ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಇಂಡಿಯನ್ ನ್ಯೂಸ್ ರಿವ್ಯೂ

Share this post

(ಬರಹ: ಮೋಹನ್ ಬಾಬು ಬಿ.ಕೆ., ಸಿನಿಮಾ ಬರಹಗಾರ, ಚಿತ್ರಮಂದಿರ ಮಾಲೀಕರು)

ಯಾರಿಗೆಲ್ಲಾ ನೆನಪಿದೆ? ಆಗ ಥಿಯೇಟರ್‌ಗಳಲ್ಲಿ ಸಿನಿಮಾ ಆರಂಭಿಸುವುದಕ್ಕೂ ಮುನ್ನ ‘ಇಂಡಿಯನ್ ನ್ಯೂಸ್’ ಕಪ್ಪು- ಬಿಳುಪು ರೀಲನ್ನು ಪ್ರದರ್ಶಿಸುತ್ತಿದ್ದೆವು. ಆಗ ಟೀವಿ ಮಾಧ್ಯಮಗಳು ಇರಲಿಲ್ಲ. ದಿನಪತ್ರಿಕೆಗಳನ್ನು ಹೆಚ್ಚು ಜನರು ಓದುತ್ತಿರಲಿಲ್ಲ. ಆಗ ಹಲವು ಪ್ರಮುಖ ವಿಷಯ – ಘಟನೆಗಳನ್ನು ಆಧರಿಸಿ 10 ನಿಮಿಷದ ಒಂದು ಡಾಕ್ಯುಮೆಂಟರಿ ಪ್ರತಿ ತಿಂಗಳು ತಯಾರಾಗುತ್ತಿತ್ತು. ಅದನ್ನು ಇಡೀ ದೇಶದ ಎಲ್ಲಾ ಚಿತ್ರಮಂದಿರಗಳಲ್ಲಿ ಖಡ್ಡಾಯವಾಗಿ ಪ್ರದರ್ಶನ ಮಾಡಲೇಬೇಕಿತ್ತು. ಇದಕ್ಕಾಗಿ ಆಯಾ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಕಚೇರಿಯು ‘ವಾರ್ತಾ ಇಲಾಖಾ ಕಚೇರಿ’ ಎಂದು ಸ್ಥಾಪನೆ ಮಾಡಿತ್ತು. ಈಗಲೂ ಕೋರಮಂಗಲದಲ್ಲಿ ಕಚೇರಿ ಇದೆ. ಪ್ರತಿ ತಿಂಗಳು ನಾವು ಆ ಕಚೇರಿಗೆ ಇಂತಿಷ್ಟು ಹಣ ಸಂದಾಯ ಮಾಡಿ ವಾರಕ್ಕೊಮ್ಮೆ ನ್ಯೂಸ್ ರೀಲ್ ಬದಲಿಸಿ ತರಬೇಕಿತ್ತು. ಟೀವಿ ಬಂದ ಮೇಲೆ 15 ದಿನಕ್ಕೆ, ನಂತರ ತಿಂಗಳಿಗೊಮ್ಮೆ ಆಯ್ತು. ಪ್ರತಿ ವರ್ಷ ಚಿತ್ರಮಂದಿರಗಳ ಸನ್ನದು ನವೀಕರಣಕ್ಕೆ ಸುಮಾರು ಇಲಾಖೆಗಳ NOC ಕೊಡಬೇಕು. ಅದಕ್ಕೆ ಈ ಇಲಾಖೆಯ ಪತ್ರವೂ ಲಗತ್ತಿಸಬೇಕಿತ್ತು. ಈಗ ಸ್ಯಾಟಲೈಟ್ ಬಂದಿದೆ. ಎಲ್ಲವೂ ಮಾಯ. ಹೀಗೊಂದು ನೆನಪು ನಿಮ್ಮ ಮುಂದೆ…

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ