ಬೆಂಗಳೂರು ಇಂಟರ್ನ್ಯಾಷನಲ್ ಹೋಟೆಲ್ನಲ್ಲಿ ‘ದೇವರ ಕಣ್ಣು’ ಚಿತ್ರದ ಸುದ್ದಿಗೋಷ್ಠಿ ಸಂದರ್ಭ. ಭಗವತಿ ಪ್ರೊಡಕ್ಷನ್ಸ್ನ ಪಾಲ್ ನಿರ್ಮಾಣದ ಸಿನಿಮಾ ಇದು. ಹಿಂದೆ ಪಾಲ್ ಅವರು ಸಾಹಿತಿ ತರಾಸು ಅವರ ‘ಚಕ್ರತೀರ್ಥ’ ಕೃತಿಯನ್ನು ಆಧರಿಸಿ ಸಿನಿಮಾ ನಿರ್ಮಿಸಿದ್ದರು. ಪಾಲ್ ಆಹ್ವಾನದ ಮೇರೆಗೆ ತರಾಸು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರೊಂದಿಗೆ ಇರುವವರು ನಟ – ನಿರ್ದೇಶಕ – ನಿರ್ಮಾಪಕ ಕೆಂಪರಾಜು ಅರಸು. ಆಗ ಅರಸು ಅವರು ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಇಂದು ಸಾಹಿತಿ ತರಾಸು (21/04/1920 – 10/04/1984) ಜನ್ಮದಿನ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)
ತರಾಸು ನೆನಪು
- ಕನ್ನಡ ಸಿನಿಮಾ
Share this post






