ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬಾಲನಟ ಕಮಲ್ ರಾಷ್ಟ್ರಪ್ರಶಸ್ತಿ ಪಡೆದು 60 ವರ್ಷ | ವೀಡಿಯೊ

Share this post

ಬಹುಭಾಷಾ ನಟ ಕಮಲ ಹಾಸನ್‌ ‘ಕಳತ್ತೂರ್ ಕಣ್ಣಮ್ಮ’ (1960) ಚಿತ್ರದ ಬಾಲನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ಆಗ ಅವರಿಗೆ ಐದು ವರ್ಷ. ಚಿತ್ರದ ಉತ್ತಮ ನಟನೆಗೆ ಪುಟಾಣಿ ಕಮಲ್‌ಗೆ ರಾಷ್ಟ್ರಪತಿ ಸ್ವರ್ಣಕಮಲದ ಗೌರವ ಲಭಿಸಿತ್ತು. 60 ವರ್ಷಗಳ ಹಿಂದೆ 1961ರ ಮಾರ್ಚ್‌ 31ರ ಇದೇ ದಿನ ದಿಲ್ಲಿಯಲ್ಲಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರಿಂದ ಕಮಲ್ ಪ್ರಶಸ್ತಿ ಸ್ವೀಕರಿಸಿದ್ದರು. ಚಿತ್ರ ಬಿಡುಗಡೆಯಾದ ಮರುವರ್ಷ (1961) ಅವರು ಪ್ರಶಸ್ತಿ ಸ್ವೀಕರಿಸಿದ್ದರು. ಮುಂದೆ ನಾಯಕನಟ – ನಿರ್ಮಾಪಕನಾಗಿ ಅವರು ನಾಲ್ಕು ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

ಸಾವಿತ್ರಿ, ಬಾಲನಟ ಕಮಲ ಹಾಸನ್‌

ಈ ಚಿತ್ರದಲ್ಲಿ ಬಾಲಕನ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಇದೆ. ಅದಾಗಲೇ ಪಾತ್ರಕ್ಕೆ ಡೈಸಿ ರಾಣಿ ಹೆಸರಿನ ಬಾಲನಟಿ ಆಯ್ಕೆಯಾಗಿದ್ದರು. ಕಮಲ ಹಾಸನ್ ಕುಟುಂಬದ ಆಪ್ತರೊಬ್ಬರು ಚಿತ್ರದ ನಿರ್ಮಾಪಕ ಎ.ವಿ.ಮೇಯಪ್ಪನ್ ಅವರಿಗೆ ಚಿರಪರಿಚಿತರು. ಚಿತ್ರೀಕರಣ ಆರಂಭವಾಗುವ ಹಂತದಲ್ಲಿ ನಿರ್ಮಾಪಕರಿಗೆ ಅವರು ಪುಟಾಣಿ ಕಮಲ ಹಾಸನ್‌ರನ್ನು ಪರಿಚಯಿಸಿದ್ದರು. ಅಂತಿಮವಾಗಿ ಬಾಲನಟನ ಪಾತ್ರಕ್ಕೆ ಕಮಲ್‌ ಆಯ್ಕೆಯಾಗಿ ಎಲ್ಲರೂ ಮೆಚ್ಚುವ ಅಭಿನಯ ನೀಡಿದರು. ಈ ಯಶಸ್ವೀ ತಮಿಳು ಸಿನಿಮಾ ತೆಲುಗು, ಹಿಂದಿ ಮತ್ತು ಸಿನ್ಹಳ ಭಾಷೆಗೆ ರೀಮೇಕಾಗಿದೆ.

(ಮಾಹಿತಿ ಕೃಪೆ: ವೆಂಕಟೇಶ್ ನಾರಾಯಣಸ್ವಾಮಿ)

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ