ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಚಿತ್ರರಂಗದ ಹಿರಿಯರು ಪಾಲ್ಗೊಂಡಿದ್ದ ಸಭೆ; ಯಾರೆಲ್ಲಾ ಇದ್ದಾರೆ?

Share this post

(ಫೋಟೊ – ಬರಹ: ಪ್ರಗತಿ ಅಶ್ವತ್ಥ ನಾರಾಯಣ)

ಆರಂಭದ ದಶಕಗಳಿಂದಲೂ ಕನ್ನಡ ಚಿತ್ರರಂಗದ ಹೆಚ್ಚಿನ ಚಟುವಟಿಕೆಗಳು ಮದರಾಸಿನಲ್ಲೇ ನಡೆಯುತ್ತಿದ್ದವು. 70ರ ದಶಕದ ನಂತರದ ದಿನಗಳಲ್ಲಿ ನಿಧಾನವಾಗಿ ಕನ್ನಡದ ನೆಲದಲ್ಲೇ ಚಿತ್ರರಂಗ ಬೇರು ಬಿಡಲಾರಂಭಿಸಿತು. ಆ ಸಂದರ್ಭದಲ್ಲಿ ಚಿತ್ರರಂಗದ ಎಲ್ಲಾ ವಿಭಾಗದ ತಂತ್ರಜ್ಞರೆಲ್ಲಾ ಸೇರಿ ಅಂದು ಮದರಾಸಿನಲ್ಲಿದ್ದ CTA (Cine Technicians Association) ಮಾದರಿಯಲ್ಲಿ ಒಂದು ಸಂಘಟನೆ ಪ್ರಾರಂಭಿಸಲು ಯೋಜಿಸಲಾಯ್ತು. ಅದರ ರೂಪುರೇಷೆ ನಿರ್ಧರಿಸಲು ಏರ್‌ಲೈನ್ಸ್ ಹೋಟೆಲ್‌ನಲ್ಲಿ ಒಂದು ಸಭೆ ಕರೆದಿದ್ದರು. ಆ ಸಂದರ್ಭದಲ್ಲಿ ಸೆರೆಹಿಡಿದ ಈ ಫೊಟೋದಲ್ಲಿ ಚಿತ್ರರಂಗದ ಪ್ರಮುಖರಿದ್ದಾರೆ. ಮುಂದೆ CTA ಮಾದರಿಯ ಸಂಘಟನೆಯ ಆಲೋಚನೆ ಕೈಗೂಡಲಿಲ್ಲ. ಬೇರೆ, ಬೇರೆ ವಿಭಾಗಗಳ ಸಂಘಗಳು ಹುಟ್ಟಿಕೊಂಡವು.

1.ಈಶ್ವರ ಬಾಬು, 2.ಚಲಂ, 3.ಭಕ್ತವತ್ಸಲ, 4. ಶಿವಶಂಕರ್, 5.ಗೀತಪ್ರಿಯ, 6.ನಾಗೇಶ್ ಬಾಬ, 7. ಎಂನಾಥ್, 8.ಕುಣಿಗಲ್ ನಾಗಭೂಷಣ್, 9. ಪ್ರಭಾಕರ ಗುಪ್ತ, 10.ಎನ್.ಲಕ್ಷ್ಮೀನಾರಾಯಣ್, 11. ಎನ್.ಜಿ.ರಾವ್, 12.ಗೋಪಾಲ್, 13.ಉಮೇಶ್ ಕುಲಕರ್ಣಿ, 14.ಲಕ್ಷ್ಮಣ್, 15.ಶಂಕರಪ್ಪ, 16. ಮನೋಹರ್, 17.ಮೋಹನ ಸುಂದರಂ, 18. ಧೀರೇಂದ್ರ ಗೋಪಾಲ್, 19.ವೀರಾಸ್ವಾಮಿ, 20. ನಾಗೇಂದ್ರ ರಾವ್, 21.ಪುಟ್ಟಣ್ಣ ಕಣಗಾಲ್, 22. ವೈ.ಆರ್. ಸ್ವಾಮಿ, 23.ಎಂ.ಭಕ್ತವತ್ಸಲ, 24. ಬಿ.ಎ.ಅರಸುಕುಮಾರ್.

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ