ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ ದಿನಗಳಲ್ಲಿ ವಿಕ್ರಂ ಸ್ಟುಡಿಯೋ ಸ್ಥಾಪಿಸಿ, ಕನ್ನಡ ಚಿತ್ರಗಳ ನಿರ್ಮಾಣ, ನಿರ್ದೇಶನದೊಂದಿಗೆ ತಾಯ್ನೆಲದಲ್ಲಿ ಚಿತ್ರರಂಗ ನೆಲೆಯೂರುವಲ್ಲಿ ನೆರವಾದ ತಂತ್ರಜ್ಞರಲ್ಲೊಬ್ಬರು. ಕಾಲೇಜು ದಿನಗಳಲ್ಲೇ ಛಾಯಾಗ್ರಹಣದತ್ತ ಆಸಕ್ತರಾಗಿದ್ದ ಅವರು ಮುಂಬಯಿಯಲ್ಲಿ ಖ್ಯಾತ ಛಾಯಾಗ್ರಾಹಕ ಕೃಷ್ಣಗೋಪಾಲ್ ಅವರಲ್ಲಿ ಸಹಾಯಕರಾಗಿ ಅನುಭವ ಪಡೆದರು. ಮುಂದೆ ಮದರಾಸಿನ ಜೆಮಿನಿ ಸ್ಟುಡಿಯೋದಲ್ಲಿ ಕೆಲಸ ಮಾಡಿದ ಅವರು ಸ್ವತಂತ್ರ್ಯವಾಗಿ ಛಾಯಾಗ್ರಹಣ ಮಾಡಿದ್ದು ‘ಭಕ್ತ ನಾರದರ್’ ತಮಿಳು ಚಿತ್ರಕ್ಕೆ. […]

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ – ನಿರ್ಮಾಪಕ ಶೃಂಗಾರ ನಾಗರಾಜ್, ಛಾಯಾಗ್ರಾಹಕ ಕೃಷ್ಣ ಪ್ರಸಾದ್, ನಟಿ ಕಲ್ಪನಾ, ಆರ್‌.ಎನ್‌.ಜಯಗೋಪಾಲ್‌ ಚಿತ್ರದಲ್ಲಿದ್ದಾರೆ. (ಫೋಟೊ – ಮಾಹಿತಿ: ಎನ್‌.ಎಸ್‌.ಶ್ರೀಧರಮೂರ್ತಿ)

ಎಸ್‌.ತಿಪ್ಪೇಸ್ವಾಮಿ – 79

ದಶಕಗಳ ಹಿಂದೆ ಮೈಸೂರು ದಸರಾ ಸಿನಿಮೋತ್ಸವದ ಸಂದರ್ಭ. ತಾರಾ ದಂಪತಿ ಲೋಕೇಶ್ ಮತ್ತು ಗಿರಿಜಾ ಅವರೊಂದಿಗೆ ಸ್ಥಿರಚಿತ್ರ ಛಾಯಾಗ್ರಾಹಕ ಎಸ್‌.ತಿಪ್ಪೇಸ್ವಾಮಿ. ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನಲ್ಲಿ ಸಿನಿಮಾಟೋಗ್ರಫಿ ಕಲಿಯುವಾಗ ತಿಪ್ಪೇಸ್ವಾಮಿ ಅವರ ಜ್ಯೂನಿಯರ್‌ ನಟ ಲೋಕೇಶ್‌. ನಾಟಕಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದ ಇವರು ಆಪ್ತ ಸ್ನೇಹಿತರು. ಭಾರತದ ಶ್ರೇಷ್ಠ ವನ್ಯಜೀವಿ ಛಾಯಾಗ್ರಾಹಕರ ಯಾದಿಯಲ್ಲಿ ತಿಪ್ಪೇಸ್ವಾಮಿ ಅವರ ಹೆಸರು ಮುಂಚೂಣಿಯಲ್ಲಿದೆ. ಹತ್ತಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ತಿಪ್ಪೇಸ್ವಾಮಿ ಅವರು ಫೋಟೊಗ್ರಫಿ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ […]

ನಿರ್ದೇಶಕ ವೈ.ಆರ್.ಸ್ವಾಮಿ ನೆನಪು

ಮದರಾಸಿನ ಸ್ಟೂಡಿಯೋವೊಂದರಲ್ಲಿ ‘ವಾತ್ಸಲ್ಯ’ (1965) ಸಿನಿಮಾ ಚಿತ್ರೀಕರಣದ ಬಿಡುವಿನಲ್ಲಿ ನಟ ರಾಜಕುಮಾರ್, ನಿರ್ದೇಶಕ ವೈ.ಆರ್.ಸ್ವಾಮಿ ಮತ್ತು ನಟ ಉದಯಕುಮಾರ್ ಅವರು ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯನ ಅವರಿಗೆ ಪೋಸು ಕೊಟ್ಟಿದ್ದು ಹೀಗೆ. ಕನ್ನಡ ಚಿತ್ರರಂಗದ ಎರಡನೇ ತಲೆಮಾರಿನ ನಿರ್ದೇಶಕರ ಯಾದಿಯಲ್ಲಿ ಮಹತ್ವದ ಸ್ಥಾನ ಪಡೆದವರು ವೈ.ಆರ್.ಸ್ವಾಮಿ. ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳ 60ಕ್ಕೂ ಹೆಚ್ಚು ಚಿತ್ರಗಳನ್ನು ಸ್ವಾಮಿ ನಿರ್ದೇಶಿಸಿದ್ದಾರೆ. ಹಲವು ಸಿನಿಮಾಗಳ ಚಿತ್ರಕಥೆ ರಚನೆಕಾರರೂ ಹೌದು. ರೇಣುಕಾ ಮಹಾತ್ಮೆ, ಸ್ವರ್ಣಗೌರಿ, ಮುರಿಯದ ಮನೆ, ಕಠಾರಿವೀರ, ಭಲೇ […]

ಗುಬ್ಬಿ ವೀರಣ್ಣ ನೆನಪು

ಬೆಂಗಳೂರು ಕಂಠೀರವ ಸ್ಟುಡಿಯೋ ಎದುರು ರಂಗದಿಗ್ಗಜ, ಚಿತ್ರಕರ್ಮಿ ಗುಬ್ಬಿ ವೀರಣ್ಣನವರು. ಕನ್ನಡ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದ ಮಹನೀಯರೊಲ್ಲಬ್ಬರು ಗುಬ್ಬಿ ವೀರಣ್ಣ. ಆರನೇ ವಯಸ್ಸಿನಲ್ಲೇ ರಂಗಕ್ಕೆ ಪಾದಾರ್ಪಣೆ ಮಾಡಿದ ವೀರಣ್ಣ ಗುಬ್ಬಿ ಚನ್ನಬಸವೇಶ್ವರ ಕಂಪನಿಯ ಆಧಾರ ಸ್ತಂಭವಾಗಿ ವೃತ್ತಿರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಮೇರು ಸಾಧಕ. ಮೂಕಿ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿದ ಅವರು ಮುಂದೆ ಟಾಕಿ ಯುಗದಲ್ಲೂ ಹಲವು ಪ್ರಯೋಗಗಳೊಂದಿಗೆ ಚಿತ್ರರಂಗಕ್ಕೆ ದುಡಿದರು. ನಟ, ನಿರ್ದೇಶಕ, ನಿರ್ಮಾಪಕ, ವಿತರಕ, ಚಿತ್ರಪ್ರದರ್ಶಕರಾಗಿ ವಿವಿಧ ವಿಭಾಗಗಳಲ್ಲಿ […]

ಆರ್‌ಎನ್‌ಜೆ – ಚಿ.ಉದಯಶಂಕರ್ – ವಿಜಯನಾರಸಿಂಹ

(ಫೋಟೊ – ಬರಹ: ಎನ್‌.ಎಸ್‌.ಶ್ರೀಧರಮೂರ್ತಿ) ಕನ್ನಡ ಚಿತ್ರಗೀತೆಗಳ ‘ರತ್ನತ್ರಯರು’ ಎಂದೇ ಕರೆಯಬಹುದಾದ ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್ ಮತ್ತು ವಿಜಯನಾರಸಿಂಹ ಮೂವರೂ ಒಟ್ಟಿಗೆ ಇರುವ ಅಪರೂಪದ ಪೋಟೋ ಇದು. ಈ ಫೋಟೊ ಸೆರೆಯಾದ ಸಂದರ್ಭ ಕೂಡ ವಿಶಿಷ್ಟವಾದದ್ದೇ. 1967ರಲ್ಲಿ ಬಿ.ಎ.ಅರಸ್ ಕುಮಾರ್ ತಮ್ಮದೇ ಪ್ರಸಿದ್ದ ನಾಟಕ ‘ಅಭಾಗಿನಿ’ಯನ್ನು ‘ಬಂಗಾರದ ಹೂವು’ ಶೀರ್ಷಿಕೆಯಡಿ ಚಿತ್ರವಾಗಿಸಲು ನಿರ್ಧರಿಸಿದರು. ಅವರಿಗೆ ಬೆಂಬಲವಾಗಿ ನಿಂತವರು ಅವರ ಬಾಲ್ಯದ ಸಹಪಾಠಿ ಚಿ.ಉದಯಶಂಕರ್. ಅವರ ನೆರವಿನಿಂದಲೇ ರಾಜ್ ಕುಮಾರ್, ಕಲ್ಪನಾ, ಶೈಲಶ್ರೀ, ಉದಯ ಕುಮಾರ್, ಬಾಲಕೃಷ್ಣ, ನರಸಿಂಹರಾಜು ಎಲ್ಲರೂ […]

ಪ್ರಗತಿ ಸ್ಟುಡಿಯೋ – ಆಯುಧ ಪೂಜೆ

ಕನ್ನಡ ಸಿನಿಮಾ ಸ್ಥಿರಚಿತ್ರ ಛಾಯಾಗ್ರಹಣದಲ್ಲಿ ‘ಪ್ರಗತಿ ಸ್ಟುಡಿಯೋ’ ಕೊಡುಗೆ ಗಮನಾರ್ಹವಾದುದು. ಬೆಂಗಳೂರು ಗಾಂಧಿನಗರದಲ್ಲಿ ಸುಮಾರು ಮೂರೂವರೆ ದಶಕಗಳ ಕಾಲ ಸ್ಟುಡಿಯೋ ಅಸ್ತಿತ್ವದಲ್ಲಿತ್ತು. ಆಗೆಲ್ಲಾ ಕನ್ನಡ ಸಿನಿಮಾರಂಗದ ಕಲಾವಿದರು ಹಾಗೂ ತಂತ್ರಜ್ಞರಿಗೆ ಸ್ಟುಡಿಯೋ ಮೀಟಿಂಗ್ ಪಾಯಿಂಟ್ ಕೂಡ ಆಗಿತ್ತು. 1975ರ ದಸರಾದಲ್ಲಿ ‘ಪ್ರಗತಿ ಸ್ಟುಡಿಯೋ’ದ ಆಯುಧಪೂಜೆ ಸಂದರ್ಭ (1975). ಸ್ಟುಡಿಯೋ ಮಾಲೀಕರಾದ ನಾಗೇಶ್ ಬಾಬ (ಚಿತ್ರನಿರ್ದೇಶಕರೂ ಹೌದು) ಮತ್ತು ಅಶ್ವತ್ಥ ನಾರಾಯಣ ಇದ್ದಾರೆ. ಅವರೊಂದಿಗಿರುವ ಹುಡುಗರು ಸಹಾಯಕರು. ಪುಟ್ಟ ಬಾಲಕ ನಾಗೇಶ್ ಬಾಬ ಅವರ ಪುತ್ರ ಆದರ್ಶ.

ರಾಜ್ – ಉಡುಪಿ ಜಯರಾಂ

ನಂದಿಬೆಟ್ಟದಲ್ಲಿ ಗೀತಪ್ರಿಯ ನಿರ್ದೇಶನ ‘ಭೂಪತಿ ರಂಗ’ ಸಿನಿಮಾದ ಹಾಡಿನ ಚಿತ್ರೀಕರಣದ ಸಂದರ್ಭ. ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರಿಗೆ ವರನಟ ರಾಜ್ ಮತ್ತು ನೃತ್ಯ ನಿರ್ದೇಶಕ ಉಡುಪಿ ಜಯರಾಂ ಪೋಸು ಕೊಟ್ಟಿದ್ದು ಹೀಗೆ. ಉಡುಪಿ ಜಯರಾಂ ಅವರು ನೃತ್ಯ ನಿರ್ದೇಶನ ಮಾಡಿದ ಮೊದಲ ಕನ್ನಡ ಸಿನಿಮಾ ‘ಭಾಗ್ಯೋದಯ’ (1956). ಕನ್ನಡದ 500ಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಕನ್ನಡದ ಜೊತೆ ತಮಿಳು, ತೆಲುಗು, ಹಿಂದಿ, ತುಳು, ಮಲಯಾಳಂ, ಹಿಂದಿ, ಸಿಂಹಳಿ ಭಾಷೆಗಳ ಚಿತ್ರಗಳೂ ಸೇರಿದಂತೆ 650ಕ್ಕೂ ಹೆಚ್ಚು […]

ಹೇಮಾವತಿ – ಪೋಸ್ಟ್‌ಮ್ಯಾನ್‌

ಸಿದ್ದಲಿಂಗಯ್ಯ ನಿರ್ದೇಶನದ ‘ಹೇಮಾವತಿ’ (1977) ಚಿತ್ರದ ಒಂದು ದೃಶ್ಯ. ಇಲ್ಲಿ ಪೋಸ್ಟ್‌ ಮ್ಯಾನ್‌ ಪಾತ್ರದಲ್ಲಿರುವವರು ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು. ಈ ಚಿತ್ರಕ್ಕೆ ಅವರು ಸ್ಥಿರಚಿತ್ರ ಛಾಯಾಗ್ರಾಹಣವನ್ನೂ ನಿರ್ವಹಿಸಿದ್ದರು. ಸಿನಿಮಾಗಳಲ್ಲಿನ ಇಂತಹ ಚಿಕ್ಕ-ಪುಟ್ಟ ಪಾತ್ರಗಳಲ್ಲಿ ಆ ಚಿತ್ರದಲ್ಲಿ ಕೆಲಸ ಮಾಡುವ ತಂತ್ರಜ್ಞರೇ ಕಾಣಿಸಿಕೊಳ್ಳುವುದು ಸಾಮಾನ್ಯ. ‘ನಿರ್ದೇಶಕ ಸಿದ್ದಲಿಂಗಯ್ಯನವರಿಗೆ ತಂತ್ರಜ್ಞರೆಂದರೆ ವಿಶೇಷ ಪ್ರೀತಿ. ಅವರು ತಮ್ಮ ಪ್ರತೀ ಸಿನಿಮಾಗಳ ಚಿಕ್ಕ ಪಾತ್ರಗಳಿಗೆ ತಂತ್ರಜ್ಞರಿಂದ ಬಣ್ಣ ಹಚ್ಚಿಸುತ್ತಿದ್ದರು’ ಎಂದು ಅಶ್ವತ್ಥರು ನೆನಪು ಮಾಡಿಕೊಳ್ಳುತ್ತಾರೆ. ಇಂದು (ಅಕ್ಟೋಬರ್ 9) […]