ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ರಜನೀಕಾಂತ್ ಕನ್ನಡ ಸಿನಿಮಾಗಳು

Share this post

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಜನೀಕಾಂತ್‌ ಓದು ಮುಗಿಸಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸಿದ್ದು ಕೂಡ ಇಲ್ಲಿಯೇ. ಮುಂದೆ ಮದರಾಸಿನ ಅಭಿನಯದ ಶಾಲೆಯಲ್ಲಿ ತರಬೇತಿ ಪಡೆದು ಬೆಳ್ಳಿತೆರೆ ಪ್ರವೇಶಿಸಿದರು. ಪ್ರತಿಭೆ ಜೊತೆ ಅದೃಷ್ಟವೂ ಅವರಿಗೆ ಜೊತೆಯಾಗಿ ದೊಡ್ಡ ತಾರೆಯಾಗಿ ಬೆಳೆದರು. ನಟನಾ ಬದುಕಿನ ಆರಂಭದ ದಿನಗಳಲ್ಲಿ ಕನ್ನಡ ಚಿತ್ರಗಳಲ್ಲೂ ಅವರು ನಟಿಸಿದರು. ಅದೇಕೋ ಕನ್ನಡ ಬೆಳ್ಳಿತೆರೆಯಲ್ಲಿ ರಜನಿಗೆ ಗೆಲುವು ಸಿಗಲಿಲ್ಲ.

ಅವರು ಕೆಲವು ಸಿನಿಮಾಗಳು ಕಥಾವಸ್ತುವಿನ ಕಾರಣಕ್ಕೆ ಗಮನ ಸೆಳೆದವಾದರೂ ಹಣಗಳಿಕೆಯಲ್ಲಿ ಹಿಂದುಳಿದವು. 1976ರಿಂದ 81ರವರೆಗೆ ಅವರು ಕನ್ನಡದ ಹನ್ನೊಂದು ಸಿನಿಮಾಗಳಲ್ಲಿ ಅಭಿನಯಿಸಿದರು. ಪುಟ್ಟಣ್ಣನವರ `ಕಥಾಸಂಗಮ’ ಚಿತ್ರದಲ್ಲಿನ ಅವರ ನೆಗೆಟಿವ್ ಶೇಡ್ ಪಾತ್ರ ಕನ್ನಡಿಗರಿಗೆ ನೆನಪಾಗದಿರದು. ಇನ್ನು `ಸಹೋದರರ ಸವಾಲ್’, `ಕಿಲಾಡಿ ಕಿಟ್ಟು’ ಚಿತ್ರಗಳಲ್ಲಿ `ಸ್ಟೈಲ್‍ಕಿಂಗ್’ಗೆ ದೊಡ್ಡ ಮನ್ನಣೆ ಸಿಗಲಿಲ್ಲ. ಗುರು ಕೆ.ಬಾಲಚಂದರ್ ನಿರ್ದೇಶನದಲ್ಲಿ ತೆರೆಕಂಡ `ತಪ್ಪಿದ ತಾಳ’ ಒಂದೊಳ್ಳೆಯ ಪ್ರಯೋಗವಾಗಿ ವಿಶ್ಲೇಷಕರನ್ನು ಸೆಳೆಯಿತು. ಒಂದೊಮ್ಮೆ ಕನ್ನಡ ಸಿನಿಮಾಗಳು ಯಶಸ್ಸು ತಂದುಕೊಟ್ಟಿದ್ದರೆ ರಜನಿ ಇಲ್ಲಿಯೇ ಉಳಿಯುತ್ತಿದ್ದರೇನೋ!?

ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಕಥಾಸಂಗಮ’ ಚಿತ್ರದಲ್ಲಿ ರಜನೀಕಾಂತ್, ಉಮೇಶ್‌, ಆರತಿ

ರಜನೀ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ:

ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಕಥಾಸಂಗಮ’ (1976)

ಬಾಲನ್ ನಿರ್ದೇಶನದ ‘ಬಾಳು ಜೇನು’ (1976)

ಜೋಸೈಮನ್ ನಿರ್ದೇಶನದ ‘ಒಂದು ಪ್ರೇಮದ ಕಥೆ’ (1977)

ಕೆ.ಎಸ್.ಆರ್.ದಾಸ್ ನಿರ್ದೇಶನದ ‘ಸಹೋದರರ ಸವಾಲ್’ (1977)

ಎಸ್.ಕೆ.ಎ. ಚಾರಿ ನಿರ್ದೇಶನದ ‘ಕುಂಕುಮ ರಕ್ಷೆ’ (1977)

ಸಿ.ವಿ.ರಾಜೇಂದ್ರನ್ ನಿರ್ದೇಶನದ ‘ಗಲಾಟೆ ಸಂಸಾರ’ (1977)

ಕೆ.ಎಸ್.ಆರ್.ದಾಸ್ ನಿರ್ದೇಶನದ ‘ಕಿಲಾಡಿ ಕಿಟ್ಟು’ (1978)

ಪೀಕೆಟಿ ಶಿವರಾಂ ನಿರ್ದೇಶನದ ‘ಮಾತು ತಪ್ಪದ ಮಗ’ (1978)

ಕೆ.ಬಾಲಚಂದರ್ ನಿರ್ದೇಶನದ ‘ತಪ್ಪಿದ ತಾಳ’ (1978)

ಎಸ್.ಪಿ.ಮುತ್ತುರಾಮನ್ ನಿರ್ದೇಶನದ ‘ಪ್ರಿಯಾ’ (1979)

ಸಿ.ವಿ.ರಾಜೇಂದ್ರನ್ ನಿರ್ದೇಶನದ ‘ಘರ್ಜನೆ’ (1981)

‘ಸಹೋದರರ ಸವಾಲ್‌’ ಚಿತ್ರದಲ್ಲಿ ರಜನೀಕಾಂತ್‌, ಭವಾನಿ

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ