ಭಾರತದ ಖ್ಯಾತ ಚಿತ್ರನಿರ್ದೇಶಕ ಮೃಣಾಲ್ ಸೇನ್ ನಿರ್ದೇಶನದ ‘ಒಕ ಊರಿ ಕಥಾ’ (1977) ತೆಲುಗು ಸಿನಿಮಾ ಚಿತ್ರೀಕರಣದ ಸಂದರ್ಭ. ಈ ಚಿತ್ರದಲ್ಲಿ ನಟಿಸಿದ್ದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕನ್ನಡ ನಟ ಎಂ.ವಿ.ವಾಸುದೇವರಾವ್ ಅವರೊಂದಿಗೆ ಮೃಣಾಲ್ ಸೇನ್ ಸಮಾಲೋಚನೆಯಲ್ಲಿ ತೊಡಗಿದ್ದಾರೆ. ಸಾಹಿತಿ ಮುನ್ಷಿ ಪ್ರೇಮ್ಚಂದ್ ಅವರ ‘ಕಫನ್’ ಕೃತಿಯನ್ನು ಆಧರಿಸಿದ ಪ್ರಯೋಗವಿದು. ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಚಿತ್ರಕ್ಕೆ ಸಂಭಾಷಣೆ ರಚಿಸಿದ್ದರು. ‘ಒಕ ಊರಿ ಕಥಾ’ ಅತ್ಯುತ್ತಮ ಪ್ರಾದೇಷಿಕ ಭಾಷಾ ಸಿನಿಮಾ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಗೆ ಪಾತ್ರವಾಗಿದೆ.

ಒಕ ಊರಿ ಕಥಾ – ಎಂ.ವಿ.ವಾಸುದೇವರಾವ್
- ತೆಲುಗು ಸಿನಿಮಾ
Share this post