ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನಾಲ್ಕನೆಯ ಮನೆಯಲ್ಲಿ ಸಂಗೀತ ಹಾಡುತ್ತಿದೆ ಈ ಟ್ಯೂಬ್‌ಲೈಟ್!

Share this post

(ಬರಹ: ಪ್ರಗತಿ ಅಶ್ವತ್ಥ ನಾರಾಯಣ, ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ)

ಗಾಂಧಿನಗರದಲ್ಲಿದ್ದ ನಮ್ಮ ‘ಪ್ರಗತಿ’ ಸ್ಟುಡಿಯೋಗೆ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಅಗಾಗ್ಗೆ ಭೇಟಿ ನೀಡುತ್ತಿದ್ದರು. ಹಾಗೆ ಬರಲು ಕಾರಣವಿತ್ತು. ನಮ್ಮ ಸ್ಟುಡಿಯೋ ಎದುರು ಮನೆಯಲ್ಲಿ ಅವರ ಶ್ರೀಮತಿಯವರ ಸಂಬಂಧಿಗಳು ವಾಸವಾಗಿದ್ದರು. ಶ್ರೀಮತಿಯವರನ್ನು ಅವರ ಮನೆಯಲ್ಲಿ ಬಿಟ್ಟು ಬಂದು ವಿಜಯಭಾಸ್ಕರ್‌ ನಮ್ಮ ಸ್ಟೂಡಿಯೋದಲ್ಲಿ ಎರಡು, ಮೂರು ಗಂಟೆ ಕಾಲ ಕಳೆಯುತ್ತಿದ್ದರು. ನಮ್ಮ ಸ್ಟುಡಿಯೋದಲ್ಲಿ ಯಾವಾಗಲೂ ಯಾರಾದರೂ ಚಿತ್ರರಂಗದ ಗೆಳೆಯರು ಇದ್ದೇ ಇರುತ್ತಿದ್ದರು. ನನ್ನ ಅಣ್ಣ, ಚಿತ್ರನಿರ್ದೇಶಕ ನಾಗೇಶ್ ಬಾಬ ಹಾಗೂ ವಿಜಯಭಾಸ್ಕರ್ ಆತ್ಮೀಯ ಮಿತ್ರರು.

ಅದೇ ರೀತಿ ಒಮ್ಮೆ ನಮ್ಮ ಸ್ಟುಡಿಯೋಗೆ ಬಂದರು. ಅಪರೂಪಕ್ಕೆ ಅಂದು ನಾನು ಒಬ್ಬನೇ ಇದ್ದೆ. ಸ್ಟುಡಿಯೋಗೆ ಬಂದವರೆ, “ಎನ್ರೀ ಅಶ್ವತ್ಥ್‌ ನಿಮ್ಮ ಸ್ಟುಡಿಯೋದ ಟ್ಯೂಬ್‌ಲೈಟ್‌ ನಾಲ್ಕನೆಯ ಮನೆಯಲ್ಲಿ ಸಂಗೀತ ಹಾಡುತ್ತಿದೆ!” ಎಂದರು. ನಾನು ತಬ್ಬಿಬ್ಬಾದೆ. ವಿಷಯ ಇಷ್ಟು – ಟ್ಯೂಬ್‌ಲೈಟ್‌ನ ಚೋಕ್ ಹಳೆಯದಾಗಿ ‘ಗುಯ್ಯಂ’ ಎಂದು ನಿರಂತರವಾಗಿ ಶಬ್ಧ ಮಾಡುತಿತ್ತು. ಅದನ್ನು ಅವರು ಗುರುತಿಸಿದ್ದರು. “ಏನ್‌ ಸಾರ್‌ ನೀವು? ಪ್ರತಿಯೊಂದು ಶಬ್ಧದಲ್ಲೂ ಸಂಗೀತವನ್ನೇ ಗುರುತಿಸುತ್ತೀರಿ. ನನಗೆ ತಿಳಿಯುವುದಿಲ್ಲ. ನಿಮ್ಮ ಪ್ರಕಾರ ಸಂಗೀತವೆಂದರೆ ಏನು?” ಎಂದು ಕೇಳಿದೆ. “ಯಾವ ಶಬ್ದ ಕಿವಿಗೆ ಇಂಪಾಗಿ ಇರುತ್ತದೆಯೋ, ಅದುವೇ ಸಂಗೀತ. ಅದು ವ್ಯಕ್ತಿಯ ಅಭಿರುಚಿ, ಗ್ರಹಿಕೆಗೆ ಬಿಟ್ಟದ್ದು” ಎಂದರು ವಿಜಯಭಾಸ್ಕರ್‌.

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ