೋ ಇದ್ದುದರಿಂದ ಪ್ರೊಸೆಸಿಂಗ್‌ ಬೇಗ ಆಗಿ ಮಾರನೇ ದಿನವೇ ಫೋಟೋಗಳು ಕೈಗೆ ಸಿಗುತ್ತಿದ್ದವು.

‘ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರದ ಸ್ಥಿರಚಿತ್ರ – 2

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ