ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಪ್ರಗತಿಪರ ಕವಿ, ಚಿತ್ರಸಾಹಿತಿ ಮಜ್ರೂಹ್ ಸುಲ್ತಾನ್‌ಪುರಿ | ವಿಡಿಯೋ ಹಾಡುಗಳು

Share this post

ಮಾರ್ಕ್ಸ್‌ ಮತ್ತು ಲೆನಿನ್‌ ಅನುಯಾಯಿಯಾಗಿದ್ದ ಮಜ್ರೂಹ್‌ ಸುಲ್ತಾನ್‌ಪುರಿ ಭಾರತದ ಜನಪ್ರಿಯ ಕವಿ ಮತ್ತು ಚಿತ್ರಸಾಹಿತಿ. ನಿರ್ಬಿಢೆಯಿಂದ ಬರೆಯುತ್ತಿದ್ದ ಅವರು ತಮ್ಮ ತೀಕ್ಷ್ಣ ಕವಿತೆಗಳಿಂದಾಗಿ ರಾಜಕಾರಣಿಗಳು ಕೆಂಗಣ್ಣಿಗೆ ಗುರಿಯಾಗಿದ್ದಿದೆ. ಇಂದು (ಮೇ 24) ಸುಲ್ತಾನ್‌ಪುರಿ ಅಗಲಿದ ದಿನ.

ಇಪ್ಪತ್ತನೇ ಶತಮಾನದ ಭಾರತದ ಪ್ರಮುಖ ಉರ್ದು ಕವಿಗಳಲ್ಲಿ ಮಜ್ರೂಹ್ ಸುಲ್ತಾನ್‌ಪುರಿ ಒಬ್ಬರು. ಹಿಂದಿ ಸಿನಿಮಾ ಕಂಡ ಮೇರು ಚಿತ್ರಸಾಹಿತಿ. ಐವತ್ತು ಮತ್ತು ಅರವತ್ತರ ದಶಕದ ಆರಂಭದ ವರ್ಷಗಳಲ್ಲಿ ಮಜ್ರೂಹ್‌ ಹಿಂದಿ ಸಿನಿಮಾರಂಗದ ಗೀತರಚನೆಕಾರರಾಗಿ ದೊಡ್ಡ ಜನಪ್ರಿಯತೆ ಗಳಿಸಿದ್ದರು. ತಮ್ಮ ಅರವತ್ತು ದಶಕಗಳ ಬರಹದ ಬದುಕಿನಲ್ಲಿ ಅವರು ಖ್ಯಾತ ಸಂಗೀತ ಸಂಯೋಜಕರಾದ ನೌಶಾದ್‌, ಮದನ್ ಮೋಹನ್‌, ಎಸ್ ಡಿ ಬರ್ಮನ್‌, ರೋಷನ್‌, ರವಿ, ಎನ್ ದತ್ತಾ, ಶಂಕರ್‌-ಜೀಕಿಶನ್‌, ಓ ಪಿ ನಯ್ಯರ್‌, ಉ‍‍‍ಷಾ ಖನ್ನಾ, ಲಕ್ಷ್ಮೀಕಾಂತ್‌-ಪ್ಯಾರೇಲಾಲ್‌, ಅನು ಮಲಿಕ್‌, ಅರ್ ಡಿ ಬರ್ಮನ್‌, ರಾಜೇಶ್ ರೋಷನ್‌, ಆನಂದ್‌-ಮಿಲಿಂದ್‌, ಜತಿನ್‌-ಲಲಿತ್‌, ಎ ಆರ್‌ ರೆಹಮಾನ್‌ ಸೇರಿದಂತೆ ಹಲವರೊಂದಿಗೆ ಕೆಲಸ ಮಾಡಿದ್ದಾರೆ. 1993ರಲ್ಲಿ ಅವರಿಗೆ ದಾದಾ ಫಾಲ್ಕೆ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಫಾಲ್ಕೆ ಗೌರವ ಪಡೆದ ಮೊದಲ ಗೀತರಚನೆಕಾರ ಮಜ್ರೂಹ್‌ ಸುಲ್ತಾನ್‌ಪುರಿ (01/10/1919-24/05/2000) .

ಅವರ ರಚನೆಯ ಜನಪ್ರಿಯ ಚಿತ್ರಗೀತೆಗಳು ವಿಡಿಯೋಗಳು ಇಲ್ಲಿವೆ.

ಸಿನಿಮಾ: ಅಖೇಲೆ ಹಮ್ ಅಖೇಲೆ ತುಮ್‌ | ಸಂಗೀತ: ಅನು ಮಲಿಕ್‌
ಸಿನಿಮಾ: ಖಾಮೋಶಿ | ಸಂಗೀತ: ಜತಿನ್ – ಲಲಿತ್‌
ಸಿನಿಮಾ: ಲಬ್‌ | ಸಂಗೀತ: ಆನಂದ್ – ಮಿಲಿಂದ್‌
ಸಿನಿಮಾ: ಪೆಹ್ಲಿ ರಾತ್ | ಸಂಗೀತ: ರವಿ
ಸಿನಿಮಾ: ಅಖೇಲೆ ಹಮ್ ಅಖೇಲೆ ತುಮ್‌ | ಸಂಗೀತ: ಅನು ಮಲಿಕ್‌

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ