ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಇಂಡಿಯನ್ ನ್ಯೂಸ್ ರಿವ್ಯೂ

Share this post

(ಬರಹ: ಮೋಹನ್ ಬಾಬು ಬಿ.ಕೆ., ಸಿನಿಮಾ ಬರಹಗಾರ, ಚಿತ್ರಮಂದಿರ ಮಾಲೀಕರು)

ಯಾರಿಗೆಲ್ಲಾ ನೆನಪಿದೆ? ಆಗ ಥಿಯೇಟರ್‌ಗಳಲ್ಲಿ ಸಿನಿಮಾ ಆರಂಭಿಸುವುದಕ್ಕೂ ಮುನ್ನ ‘ಇಂಡಿಯನ್ ನ್ಯೂಸ್’ ಕಪ್ಪು- ಬಿಳುಪು ರೀಲನ್ನು ಪ್ರದರ್ಶಿಸುತ್ತಿದ್ದೆವು. ಆಗ ಟೀವಿ ಮಾಧ್ಯಮಗಳು ಇರಲಿಲ್ಲ. ದಿನಪತ್ರಿಕೆಗಳನ್ನು ಹೆಚ್ಚು ಜನರು ಓದುತ್ತಿರಲಿಲ್ಲ. ಆಗ ಹಲವು ಪ್ರಮುಖ ವಿಷಯ – ಘಟನೆಗಳನ್ನು ಆಧರಿಸಿ 10 ನಿಮಿಷದ ಒಂದು ಡಾಕ್ಯುಮೆಂಟರಿ ಪ್ರತಿ ತಿಂಗಳು ತಯಾರಾಗುತ್ತಿತ್ತು. ಅದನ್ನು ಇಡೀ ದೇಶದ ಎಲ್ಲಾ ಚಿತ್ರಮಂದಿರಗಳಲ್ಲಿ ಖಡ್ಡಾಯವಾಗಿ ಪ್ರದರ್ಶನ ಮಾಡಲೇಬೇಕಿತ್ತು. ಇದಕ್ಕಾಗಿ ಆಯಾ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಕಚೇರಿಯು ‘ವಾರ್ತಾ ಇಲಾಖಾ ಕಚೇರಿ’ ಎಂದು ಸ್ಥಾಪನೆ ಮಾಡಿತ್ತು. ಈಗಲೂ ಕೋರಮಂಗಲದಲ್ಲಿ ಕಚೇರಿ ಇದೆ. ಪ್ರತಿ ತಿಂಗಳು ನಾವು ಆ ಕಚೇರಿಗೆ ಇಂತಿಷ್ಟು ಹಣ ಸಂದಾಯ ಮಾಡಿ ವಾರಕ್ಕೊಮ್ಮೆ ನ್ಯೂಸ್ ರೀಲ್ ಬದಲಿಸಿ ತರಬೇಕಿತ್ತು. ಟೀವಿ ಬಂದ ಮೇಲೆ 15 ದಿನಕ್ಕೆ, ನಂತರ ತಿಂಗಳಿಗೊಮ್ಮೆ ಆಯ್ತು. ಪ್ರತಿ ವರ್ಷ ಚಿತ್ರಮಂದಿರಗಳ ಸನ್ನದು ನವೀಕರಣಕ್ಕೆ ಸುಮಾರು ಇಲಾಖೆಗಳ NOC ಕೊಡಬೇಕು. ಅದಕ್ಕೆ ಈ ಇಲಾಖೆಯ ಪತ್ರವೂ ಲಗತ್ತಿಸಬೇಕಿತ್ತು. ಈಗ ಸ್ಯಾಟಲೈಟ್ ಬಂದಿದೆ. ಎಲ್ಲವೂ ಮಾಯ. ಹೀಗೊಂದು ನೆನಪು ನಿಮ್ಮ ಮುಂದೆ…

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ಬೇಡರ ಕಣ್ಣಪ್ಪ

`ಬೇಡರ ಕಣ್ಣಪ್ಪ’ (1954) ಚಿತ್ರದೊಂದಿಗೆ ರಾಜಕುಮಾರ್‌ ನಾಯಕನಟರಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದು ಗೊತ್ತಿರುವಂಥದ್ದೆ. ಈ

'ಊರಬ್ಬ'ದಲ್ಲಿ ಜಾತ್ರೆಯ ನೈಜದೃಶ್ಯ | ಸಿನಿಮಾದ ಟ್ರೇಲರ್‌ ಬಿಡುಗಡೆ

‘ಊರಬ್ಬ’ದಲ್ಲಿ ಜಾತ್ರೆಯ ನೈಜದೃಶ್ಯ | ಸಿನಿಮಾದ ಟ್ರೇಲರ್‌ ಬಿಡುಗಡೆ

ಲಕ್ಕಿ ಶಂಕರ್‌ ನಿರ್ದೇಶನದ ‘ಊರಬ್ಬ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಮಾಗಡಿ ತಾಲೂಕಿನ ಉಜ್ಜಿನಿ ಚೌಡೇಶ್ವರಿ ಜಾತ್ರೆ ಹಿನ್ನೆಲೆಯಲ್ಲಿ ನಡೆಯುವ ಕತೆಯಿದು.

ಅಪರೂಪದ ಸಾಧಕ ವೀರಾಸ್ವಾಮಿ

ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ `ಡ್ರೀಮ್‍ಲ್ಯಾಂಡ್’ ಸಿನಿಮಾ ಹಂಚಿಕೆ ಕಚೇರಿ ನಡೆಸುತ್ತಿದ್ದರು. ಅವರಲ್ಲಿ ಸಾಮಾನ್ಯ ನೌಕರನಾಗಿ ಕೆಲಸಕ್ಕೆ ಸೇರಿದ ವೀರಾಸ್ವಾಮಿ