ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಎಸ್ಪಿಬಿ ಮೊದಲ ಕನ್ನಡ ಹಾಡಿನ ಹೀರೋ ಅರುಣ್ ಕುಮಾರ್

Share this post
ವಿಕಾಸ್ ನೇಗಿಲೋಣಿ
ಕತೆಗಾರ

ಕನ್ನಡದಲ್ಲಿ ಎಸ್ಪಿಬಿ ಗಾಯನಸುಧೆ ಆರಂಭವಾಗಿದ್ದು ‘ನಕ್ಕರದೇ ಸ್ವರ್ಗ’ ಚಿತ್ರದ ‘ಕನಸಿದೋ ನನಸಿದೋ’ ಹಾಡಿನೊಂದಿಗೆ. ಅರುಣ್ ಕುಮಾರ್ ಮತ್ತು ಜಯಂತಿ ಜೋಡಿ ಮೇಲೆ ಚಿತ್ರಣವಾದ ಹಾಡಿದು. ಹಾಗೆ ಎಸ್ಪಿಬಿ ಅವರ ಮೊದಲ ಕನ್ನಡ ಚಿತ್ರಗೀತೆಯ ಹೀರೋ ಅರುಣ್ ಕುಮಾರ್ ಆದರು.

ಮೇರು ಗಾಯಕ ಎಸ್ಪಿಬಿ ಹಾಡಿದ ಮೊದಲ ಕನ್ನಡ ಚಿತ್ರಗೀತೆ ‘ಕನಸಿದೋ ನನಸಿದೋ’. ಎಂ.ಆರ್‌.ವಿಠ್ಠಲ್‌ ನಿರ್ದೇಶನದ ‘ನಕ್ಕರದೇ ಸ್ವರ್ಗ’ (1966) ಚಿತ್ರದ ಹಾಡಿದು. ಎಂ.ರಂಗರಾವ್‌ ಸಂಗೀತ ಸಂಯೋಜನೆಯಲ್ಲಿ ಪಿ.ಸುಶೀಲಾ ಅವರ ಜೊತೆ ಎಸ್ಪಿಬಿ ಈ ಗೀತೆ ಹಾಡಿದ್ದಾರೆ. ವಿಜಯ ನಾರಸಿಂಹ ಅವರ ರಚನೆ. ವಿಶೇಷವೇನೆಂದರೆ ನಟಿ ಜಯಂತಿ ಅವರ ಜೊತೆ ಈ ಹಾಡಿನಲ್ಲಿ ನಟಿಸಿದವರು ಖ್ಯಾತ ಹರಿಕಥಾ ವಿದ್ವಾನ್ ಗುರುರಾಜುಲು ನಾಯ್ಡು. ಗಾಯಕ ಎಸ್ಪಿಬಿ ಅವರು ಡಾ. ರಾಜಕುಮಾರ್ ಸೇರಿದಂತೆ ಕನ್ನಡದ ಹಲವಾರು ಹಿರೋಗಳಿಗೆ ಹಾಡಿದ್ದರೂ ಅವರು ಮೊದಲು ಹಾಡಿದ್ದು ಯಾವ ಹೀರೋಗೆ ಅಂತ ಕೇಳಿದರೆ, ಗುರುರಾಜುಲು ನಾಯ್ಡು ಅವರ ಹೆಸರು ಹೇಳಬೇಕು.

ಗುರುರಾಜುಲು ನಾಯ್ಡು ಅವರು ಚಿತ್ರರಂಗದಲ್ಲಿ ಅರುಣ್ ಕುಮಾರ್ ಹೆಸರಿನಲ್ಲಿ ಗುರುತಿಸಿಕೊಂಡಿದ್ದರು. ಪ್ರೇಮಮಯಿ, ಮಧುಮಾಲತಿ, ಇಮ್ಮಡಿ ಪುಲಕೇಶಿ, ಮಹಾಸತಿ ಅರುಂಧತಿ, ಹಣ್ಣೆಲೆ ಚಿಗುರಿದಾಗ, ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ, ಮೂರುವರೆ ವಜ್ರಗಳು, ಮಿಸ್ ಲೀಲಾವತಿ, ಆಷಾಡಭೂತಿ, ಕಾವೇರಿ.. ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಬೆಳ್ಳಿತೆರೆಯಲ್ಲಿ ನಾಯಕನಟನಾಗುವ ಅವರ ಬಯಕೆ ಈಡೇರಲಿಲ್ಲ. ಕೊನೆಗೆ ತಮ್ಮ ತವರು ಹರಿಕಥೆ ಕ್ಷೇತ್ರಕ್ಕೆ ಮರಳಿದ ಅವರ ಹರಿಕಥೆಯಲ್ಲಿ ಬಹುದೊಡ್ಡ ಹೆಸರು ಮಾಡಿದರು.

ಗುರುರಾಜುಲು ನಾಯ್ಡು (ಅರುಣ್ ಕುಮಾರ್‌) ಅವರ ಹರಿಕಥೆ ಸಂದರ್ಭದ ಫೋಟೋ

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ