ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

'ಬೂತಯ್ಯನ ಮಗ ಅಯ್ಯು' ಶತದಿನೋತ್ಸವ

‘ಬೂತಯ್ಯನ ಮಗ ಅಯ್ಯು’ ಶತದಿನೋತ್ಸವ

ಬೆಂಗಳೂರು ವುಡ್‌ಲ್ಯಾಂಡ್‌ ಹೋಟೆಲ್‌ನಲ್ಲಿ ಸಿದ್ದಲಿಂಗಯ್ಯ ನಿರ್ದೇಶನದ ‘ಬೂತಯ್ಯನ ಮಗ ಅಯ್ಯು’ (1974) ಚಿತ್ರದ ಶತದಿನೋತ್ಸವ ಸಮಾರಂಭದ ಸಂದರ್ಭ. ನಟ ಡಾ.ರಾಜಕುಮಾರ್, ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಚಿತ್ರಸಾಹಿತಿ ಹುಣಸೂರು ಕೃಷ್ಣಮೂರ್ತಿ ಇದ್ದಾರೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ರಚನೆಯ ‘ವಯ್ಯಾರಿ’ ಸಣ್ಣ ಕತೆಯನ್ನು ಆಧರಿಸಿದ ‘ಬೂತಯ್ಯನ ಮಗ ಅಯ್ಯು’ ಕನ್ನಡದ ಮಹತ್ವದ ಸಿನಿಮಾಗಳಲ್ಲೊಂದು. ಗೊರೂರರ ಮತ್ತೆರೆಡು ಕಾದಂಬರಿಗಳಾದ ‘ಹೇಮಾವತಿ’ ಮತ್ತು ‘ಊರ್ವಶಿ’ ಕೂಡ ಅದೇ ಶೀರ್ಷಿಕೆಯಡಿ ಸಿನಿಮಾಗಳಾಗಿವೆ. ಸಿದ್ದಲಿಂಗಯ್ಯ ಮತ್ತು ಅಮರದೇವ ಈ ಚಿತ್ರಗಳ ನಿರ್ದೇಶಕರು.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು