ಕೊಯಮತ್ತೂರಿನ ಪಕ್ಷಿರಾಜ ಸ್ಟುಡಿಯೋದಲ್ಲಿ ‘ಬೆಟ್ಟದ ಕಳ್ಳ’ (1957) ಚಿತ್ರೀಕರಣದ ಸಂದರ್ಭ. ನಿರ್ದೇಶಕ ಶ್ರೀರಾಮುಲು ನಾಯ್ಡು ಅವರು ಚಿತ್ರದ ಕಲಾವಿದರಾದ ಆರ್.ನಾಗೇಂದ್ರರಾಯರು ಮತ್ತು ಉದಯಕುಮಾರ್ ರನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ನಿರ್ಮಾಪಕರೂ ಆದ ಶ್ರೀರಾಮುಲು ನಾಯ್ಡು ಪಕ್ಷಿರಾಜ ಸ್ಟುಡಿಯೋ ಮಾಲೀಕರೂ ಹೌದು. ಮುಂದಿನ ದಿನಗಳಲ್ಲಿ ಪಕ್ಷಿರಾಜ ಸ್ಟುಡಿಯೋ ಬೆಂಗಳೂರಿಗೆ (ಕನ್ನಿಂಗ್ ಹ್ಯಾಂ ರಸ್ತೆ) ಶಿಫ್ಟ್ ಆಗಿ ಚಾಮುಂಡೇಶ್ವರಿ ಸ್ಟುಡಿಯೋ ಎಂದು ಮರುನಾಮಕರಣಗೊಂಡಿತು. ಮೊದಲು ಒಂದು ಫ್ಲೋರ್ ಇದ್ದ ಸ್ಟುಡಿಯೋದಲ್ಲಿ ನಂತರ ಮೂರು ಫ್ಲೋರ್ಗಳಾದವು. ಉತ್ತಮ ಸೌಲಭ್ಯ ಹೊಂದಿದ್ದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೂರಾರು ಸಿನಿಮಾಗಳು ಚಿತ್ರೀಕರಣಗೊಂಡಿವೆ. ಈಗ ಥಿಯೇಟರ್, ರೆಕಾರ್ಡಿಂಗ್ ಸ್ಟುಡಿಯೋ ಮಾತ್ರ ಉಳಿದಿವೆ.
ಆರ್ಎನ್ಜೆ – ಚಿ.ಉದಯಶಂಕರ್ – ವಿಜಯನಾರಸಿಂಹ
(ಫೋಟೊ – ಬರಹ: ಎನ್.ಎಸ್.ಶ್ರೀಧರಮೂರ್ತಿ) ಕನ್ನಡ ಚಿತ್ರಗೀತೆಗಳ ‘ರತ್ನತ್ರಯರು’ ಎಂದೇ ಕರೆಯಬಹುದಾದ ಆರ್.ಎನ್.ಜಯಗೋಪಾಲ್,