ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಇದು ನಟಿ ಆರತಿ ಕ್ಲಿಕ್ಕಿಸಿದ ಫೋಟೊ!

ಪೋಸ್ಟ್ ಶೇರ್ ಮಾಡಿ

ತಮ್ಮ ಕ್ಯಾಮರಾಗಳ ಮೂಲಕ ಎಲ್ಲರ ನೆನಪುಗಳನ್ನು ಹಿಡಿದಿಡುವ ಛಾಯಾಗ್ರಾಹಕರು ತಮಗಾಗಿ ಫೋಟೋ ತೆಗೆದಿಟ್ಟುಕೊಳ್ಳುವುದು ತೀರಾ ಅಪರೂಪ. ಅದರಲ್ಲೂ ಅಂದಿನ ದುಬಾರಿ ಕಾಲದಲ್ಲಿ ಆ ರೀತಿ ಯೋಚಿಸುತ್ತಲೂ ಇರಲಿಲ್ಲ. ‘ವಿನಾಃಕಾರಣ ಒಂದು ನೆಗೆಟಿವ್‌ ವೇಸ್ಟ್ ಆಗುತ್ತೆ’ ಎಂದು ಸ್ಥಿರಚಿತ್ರ ಛಾಯಾಗ್ರಾಹಕರು ಲೆಕ್ಕಾಚಾರ ಹಾಕುತ್ತಿದ್ದರು. ಇದಕ್ಕೆ ಹೊರತಾದ ಒಂದು ನೆನಪನ್ನು ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥರು ಹಂಚಿಕೊಳ್ಳುವುದು ಹೀಗೆ…

“ಚಿಕ್ಕಮಗಳೂರು ಜಿಲ್ಲೆಯ ಕಳಸ ಸುತ್ತಮುತ್ತ ನದಿ ತೀರದಲ್ಲಿ ‘ರಂಗನಾಯಕಿ’ ಚಿತ್ರದ ಶೂಟಿಂಗ್ ನಡೆಯಿತು (1980). ಚಿತ್ರೀಕರಣದ ಕೊನೆಯ ದಿನ ಚಿತ್ರತಂಡದ ಸದಸ್ಯರೆಲ್ಲರ ಒಂದು ಗ್ರೂಪ್ ಫೋಟೋ ಸೆರೆಹಿಡಿದೆ. ಆಗ ನಟಿ ಆರತಿ ಅವರು, ‘ಅಶ್ವತ್ಥ್, ಎಲ್ಲರ ಫೋಟೊಗಳನ್ನು ತೆಗೆದುಕೊಡುವ ನೀವು ನಿಮ್ಮನ್ನೇ ಮರೆತುಬಿಡುತ್ತೀರಿ. ಚಿತ್ರೀಕರಣದ ನೆನಪಿಗೆ ಜ್ಞಾಪಕವಾಗಿ ಒಂದಾದರೂ ಫೋಟೋ ಬೇಕೆಂದು ನಿಮಗೆ ಅನಿಸುವುದಿಲ್ಲವೇ? ಬನ್ನಿ, ನೀವು ಕುಳಿತುಕೊಳ್ಳಿ. ಫ್ರೇಮ್‌ ಅಡ್ಜೆಸ್ಟ್ ಮಾಡಿಕೊಡಿ, ನಾನು ಕ್ಲಿಕ್ ಮಾಡುತ್ತೇನೆ’ ಎಂದರು. ನಾನು ಕ್ಯಾಮರಾ ಅಡ್ಜೆಸ್ಟ್ ಮಾಡಿಕೊಟ್ಟೆ. ಈ ಫೋಟೋ ಸೆರೆಯಾಯ್ತು.”

1.ಸಹಾಯಕ ನಿರ್ದೇಶಕ ಪಿ‌. ಹೆಚ್.ವಿಶ್ವನಾಥ್, 2. ಆರತಿ ಪುತ್ರಿ ಯಶಸ್ವಿನಿ, 3.ಪುಟ್ಟಣ್ಣ ಕಣಗಾಲ್, 4. ಅಶೋಕ್, 5.ಕ್ಯಾಮರಾಮನ್ ಮಾರುತಿರಾವ್, 6.ಸ್ಥಿರಚಿತ್ರ ಛಾಯಾಗ್ರಾಹಕ ಅಶ್ವತ್ಥ ನಾರಾಯಣ, 7. ಸಹಾಯಕ ನಿರ್ದೇಶಕ ಚಂದ್ರಹಾಸ ಹಾಗೂ ಇತರೆ ತಂತ್ರಜ್ಞರು.

ಇನ್ನಷ್ಟು ಕಥೆ

ಹೆಳವನಕಟ್ಟೆ ಗಿರಿಯಮ್ಮ

ಸಂಕೇತ್ ಸ್ಟುಡಿಯೋದಲ್ಲಿ ‘ಹೆಳವನಕಟ್ಟೆ ಗಿರಿಯಮ್ಮ’ ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಪಿಬಿಎಸ್ ಜೊತೆ

ಮೂವಿಂಗ್ ಶಾಟ್!

ಈಗ ಸಿನಿಮಾ, ಕಿರುತೆರೆ ಚಿತ್ರೀಕರಣಗಳಲ್ಲಿ ಜಿಮ್ಮೀ ಜಿಬ್ ಸೇರಿದಂತೆ ಆಧುನಿಕ ಪರಿಕರಗಳಿಂದ ಮೂವಿಂಗ್‌

ಕನ್ನಯ್ಯರಾಮ – ಅನಂತನಾಗ್‌

ಆಗಿನ್ನೂ ಅನಂತನಾಗ್ ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿರಲಿಲ್ಲ. ‘ಅಂಕುರ್’, ‘ನಿಶಾಂತ್’, ‘ಮಂಥನ್’ ಹಿಂದಿ ಸಿನಿಮಾಗಳು

ಜನಪ್ರಿಯ ಪೋಸ್ಟ್ ಗಳು

`ನಾಗರಹಾವು’ ಮೇಕಿಂಗ್ ಸ್ಟಿಲ್

ಪುಟ್ಟಣ್ಣ ಕಣಗಾಲ್‌ನವರ ಮಹೋನ್ನತ ಚಿತ್ರಗಳಲ್ಲೊಂದಾದ `ನಾಗರಹಾವು’ ಚಿತ್ರಕ್ಕೆ ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿಯೂ ಚಿತ್ರೀಕರಣ ನಡೆದಿತ್ತು. ಚಿತ್ರದಲ್ಲಿನ ಪ್ರಿನ್ಸಿಪಾಲ್ ಮನೆಯ ಸನ್ನಿವೇಶಗಳು

ಅಭಿಮಾನಿಗಳಿಗಾಗಿ…

ಅದು ಪತ್ರಗಳ ಕಾಲ. ಇ-ಮೇಲ್, ಫೇಸ್‍ಬುಕ್, ಟ್ವಿಟರ್ ಇಲ್ಲದ ದಿನಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರಿಗೆ ಪತ್ರ ಬರೆದು ತಮ್ಮ

18ರ ಹರೆಯದಲ್ಲೇ ಚೀಫ್ ಮೇಕಪ್‌ಮ್ಯಾನ್‌!

ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಸಾಕ್ಷಾತ್ಕಾರ’ ಚಿತ್ರಕ್ಕೆ ಎಂ.ಎಸ್‌.ಸುಬ್ಬಣ್ಣ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಕಂಠೀರವ ಸ್ಟುಡಿಯೋದಲ್ಲಿ ಎರಡು ಶೆಡ್ಯೂಲ್ ಚಿತ್ರೀಕರಣ

ಕುವೆಂಪು ಒಪ್ಪಿಗೆ ಪತ್ರ

‘ಅನಿರೀಕ್ಷಿತ’ (1970) ಸಿನಿಮಾದಲ್ಲಿ ಕುವೆಂಪು ರಚನೆಯ ‘ಸೊಬಗಿನ ಸೆರೆಮನೆಯಾಗಿಹೆ ನೀನು…’ ಗೀತೆ ಬಳಕೆಯಾಗಿದೆ. ಕುವೆಂಪು ಅವರ ‘ಷೋಡಶಿ’ ಕವನಸಂಕಲನದಲ್ಲಿನ ಪದ್ಯವಿದು.